ಜನವರಿ 11ರಂದು‌ ಎಸ್ ಎಮ್ ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಜನವರಿ 11ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.

ವಿಜಯನಗರದ ವಿದ್ಯಾವರ್ಥಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಎಸ್ ಚೆನ್ನಯ್ಯ ಸಭಾಂಗಣದಲ್ಲಿ‌ ಸಂತಾಪ ಸೂಚಕ ಸಭೆ ನಡೆಯಲಿದೆ.

ಮೈಸೂರು ಮಹಾನಗರ ಮತ್ತು ಜಿಲ್ಲಾ ನಾಗರಿಕರ ಸಮಿತಿ ಹಾಗೂ ಮಂಡ್ಯ ಜಿಲ್ಲಾ ಬಳಗ ಮೈಸೂರು ವತಿಯಿಂದ ಈ ಸಭೆ ಹಮ್ಮಿಕೊಳ್ಳಲಾಗಿದೆ.

ಇಂದು ಸಂತಾಪ ಸೂಚನ ಸಭೆಯ ಪೂರ್ವಭಾವಿ ಸಭೆಯನ್ನು ಟಿ ಕೆ ಲೇಔಟ್ ನಲ್ಲಿರುವ ಮೈಸೂರು ಮಹಾನಗರ ಮತ್ತು ಜಿಲ್ಲಾ ನಾಗರಿಕ ಸಮಿತಿಯ ಕಚೇರಿಯಲ್ಲಿ
ನಡೆಸಲಾಯಿತು.

ಮೊದಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿ ಆನಂತರ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಪ್ರೊಫೆಸರ್ ಕಾಳೆ ಚೆನ್ನೇಗೌಡ, ಪ್ರೊಫೆಸರ್ ಚಂದ್ರಶೇಖರ್ ಗೌಡ, ಜಯರಾಮ್ ಕಿಲ್ಲಾರ,ಮರೆತಿಬ್ಬೇಗೌಡ, ಲಯನ್ ದೇವೇಗೌಡ, ಹೇಮಾ ನಂದೀಶ್, ಕೆ ವಿ ಶ್ರೀಧರ್, ಕೆ ವಿ ಮಲ್ಲೇಶ್,ಒಕ್ಕಲಿಗರ ಸಂಘದ ನಿರ್ದೇಶಕರಾದ ಮಂಜೇಗೌಡ, ಸತೀಶ್ ಗೌಡ ಸೇರಿದಂತೆ ನೂರಾರು ಮುಖಂಡರು ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜನವರಿ 11ರಂದು‌ ಎಸ್ ಎಮ್ ಕೃಷ್ಣ ಅವರಿಗೆ ಶ್ರದ್ಧಾಂಜಲಿ Read More

ಎಸ್.‌ಎಂ ಕೃಷ್ಣ ಅವರು ಯುವ ರಾಜಕಾರಣಿಗಳಿಗೆ ಮಾದರಿ- ಅಯೂಬ್ ಖಾನ್

ಮೈಸೂರು: ಹಿರಿಯ ರಾಜಕೀಯ ಮುತ್ಸದ್ದಿ ಎಸ್.‌ಎಂ ಕೃಷ್ಣ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.‌ಎಂ ಕೃಷ್ಣ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರ ನಿಧನಕ್ಕೆ ಪಿ‌ ಕಾಳಿಂಗರಾವ್ ಗಾನಮಂಟಪ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಅಯೂಬ್ ಖಾನ್ ಮಾತನಾಡಿದರು.

2004ನೇ ಇಸವಿಯಲ್ಲಿ ನಾನು ಮೈಸೂರಿನ ಉಪ ಮಹಾಪೌರ ನಾಗಲು ಮುಖ್ಯಮಂತ್ರಿಯಾಗಿದ್ದ ಎಸ್
ಎಂ ಕೃಷ್ಣ ಅವರು ನನ್ನ ನಾಯಕತ್ವವನ್ನು ಗುರುತಿಸಿ ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ಮೈಸೂರಿನಲ್ಲಿ ಹೊರವರ್ತುಲ ರಸ್ತೆ, ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ಅಭಿವೃದ್ಧಿ, ಮೈಸೂರಿನ ಇನ್ಪೋಸಿಸ್ ಸೇರಿದಂತೆ ಐಟಿ ಬಿಟಿ ಕ್ಷೇತ್ರಕ್ಕೆ ಪ್ರೋತ್ಸಾಹ, ಚಾಮುಂಡಿ ಬೆಟ್ಟ, ನಂಜನಗೂಡು ದೇವಸ್ಥಾನ ಅಭಿವೃದ್ದಿ, ಸಹಾಕರಿ ಕ್ಷೇತ್ರದಲ್ಲಿ ಯಶಸ್ವಿನಿ ಯೋಜನೆ, ಆರ್ಥಿಕವಾಗಿ ನೆರವಾಗಲು ಸ್ತ್ರಿಶಕ್ತಿ ಸಂಘಗಳ ಸ್ಥಾಪನೆ,ಬರಗಾಲದಲ್ಲಿ ಬಿತ್ತನೆ ಮೋಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು.

ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ, ವಿಧಾನ ಸಭಾಧ್ಯಕ್ಷರಾಗಿ, ಕೇಂದ್ರದ ಮಾಜಿ ಸಚಿವರಾಗಿ ಅಜಾತಶತ್ರು ಎನ್ನಿಸಿಕೊಂಡು ಮೌಲ್ಯಯುತ ರಾಜಕಾರಣದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ ಎ ಇಂದಿನ‌ಯುವ ರಾಜಕಾರಣಿಗಳಿಗೆ ಅವರು ಆದರ್ಶವಾಗಿದ್ದಾರೆ ಎಂದು ಆಯೂಬ್ ಖಾನ್ ಹೇಳಿದರು.

ಮಾಜಿ ಶಾಸಕರು ಮತ್ತು ಹಾಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರು ಸಾಕಷ್ಟು ಸಾಮಜಮುಖಿ ಕೆಲಸಗಳನ್ನ ಮಾಡಿ ಹಲವಾರು ಶ್ರಮಿಕ ವರ್ಗದವರನ್ನ ಮುಖ್ಯವಾಹಿಮಿಗೆ ತಂದಿದ್ದಾರೆ ಎಂದು ತಿಳಿಸಿದರು ‌

ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಫೈರೋಜ್ ಖಾನ್, ರಘುರಾಜೇ ಅರಸ್, ಶೌಕತ್ ಅಲಿಖಾನ್, ಜಿಪಿಎ ಮಲ್ಲಿಕಾರ್ಜುನ, ರಂಗಸ್ವಾಮಿ ಪಾಪು, ಪದ್ಮನಾಭನ್ ಗುಂಡಾ, ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಮಹೇಂದ್ರ ಕಾಗಿನೆಲೆ, ಸುಬ್ರಹ್ಮಣ್ಯ, ಹರೀಶ್ ಮೊಗ್ಗಣ್ಣಚಾರ್, ಪ್ರವೀಣ್, ಜಯಲಕ್ಷ್ಮಿ, ವನಜಾಕ್ಷಿ, ಎಸ್. ಪಿ ಸಿದ್ದರಾಜೆ ಅರಸ್, ನಾಗೇಶ್, ಗುರುರಾಜ್ , ಈಶ್ವರ್ ಚಕ್ಕಡಿ ಮತ್ತಿತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಸ್.‌ಎಂ ಕೃಷ್ಣ ಅವರು ಯುವ ರಾಜಕಾರಣಿಗಳಿಗೆ ಮಾದರಿ- ಅಯೂಬ್ ಖಾನ್ Read More