ಪುಟ್ಟಣ್ಣ ಕಣಗಾಲ್ ಮನೆ ಸ್ಮಾರಕವಾಗಲಿ- ರಘು ಕೌಟಿಲ್ಯ

ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಸ್ ಆರ್ ಪುಟ್ಟಣ್ಣ ಕಣಗಾಲ್ ಜನ್ಮದಿನೋತ್ಸವವನ್ನು ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ವೃತ್ತದಲ್ಲಿ
ಪುಟ್ಟಣ್ಣ ನೆನಪಿನoಗಳ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರಾದ ಆರ್ ರಘು ಕೌಟಿಲ್ಯ, ಪೌರಾಣಿಕ ನಾಟಕಗಳು ಸಂಗೀತ ಕಾರ್ಯಕ್ರಮಗಳಿಗೆ ಅತಿ ಹೆಚ್ಚು ಪ್ರೋತ್ಸಾಹ ಜನಮನ್ನಣೆಯಿದ್ದ ಕಾಲಘಟ್ಟದಲ್ಲಿ ಕೌಟುಂಬಿಕ ಚಿತ್ರಗಳು ಮತ್ತು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನ ಸರಿಸಾಟಿಯಾಗಿ ನಿರ್ದೇಶಿಸಿ 3ದಿನಗಳ ಮುಂಗಡವಾಗಿ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಚಿತ್ರಮಂದಿರಕ್ಕೆ ಕಲಾಪ್ರೇಕ್ಷಕರನ್ನ ಆಕರ್ಷಿಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಚಿತ್ರಗಳು ಎಂದು ಬಣ್ಣಿಸಿದರು.

ನಾಗರಹಾವು ಚಿತ್ರದಲ್ಲಿ ಬರುವ ಪಾತ್ರಗಳು ಒನಕೆ ಒಬ್ಬವ್ವ ಇವತ್ತಿಗೂ ಯುವಪೀಳಿಗೆಯಲ್ಲಿ ದೇಶಪ್ರೇಮವನ್ನ ಹೆಚ್ಚಿಸುತ್ತಿದೆ, ಚಾಮಯ್ಯ ಮೇಷ್ಟ್ರು ರಾಮಾಚಾರಿ ಪಾತ್ರಗಳು ಗುರುಶಿಷ್ಯನ ಭಾಂದವ್ಯ ಗೌರವವನ್ನ ಹೆಚ್ಚಿಸುತ್ತದೆ, ಸಮಾಜದಲ್ಲಿ ವಸ್ತುಸ್ಥಿತಿಯನ್ನ ತೋರಿಸಿ ಜನರನ್ನ ಎಚ್ಚರಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು.

ಚಿತ್ರದುರ್ಗದ ಕಲ್ಲಿನ ಕೋಟೆ, ಕನ್ಯಾಕುಮಾರಿ ವೀವೇಕ ಸ್ಮಾರಕ, ಕೊಡಗಿನ ಕಾವೇರಿ, ಶ್ರೀ ಚಾಮುಂಡೇಶ್ವರಿ, ಮೈಸೂರು ದಸರಾ ಸೇರಿದಂತೆ ಪ್ರತಿಯೊಂದು ಚಿತ್ರದ ಹಾಡುಗಳು ಸಹ ಪ್ರವಾಸಿ ತಾಣದ ಜನಪ್ರಿಯತೆ ತಂದುಕೊಟ್ಟಿತು.

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗುವ ಸಂಧರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನ ನಾಮಕರಣ ಮಾಡಿ ಸ್ಮರಿಸಬೇಕು ಮತ್ತು ಪಿರಿಯಾಪಟ್ಟಣದ ಕಣಗಾಲ್ ನಲ್ಲಿರುವ ಅವರ ಮನೆಯನ್ನ ಸ್ಮಾರಕವಾಗಿ ಉಳಿಸಿಕೊಳ್ಳಬೇಕು ಎಂದು ರಘು ಕೌಟಿಲ್ಯ ಒತ್ತಾಯಿಸಿದರು.

ಹಿರಿಯ ಸಮಾಜಸೇವಕ ಡಾ.‌ಕೆ ರಘುರಾಂ ವಾಜಪೇಯಿ ಮಾತನಾಡಿ
ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ಅವರ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದರು.

ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಅನೇಕರು ಅತ್ಯುತ್ತಮ ನಟರಾಗಿ ಹೊಮ್ಮಿದರು, ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬಪ್ರಧಾನವಾಗಿದ್ದ್ದವು, ಹಿಂದೂಸ್ಥಾನವೂ ಎಂದು ಮರೆಯದ ಭಾರತರತ್ನವೂ ನೀನಾಗು ಗೀತೆ ಸಹಸ್ರಾರು ಯುವಕರನ್ನ ವಿವಿಧಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಪ್ರೇರೇಪಿಸಿತು ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವರಹಳ್ಳಿ ಎಂ ರಾಮಕೃಷ್ಣ,ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ವಿನಯ್ ಕಣಗಾಲ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ರಂಗನಾಥ್, ಧರ್ಮೇಂದ್ರ, ಸುಚೀಂದ್ರ,ಕಲಾವಿದರಾದ ನಾಗೇಂದ್ರ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಪುಟ್ಟಣ್ಣ ಕಣಗಾಲ್ ಮನೆ ಸ್ಮಾರಕವಾಗಲಿ- ರಘು ಕೌಟಿಲ್ಯ Read More

ಅರ್ಥಪೂರ್ಣ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ

ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರೀಯ ಪ್ರಶಸ್ತಿಗಳ ವಿಜೇತ ಪುಟ್ಟಣ್ಣ ಕಣಗಾಲ್ ಅವರ 91ನೇ ಜನ್ಮದಿನೋತ್ಸವದ ಅಂಗವಾಗಿ ಪರಿವರ್ತನಂ ಟ್ರಸ್ಟ್ ಹಮ್ಮಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಪುಟ್ಟಣ್ಣ ಕಣಗಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು,

ಈ‌ ವೇಳೆ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, ಪುಟ್ಟಣ್ಣ ಕಣಗಾಲರ ಚಿತ್ರಗಳು ಕುಟುಂಬ ಪ್ರಧಾನವಾದವು, ಸಮಾಜಿಕ ಸಂದೇಶದ ಜೊತೆಯಲ್ಲೆ ಅವರ ನಿರ್ದೇಶನದಲ್ಲಿ ಮಹಿಳಾ ಪ್ರಧಾನಚಿತ್ರಗಳು, ಮೈಸೂರು ದಸರಾ, ಕೊಡಗಿನ ಕಾವೇರಿ, ಕನ್ಯಾಕುಮಾರಿ, ಮಾನಸ ಸರೋವರ, ಚಿತ್ರದುರ್ಗದ ಕಲ್ಲಿನ ಕೋಟೆ, ಸೇರಿದಂತೆ ಹಲಾವರು ಇತಿಹಾಸ ಬಿಂಬಿಸುವ ಸ್ಥಳಗಳನ್ನ ಜನರಿಗೆ ಪ್ರಚಾರಪಡಿಸುತ್ತಿದ್ದರು ಎಂದು ಹೇಳಿದರು.

ಸಮಾಜಸೇವಕ ಕೆ. ರಘುರಂ ವಾಜಪೇಯಿ ಅವರು ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಬಿ.ಆರ್ ಪಂತಲು ಅವರೊಂದಿಗೆ ಚಿತ್ರನಿರ್ದೇಶನದಲ್ಲಿ ಕೆಲಸ ಮಾಡಿದ ಕಣಗಾಲ್ ಗ್ರಾಮದ ಎಸ್.ಆರ್ ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಚಿತ್ರವನ್ನು ಹೆಚ್ಚಾಗಿ ನಿರ್ದೇಶಿಸಿದರು ಎಂದು ತಿಳಿಸಿದರು.

ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಕಲ್ಪನಾ, ಆರತಿ, ವಜ್ರಮುನಿ, ಶ್ರೀನಾಥ್ ಸೇರಿದಂತೆ ಹೊಸಮುಖದ ಕಲಾವಿದರನ್ನ ಮುಖ್ಯವಾಹಿನಿಗೆ ಪುಟ್ಟಣ್ಣ ತಂದರು. ನಾಗರಹಾವು ಚಿತ್ರದ ಸಮಾಜದಲ್ಲಿ ಸಂಸ್ಕಾರ ತೋರಿಸುವ ಗುರು ಶಿಷ್ಯರ ಪಾತ್ರ ಇಂದಿಗೂ ಜನಮನದಲ್ಲಿದೆ,ಪುಟ್ಟಣ್ಣ ಅವರ ಕ್ರಿಯಾಶೀಲತೆಯಿಂದ ಚಿತ್ರ ನಿರ್ದೇಶಕರಿಗೆ ಮನ್ನಣೆ ಲಭಿಸಿತು ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಕನ್ನಡಚಿತ್ರರಂಗ ಅತ್ಯುತ್ತಮ ಚಿತ್ರ ನಿರ್ದೇಶಕ ಎಂದು ಪ್ರತಿವರ್ಷ ಪ್ರಶಸ್ತಿ ನೀಡುತ್ತಾರೆ, ಅದರ ಜೊತೆಯಲ್ಲೆ ಚಿತ್ರನಿರ್ದೇಶಕರ ಕಲಿಕಾ ಸಂಶೋಧನಾ ಘಟಕವನ್ನ ನಿರ್ಮಿಸಿದರೆ ಸಾಕಷ್ಟು ಯುವಕಲಾವಿದರಿಗೆ ಸ್ಪೂರ್ತಿ ದೊರೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್ ,ಆಲನಹಳ್ಳಿ
ಎಂ ಎನ್ ಚೇತನ್ ಗೌಡ,
ಮತ್ತಿತರರು ಪಾಲ್ಗೊಂಡಿದ್ದರು.

ಅರ್ಥಪೂರ್ಣ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ Read More