ತನ್ವೀರ್ ಸೇಠ್ ಮನವಿಗೆ ಸ್ಪಂದನೆ:ಉದಯಗಿರಿಗೆ ಹೆಚ್ಚುವರಿ ಪೊಲೀಸ್‌ ಠಾಣೆ

ಮೈಸೂರು: ಮೈಸೂರಿನ ಉದಯಗಿರಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿದೆ.

ಉದಯಗಿರಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವನ್ನು‌ ಶಾಸಕ ತನ್ವೀರ್‌ಸೇಠ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.ಇದಕ್ಕೆ‌ ಸರ್ಕಾರ ‌ಸ್ಪಂದಿಸಿದೆ.

ನ.18 ರಂದು ಗೃಹ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯು ಅಸ್ತಿತ್ವದಲ್ಲಿರುವ ಉದಯಗಿರಿ ಪೊಲೀಸ್ ಠಾಣೆಯನ್ನು ಉದಯಗಿರಿ ಉತ್ತರ ಮತ್ತು ಉದಯಗಿರಿ ದಕ್ಷಿಣ ಎಂದು ಎರಡು ಘಟಕಗಳಾಗಿ ವಿಭಜಿಸಲು ನಿರ್ಧರಿಸಿದೆ.

ಈಗ ಇರುವ ಪೊಲೀಸ್ ಠಾಣೆಯನ್ನು ಉದಯಗಿರಿ ದಕ್ಷಿಣ ಎಂದು ಮರು ನಾಮಕರಣ ಮಾಡಲಾಗುವುದು ಮತ್ತು ಹೊಸದಾಗಿ ರಚಿಸಲಾದ ಘಟಕವನ್ನು ಉದಯಗಿರಿ ಉತ್ತರ ಪೊಲೀಸ್ ಠಾಣೆ ಎಂದು ಕರೆಯಲಾಗುತ್ತದೆ.

ಸರ್ಕಾರದ ಆದೇಶದ ಪ್ರಕಾರ, ಎರಡೂ ಠಾಣೆಗಳಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ನಾಲ್ವರು ಸಬ್ ಇನ್ಸ್‌ಪೆಕ್ಟರ್‌ಗಳು, ಎಂಟು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು, ೨೪ ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ೪೮ ಕಾನ್ಸ್‌ಟೇಬಲ್‌ಗಳನ್ನು ನೇಮಿಸಲಾಗುತ್ತದೆ.

ಹೆಚ್ಚುವರಿಯಾಗಿ ಉದಯಗಿರಿ ಉತ್ತರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸಲು ಇಬ್ಬರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಲಿದೆ.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ರಾಜೀವ್‌ನಗರ ೨ನೇ ಹಂತದ ಗುಪ್ತಾ ಸ್ಟೋರ್ಸ್ ಬಳಿ ಹೊಸ ಠಾಣೆಯನ್ನು ನಿರ್ಮಿಸಲು ಖಾಸಗಿ ಕಟ್ಟಡವನ್ನು ಗುರುತಿಸಿದ್ದಾರೆ.

ಬಾಡಿಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಕ್ಷಣವೇ ಠಾಣೆಯು ಕಾರ್ಯಾರಂಭ ಮಾಡಲಿದೆ.

ತನ್ವೀರ್ ಸೇಠ್ ಮನವಿಗೆ ಸ್ಪಂದನೆ:ಉದಯಗಿರಿಗೆ ಹೆಚ್ಚುವರಿ ಪೊಲೀಸ್‌ ಠಾಣೆ Read More

ಮಹಿಳಾ ಉದ್ಯೋಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮಹಿಳೆ!

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಪುಂಡರು,ಕಿಡಿಗೇಡಿಗಳು ಮಾತ್ರ ಪೋಸ್ಟ್ ಹಾಕ್ತಾರೆ ಅಂದುಕೊಂಡಿದ್ದರೆ ಅದು ತಪ್ಪು,ಮಹಿಳೆಯರು ಕೂಡಾ ಹೀಗೆ ಮಾಡಿದ ಉದಾಹರಣೆ ಇದೆ.

ಮಹಿಳೆಗೆ ಮಹಿಳೆಯೇ ಶತೃ ಎಂಬುದು ಈ ಪ್ರಕರಣದಿಂದ ಗೊತ್ತಾಗುತ್ತದೆ.

ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಈಗ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಾಪಿನ್ ಕಂಪನಿಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಮೃಣಾಲಿನಿ ಮನೋಹರ್ ಎಂಬಾಕೆ ಪೋಸ್ಟ್ ಮಾಡಿದ್ದಾರೆಂದು ನೊಂದ ಉದ್ಯೋಗಿ ದೂರು ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬರ ಜೊತೆ ಸಂಬಂಧ ಇದೆ ಎಂದು ಸುಳ್ಳು ಮಾಹಿತಿ ಹಾಕಿದ್ದಾರೆ.ಫೇಸ್ ಬುಕ್ ಮೆಸೆಂಜರ್ ನಲ್ಲಿ ಕ್ಕೈಂಟ್ಸ್ ಗಳನ್ನ ಗುರಿಯಾಗಿಸಿಕೊಂಡು ನನ್ನ ವಿರುದ್ದ ಅಶ್ಲೀಲವಾಗಿ ಕೆಟ್ಟಪದಗಳನ್ನ ಬಳಸಿ ತೇಜೋವಧೆ ಮಾಡಿದ್ದಾರೆಂದು ಉದ್ಯೋಗಿ ಆರೋಪಿಸಿದ್ದಾರೆ.

ನನ್ನ ಬಗ್ಗೆ ಪ್ರಾಸ್ಟಿಟ್ಯೂಟ್ ಎಂದು ಮಹಿಳೆ ಉಲ್ಲೇಖಿಸಿ ತೇಜೋವಧೆ ಮಾಡಿದ್ದಾರೆಂದು ದೂರಿದ್ದಾರೆ.

ಜತೆಗೆ ನನ್ನ ಅಜ್ಜಿಯ ಬಗ್ಗೆಯೂ ತಪ್ಪಾಗಿ ಮಾಹಿತಿ ನೀಡಿದ್ದಾರೆ.ನನ್ನ ಬಗ್ಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೃಣಾಲಿನಿ ಮನೋಹರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳಾ ಉದ್ಯೋಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮಹಿಳೆ! Read More

ಬೆಟ್ಟದಪುರ ಪೊಲೀಸ್ ಸಿಬ್ಬಂದಿ ಅಮಾನತಿಗೆ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಆಗ್ರಹ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ ಬಿ.ಜಿ ಪ್ರಕಾಶ್ ಮತ್ತು ತನಿಖಾ ತಂಡದ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಿಸಿ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಿರಪರಾಧಿ ಅಮಾಯಕ ಆದಿವಾಸಿ ಜನಾಂಗದ ಸುರೇಶ್ ಎಂಬವರನ್ನು ಬೇಕೆಂದೇ ಪ್ರಕರಣ ವೊಂದರಲ್ಲಿ ಸಿಲುಕಿಸಿ ಎರಡು ವರ್ಷ ಜೈಲುವಾಸ ಅನುಭವಿಸಲು ಬೆಟ್ಟದಪುರ‌ ಇನ್ಸ್ಪೆಕ್ಟರ್ ಬಿ.ಜಿ ಪ್ರಕಾಶ್, ಎಎಸ್ಐ ಸೋಮಶೇಖರ್ ಸಿಬ್ಬಂದಿಗಳಾದ ಜಿತೇಂದ್ರ ಕುಮಾರ್, ಎಂ. ಪ್ರಕಾಶ್, ಮುಖೇಶ್ ಕುಮಾರ್ ಮತ್ತಿತರರು ಕಾರಣರಾಗಿದ್ದಾರೆ ಎಂದು ಪ್ರತಿಭಟನೆ‌ ವೇಳೆ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಆರೋಪಿಸಿದರು.

ಈ ಅಧಿಕಾರಿಗಳು ನ್ಯಾಯಾಲಯವನ್ನು ವಂಚಿಸಿ ಪರಿಶಿಷ್ಟ ಜಾತಿ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಇವರೆಲ್ಲರ ಮೇಲೆ ಎಫ್ ಐ ಆರ್ ದಾಖಲಿಸಿ ಕರ್ತವ್ಯ ದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಬೆಟ್ಟದಪುರ ಪೊಲೀಸ್ ಸಿಬ್ಬಂದಿ ಅಮಾನತಿಗೆ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಆಗ್ರಹ Read More

ಠಾಣೆಯಲ್ಲೇ ವಾಹನ ಕದ್ದು, ಸಿಕ್ಕಿ ಬಿದ್ದರು!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರು, ಜನಸಾಮಾನ್ಯರ ಮನೆ ದೋಚೋದೇ ಹೆಚ್ಚು ಆದರೆ ಇಲ್ಲಿ ಐನಾತಿಗಳು ಪೊಲೀಸ್ ಠಾಣೆಯಲ್ಲೇ ಕಳ್ಳತನ ಮಾಡಿದ್ದು,ಅವರಿಗೆ ಪೊಲೀಸರ ಭಯವೆ ಇಲ್ಲವೇನೊ ಅನ್ನಿಸುತ್ತದೆ.

ಕಳ್ಳರು,ದರೋಡೆಕೋರರಿಗೆ ಮನೆಯಾದರೆನು ಮತ್ತೇನಾದರೂ ಏನು ಸಿಕ್ಕಿಧ್ದು ಗೋರೊದು ಅಷ್ಟೇ. ಆದರೆ ಠಾಣೆಯೊಂದರಲ್ಲಿ ಜಪ್ತಿಯಾಗಿದ್ದ ವಾಹನವನ್ನೇ ಕಳ್ಳರು ಕದ್ದು ಸಿಕ್ಕಿಬಿದ್ದಿದ್ದಾರೆ.

ಚಾಮರಾಜನಗರದ ಅರ್ಪಾಜ್,ಇರ್ಫಾನ್ ಎಂಬ ಆರೋಪಿಗಳನ್ನ ಪಟ್ಟಣ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಸೆನ್ ಪೊಲೀಸರು ಜೈಲಿಗಟ್ಟಿದ್ದಾರೆ‌.

ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ನುಗ್ಗಿದ ಕಳ್ಳ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ಸಮೇತ ಪರಾರಿಯಾಗಿದ್ದ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್.

ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಪೊಲೀಸ್ ಸಿಬ್ಬಂದಿ ಕ್ರೈಂ ವಿಭಾಗದ ಕೃಷ್ಣಮೂರ್ತಿ ಹಾಗೂ ಮೋಹನ್ ಅವರ ನೆರವಿನಿಂದ ಎಸ್ಕೇಪ್ ಆಗಿದ್ದ ಕಳ್ಳನನ್ನ ಕೆಲವೇ ಗಂಟೆಗಳಲ್ಲಿ ಹುಡುಕಿ ಬಂಧಿಸಿ ಸೆನ್ ಇನ್ಸ್ ಪೆಕ್ಟರ್ ಸಾಗರ್ ಅವರು ಜೈಲಿಗಟ್ಟಿದ್ದಾರೆ‌.

ಠಾಣೆಯಲ್ಲೇ ವಾಹನ ಕದ್ದು, ಸಿಕ್ಕಿ ಬಿದ್ದರು! Read More