ನಕಲಿ ದಾಖಲೆ ನೀಡಿ 66 ಲಕ್ಷ ರೂ ಸಾಲ ಪಡೆದು ಎಸ್ ಬಿ ಐ ಗೆ ವಂಚನೆ!

ಮೈಸೂರು: ನಕಲಿ ದಾಖಲೆಗಳ ಮೂಲಕ ಎಸ್‌ಬಿಐ ಸಿಬ್ಬಂದಿಯನ್ನೇ ದಾರಿ ತಪ್ಪಿಸಿದ ಏಳು ಮಂದಿ ಸುಮಾರು 66 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಎನ್‌ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ವಂಚಿಸಿರುವ ಬೋಗಾದಿಯ ನಾಗೇಶ್, ಕೆ ಜಿ ಕೊಪ್ಪಲಿನ ಮಂಜಣ್ಣ, ಗಾಂಧಿನಗರದ ಸಣ್ಣಪ್ಪ, ಬೋಗಾದಿಯ ನವೀನ್‌ಕುಮಾರ್, ಜಯನಗರದ ದೀಪಾ, ಕ್ಯಾತಮಾರನಹಳ್ಳಿಯ ಶ್ರೀನಿವಾಸ್ ಹಾಗೂ ಮಂಡಿ ಮೊಹಲ್ಲಾದ ಮಂಜುನಾಥ್ ಎಂಬವರ ವಿರುದ್ಧ ಬ್ಯಾಂಕ್‌ನ ವ್ಯವಸ್ಥಾಪಕಿ ರಮ್ಯ ಎಂಬವರು ದೂರು ನೀಡಿದ್ದಾರೆ.

ಆರೋಪಿಗಳು ಸಾಲ ಪಡೆಯುವ ಉದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಎಸ್‌ಬಿಐ ಬ್ಯಾಂಕ್‌ಗೆ ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಆಧಾರದ ಮೇಲೆ ಅವರುಗಳಿಗೆ ಸಾಲ ನಿಡಲಾಗಿದೆ.ನಾಗೇಶ್ ಎಂಬವರು ೯.೪೦ ಲಕ್ಷ ರೂ., ಮಂಜಣ್ಣ ಎಂಬವರು ೯.೫೫ ಲಕ್ಷ ರೂ., ಸಣ್ಣಪ್ಪ ಅವರು ೧೦ ಲಕ್ಷ ರೂ., ನವೀನ್‌ಕುಮಾರ್ ೯,೨೫ ಲಕ್ಷ ರೂ., ದೀಪಾ ೯.೨೫ ಲಕ್ಷ ರೂ., ಶ್ರೀನಿವಾಸ್ ೯.೨೦ ಲಕ್ಷ ರೂ., ಮಂಜುನಾಥ್ ಎಂಬವರು ೯.೩೦ ಲಕ್ಷ ರೂ. ಸಾಲ ಪಡೆದಿದ್ದಾರೆ.

ನಂತರ ಅವರುಗಳು ಸಕಾಲಕ್ಕೆ ಕಂತನ್ನು ಪಾವತಿಸಿಲ್ಲ ಎನ್ನಲಾಗಿದೆ. ಇದೇ ವೇಳೆ ಅವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕೆಲವು ನಕಲಿ ಎಂಬುದು ಗೊತ್ತಾಗಿದೆ. ಹಾಗಾಗಿ ರಮ್ಯ ಅವರು ಏಳು ಮಂದಿ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಕಲಿ ದಾಖಲೆ ನೀಡಿ 66 ಲಕ್ಷ ರೂ ಸಾಲ ಪಡೆದು ಎಸ್ ಬಿ ಐ ಗೆ ವಂಚನೆ! Read More

ಮೈಸೂರು ಇಂಜಿನಿಯರಿಂಗ್ ಕಾಲೇಜಿಗೆ ಎಸ್‌ಬಿ ಐ ನಿಂದ‌ ನೀರಿನ ಶುದ್ದೀಕರಣ ಘಟಕ

ಮೈಸೂರು: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಡಿಯುವ ನೀರಿನ ಶುದ್ದೀಕರಣ ಘಟಕಗಳನ್ನು ಹಸ್ತಾಂತರಿಸಲಾಯಿತು.

ಬ್ಯಾಂಕಿನ ಸಾಮಾಜಿಕ ಜವಾಬ್ದಾರಿ ಚಟುವಟಿಕೆ ಅಡಿಯಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು.

ಮೈಸೂರು ಇಂಜಿನಿಯರಿಂಗ್ ಕಾಲೇಜು ಹಾಗೂ ಮಾನಸ ಗಂಗೋತ್ರಿ ಗ್ರಂಥಾಲಯಕ್ಕೆ ಮತ್ತು ಸ್ನಾತಕೋತ್ತರ ಪದವಿ ಹುಡುಗರ ಹಾಸ್ಟೆಲ್‌ಗಳಿಗೆ ಒಟ್ಟು ಮೂರು ನೀರು ಸುದ್ದಿಕರಣ ಘಟಕಗಳನ್ನು ಅಳವಡಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಲೋಕನಾಥ್ ಎನ್ ಕೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ ಮೈಸೂರು ವಲಯ ಕಛೇರಿಯ ಉಪ ಮಹಾ ಪ್ರಬಂಧಕರಾದ ಅರುಣ್ ಕುಮಾರ್ ಪಾಣಿಗ್ರಹಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಪಿ ವಿ ಎಸ್ ರಂಗನಾಥ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಎಮ್ ಎಸ್ ಗೋವಿಂದ ಗೌಡ ಮತ್ತು ರೇಖಾ ಕೆ ಎಸ್ ಹಣಕಾಸು ಅಧಿಕಾರಿ ಮತ್ತು ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕರಾದ ಸುಧಾ ಕೋಟೇಶ್ವರ, ನೇತ್ರಾವತಿ ಮತ್ತಿತರರು ಹಾಜರಿದ್ದರು.

ಮೈಸೂರು ಇಂಜಿನಿಯರಿಂಗ್ ಕಾಲೇಜಿಗೆ ಎಸ್‌ಬಿ ಐ ನಿಂದ‌ ನೀರಿನ ಶುದ್ದೀಕರಣ ಘಟಕ Read More