ರಾಮಕೃಷ್ಣ ನಗರದಲ್ಲಿ ಮನೆ ಮನೆಗೆ ಸ್ವದೇಶಿ ಅಭಿಯಾನ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಬಿಜೆಪಿ ವತಿಯಿಂದ ರಾಮಕೃಷ್ಣ ನಗರದ ಐ ಬ್ಲಾಕಿನಲ್ಲಿ ಮನೆ ಮನೆಗೂ ಸ್ವದೇಶಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಪ್ರತಿ ಮನೆಗೂ ಸ್ವದೇಶಿ ಭಿತ್ತಿಪತ್ರ ಅಂಟಿಸಿ ಹಾಗೂ ಆತ್ಮನಿರ್ಭರ ಭಾರತದ ಕರಪತ್ರವನ್ನು ನೀಡಿ ಸ್ವದೇಶಿ ವಸ್ತುಗಳನ್ನು ಬಳಸಿ ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಹಕರಿಸುವಂತೆ ನಾಗರೀಕರನ್ನು ಕೋರಿ ಜಾಗೃತಿ ಮೂಡಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಶಿವು ಪಟೇಲ್ ಬಿ.ಸಿ. ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ವಾರ್ಡ್ ಅಧ್ಯಕ್ಷರಾದ ಬಸವಣ್ಣ, ಪ್ರಮುಖರಾದ ಬಸವಲಿಂಗಪ್ಪ, ಮಂಡಲದ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಮಹೇಶ್ ಕುಮಾರ್ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಎ. ರಾಘವೇಂದ್ರ ಸೇರಿದಂತೆ ಸ್ಥಳೀಯರು ಅಭಿಯಾನದಲ್ಲಿ ಭಾಗವಹಿಸಿದ್ದರು.

ರಾಮಕೃಷ್ಣ ನಗರದಲ್ಲಿ ಮನೆ ಮನೆಗೆ ಸ್ವದೇಶಿ ಅಭಿಯಾನ Read More

ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ದೇಶದಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅದೇ ರೀತಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣನಗರದ ಹೆಚ್ ಬ್ಲಾಕ್ ನಲ್ಲಿ ಉದ್ಯಾನವನವನ್ನು ಸ್ವಚ್ಛಗೊಳಿಸುವ ಎರಡು ದಿನದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಮುಂಜಾನೆ ಒಟ್ಟಾಗಿ ಸೇರಿ ಬಿಜೆಪಿ ಕಾರ್ಯಕರ್ತರು ಉದ್ಯಾನವನದಲ್ಲಿ ಬೆಳೆದಿದ್ದ ಗಿಡ-ಗಂಟಿಗಳು, ನಡೆದಾಡುವ ಪಥದಲ್ಲಿ ಬೆಳೆದಿದ್ದ ಕಳೆ ಸೇರಿದಂತೆ ಕಸ,ಕಡ್ಡಿ ತೆಗೆದು ಸ್ವಚ್ಛ ಮಾಡಿ ಶ್ರಮದಾನ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಸ್ವಚ್ಛತಾ ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ ಸ್ವಾಮಿ, ಸಹ-ಸಂಚಾಲಕರಾದ ವಿಜಯ ಮಂಜುನಾಥ್, ಮಂಡಲದ ಉಪಾಧ್ಯಕ್ಷರಾದ ಬಿ.ಸಿ. ಶಶಿಕಾಂತ್, ಶಿವು ಪಟೇಲ್, ಎಸ್. ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎಸ್. ತ್ಯಾಗರಾಜ್, ಮುಖಂಡರಾದ ರವಿ ನಾಯಕಂಡ, ದೇವರಾಜ್, ರಾಘವೇಂದ್ರ, ಸೋಮಣ್ಣ, ರಾಮಕೃಷ್ಣಪ್ಪ, ಚಂದನ್ ಗೌಡ, ಸೂರ್ಯ, ಪ್ರಜ್ವಲ್ ಗೌಡ, ಪುಟ್ಟಮಣ್ಣಿ, ಮಂಜುಳಾ, ವಸುಮತಿ, ರಾಜನಾಯಕ್, ಲೋಕೇಶ್ ನಾಯಕ್, ಲೋಕೇಶ್ ರೆಡ್ಡಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ Read More

ಗುರುಪೂರ್ಣಿಮೆ:ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ:ಶಾಸಕ‌ ಜಿಟಿಡಿ ಭಾಗಿ

ಮೈಸೂರು: ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್ ನಲ್ಲಿರುವ ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ನಿಮಿತ್ತ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ವೇದಘೋಷಗಳೊಂದಿಗೆ ಜಲಾಭಿಷೇಕ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಶಾಸಕರಾದ ಜಿ ಟಿ ದೇವೇಗೌಡರು ದೇವಸ್ಥಾನಕ್ಕೆ ಭೇಟಿ ನೀಡಿ, ಸಾಯಿಬಾಬ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗುರುವಿನ ಅನುಗ್ರಹಕ್ಕೆ ಒಳಗಾಗಿರುತ್ತಾರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿದೆ, ಗುರುಗಳ ಆಶೀರ್ವಾದ ಮಾರ್ಗದರ್ಶನ, ಆಶೀರ್ವಾದ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ, ಎಲ್ಲರೂ ಗುರುವಿನ ಪ್ರೀತಿಗೆ ಪಾತ್ರರಾಗಿ, ಅವರ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ಹೇಳಿದರು.

ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಭಕ್ತರು ಕುಟುಂಬ ಸಮೇತ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು, ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು,

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಾಮಯ್ಯ, ಗೌರವ ಅಧ್ಯಕ್ಷರಾದ ಡಾಕ್ಟರ್ ಸೀತಾ ಲಕ್ಷ್ಮಿ,ಖಜಾಂಚಿ ಗಂಗಾಧರ್,ಮಹದೇವ್ ಗೌಡ,ಶ್ಯಾಮ್,ಮಿರ್ಲೆ ಫಣೀಶ್ ಮತ್ತಿತರರು ಹಾಜರಿದ್ದರು.

ಗುರುಪೂರ್ಣಿಮೆ:ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ:ಶಾಸಕ‌ ಜಿಟಿಡಿ ಭಾಗಿ Read More

ಶ್ರೀ ರಾಮಕೃಷ್ಣ ಪರಮಹಂಸರು ಪ್ರಸಿದ್ಧ ಸಂತರು:ಇಳೈ ಆಳ್ವಾರ್ ಸ್ವಾಮೀಜಿ

ಮೈಸೂರು: ನಮ್ಮ ದೇಶದ ಪ್ರಸಿದ್ಧ ಸಂತರು, ಮಹಾತಾಯಿ ಆರಾಧಕರು, ಅದ್ವೈತ,ವೇದಾಂತ ಸಿದ್ಧಾಂತವನ್ನು ಎಲ್ಲ ಧರ್ಮಗಳ ಗುರಿಗಳು ಒಂದೇ ಎಂದು ಸಾರಿದವರು ಶ್ರೀ ರಾಮಕೃಷ್ಣ ಪರಮಹಂಸರು
ಎಂದು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.

ನಗರದ ರಾಮಕೃಷ್ಣ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ಭಾರತದ ಜೇಷ್ಠ ಸಂತ ರಾಮಕೃಷ್ಣ ಪರಮಹಂಸರ ಜಯಂತಿ ಅಂಗವಾಗಿ
ರಾಮಕೃಷ್ಣ ಪರಮಹಂಸ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಿ ಮಾತನಾಡಿದ ಅವರು,ಪರಮಹಂಸರ ಜೀವನ ಮತ್ತು ಬೋಧನೆಗಳು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳ ಮೇಲೆ ಅಪಾರವಾದ ಪ್ರಭಾವ ಬೀರಿವೆ ಎಂದು ಹೇಳಿದರು.

ಆಧ್ಯಾತ್ಮಿಕ ಲೋಕದಲ್ಲಿ ತನ್ನನ್ನು ತಾನೇ ಪರೀಕ್ಷೆಗೊಳಪಡಿಸಿಕೊಂಡು ಹಿಂದು ಧರ್ಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದವರು ಶ್ರೀ ಸ್ವಾಮಿ ವಿವೇಕಾನಂದರು. ಅಂತಹವರಿಗೆ ಗುರುವರ್ಯರಾಗಿದ್ದರು ಶ್ರೀ ರಾಮಕೃಷ್ಣ ಪರಮಹಂಸರು ಎಂದು ಬಣ್ಣಿಸಿದರು.

ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು,ಆಗ ಈ ಮೂವರು ಮಹನೀಯರ ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ಇಳೈ ಆಳ್ವಾರ್ ಸ್ವಾಮೀಜಿ ತಿಳಿಸಿದರು

ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್,ಜೀವದ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಕಾರ್ಯದರ್ಶಿ ಮಂಜುಳಾ, ಆರ್ ಸೋಮಶೇಖರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,ಸೋಮಶೇಖರ್,ಸಿದ್ದೇಶ್,ವೈದ್ಯರಾದ ದೇವೇಗೌಡ, ವಿನೋದ್, ಕಡಕೋಳ ಜಗದೀಶ್, ರಾಘವೇಂದ್ರ, ಶಿವು, ಮಿರ್ಲೇ ಪನೀಶ್, ಸುಚಿಂದ್ರ, ಸಂಪತ್, ಭಾರದ್ವಾಜ್, ರಾಜಗೋಪಾಲ್, ದುರ್ಗಾ ಪ್ರಸಾದ್ ಮತ್ತಿತರರು ಹಾಜರಿದ್ದರು.

ಶ್ರೀ ರಾಮಕೃಷ್ಣ ಪರಮಹಂಸರು ಪ್ರಸಿದ್ಧ ಸಂತರು:ಇಳೈ ಆಳ್ವಾರ್ ಸ್ವಾಮೀಜಿ Read More