ವಿಪ್ರರಿಗೆ ಪಂಚಾಂಗ ವಿತರಣೆ

ಮೈಸೂರು: ಮೈಸೂರಿನ 23ನೇ ವಾರ್ಡ್ ಹಳೇ ಬಂಡಿಕೇರಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಕುಟುಂಬದವರಿಗೆ ಪಂಚಾಂಗ ವಿತರಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ
ವಿಪ್ರ ಕುಟುಂಬದವರಿಗೆ
ಪಂಚಾಂಗ ವಿತರಿಸಿ ಯುಗಾದಿ ಮತ್ತು ವಿಶ್ವಾವಸು ನಮ ಸಂವತ್ಸರದ ಶುಭಾಶಯ ಕೋರಲಾಯಿತು

ಈ ಸಂದರ್ಭದಲ್ಲಿ ಸುದರ್ಶನ್, ರಾಜೇಂದ್ರ, ರವಿಚಂದ್ರ, ಶ್ರೀನಿವಾಸ್, ಶಿವು, ಮಾಧವ್ ರಾವ್, ರಾಘವನ್, ವಿನುತ, ಸತೀಶ್ , ಜಗನ್ನಾಥ್, ಮನೋಜ್, ಜಗದೀಶ್, ನಾಗರಾಜ್, ವೆಂಕಟೇಶ್, ಸುನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.

ವಿಪ್ರರಿಗೆ ಪಂಚಾಂಗ ವಿತರಣೆ Read More

ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಣೆ

ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಪುಸ್ತಕಂ ಶ್ರೀ ಸಂತಾನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಿಸಲಾಯಿತು.

ಪಂಚಾಂಗವನ್ನು ವಿತರಿಸಿದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ, ಯುಗಾದಿ ವರ್ಷಾಚರಣೆ ಬೇವು ಬೆಲ್ಲ ಕಹಿಸಿಹಿಯ ಸಂಕೇತ ಎಂದು ಹೇಳಿದರು.

ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂತಾನ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಆರಾಧಕರಾದ ರಾಮಾನುಜಂ, ಕಾಳಿದಾಸ ರಸ್ತೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಯೋಗ ನರಸಿಂಹನ್ (ಮುರುಳಿ), ವೀರ ರಾಘವನ್,ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ಮೂಡಾ ಮಾಜಿ ಸದಸ್ಯರಾದ ನವೀನ್ ಕುಮಾರ್, ಅಗಸ್ತ್ಯ ಸೊಸೈಟಿಯ ಕಲ್ಕೆರೆ ನಾಗರಾಜ್,ವಿಕ್ರಂ ಅಯ್ಯಂಗಾರ್ ,ಶ್ರೀ ರಾಮಾನುಜ ಸಹಕಾರ ಸಂಘದ ರಾಜಗೋಪಾಲ್, ಟಿ.ಎಸ್ ಅರುಣ್, ಚಕ್ರಪಾಣಿ, ಸುದರ್ಶನ್, ವಿಘ್ನೇಶ್ವರ ಭಟ್, ಚರಣ್, ಸತೀಶ್, ರಾಮು, ರಾಜೇಂದ್ರ, ರಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಣೆ Read More