ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ಕೃಷ್ಟ ನಾರಾಯಣ ಆಸ್ಪತ್ರೆ

ಮೈಸೂರು: ಮೈಸೂರಿನ ನಾರಾಯಣ ಆಸ್ಪತ್ರೆಯು 50ಕ್ಕೂ ಹೆಚ್ಚು ಸೈಟೊರಿಡಕ್ಟಿವ್ ಸರ್ಜರಿ (ಸಿಆರ್‌ಎಸ್‌) ಮತ್ತು ಹೈಪರ್‌ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ (ಹೈಪೆಕ್) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯುತ್ಕೃಷ್ಟ ಆಸ್ಪತ್ರೆಯಾಗಿ ಮೂಡಿ ಬಂದಿದೆ.

ಈ ಸಾಧನೆ ಮಾಡುವ ಮೂಲಕ ನಾರಾಯಣ ಆಸ್ಪತ್ರೆಯು ಮೈಸೂರು ವಲಯದಲ್ಲಿ ಈ ಸಂಕೀರ್ಣ ಚಿಕಿತ್ಸೆಯನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಮೊದಲ ಮತ್ತು ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಅಲ್ಲದೆ ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನನ್ಸೀಸ್‌ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ಕೃಷ್ಟ ಚಿಕಿತ್ಸಾ ಕೇಂದ್ರವಾಗಿ ರೂಪುಗೊಂಡಿದೆ.

ಪ್ರಖ್ಯಾತ ವೈದ್ಯರಾದ ಡಾ. ಸುಹಾಸ್ ಕೆ. ಆರ್. ಮತ್ತು ಡಾ. ಲೋಕೇಶ ಎಚ್. ಎಂ. ಅವರ ನೇತೃತ್ವದಲ್ಲಿ ನಾರಾಯಣ ಆಸ್ಪತ್ರೆಯು ಸಂಕೀರ್ಣ ಹಂತದ ಕ್ಯಾನ್ಸರ್‌ ಗಳಿಗೆ ಅದರಲ್ಲೂ ವಿಶೇಷವಾಗಿ ಪೆರಿಟೋನಿಯಲ್ ವರೆಗೆ ಹರಡಿರುವ ಅಂಡಾಶಯ ಕ್ಯಾನ್ಸರ್ ಪ್ರಕರಣಗಳಿಗೆ ಅತ್ಯಾಧುನಿಕ ಚಿಕಿತ್ಸೆ ಒದಗಿಸುತ್ತಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಜಿಕಲ್ ಆಂಕೊಲಾಜಿಸ್ಟ್‌ ಡಾ. ಸುಹಾಸ್ ಕೆ.ಆರ್. ಅವರು, “ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನನ್ಸೀಸ್‌ ಕ್ಯಾನ್ಸರ್ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಿಆರ್‌ಎಸ್‌ ಮತ್ತು ಹೈಪೆಕ್ ಶಸ್ತ್ರಚಿಕಿತ್ಸಾ ವಿಧಾನಗಳು ಬಹಳ ನೆರವಾಗಿವೆ. ಈ ನವೀನ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಉತ್ತಮ ಆರೈಕೆಯ ಮೂಲಕ ನಮ್ಮ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮತ್ತೋರ್ವ ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಲೋಕೇಶ ಎಚ್.ಎಂ. ಅವರು ಮಾತನಾಡಿ, ಈ ಸಾಧನೆಯು ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ರೋಗಿಗಳು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಪೆರಿಟೋನಿಯಲ್ ಮ್ಯಾಲಿಗ್ನನ್ಸೀಸ್‌ ಕ್ಯಾನ್ಸರ್ ಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ತಿಳಿಸಿದರು‌

ಈ ಶಸ್ತ್ರಚಿಕಿತ್ಸೆಯು ಬಹಳ ಸವಾಲಿನದ್ದಾಗಿದೆ. ಪ್ರತೀ ಶಸ್ತ್ರಚಿಕಿತ್ಸೆಯು 8-12 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಸಂಕೀರ್ಣ ಚಿಕಿತ್ಸೆಯಾದ್ದರಿಂದ ಬಹು ಶಸ್ತ್ರಚಿಕಿತ್ಸಕರು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.

ಕರ್ನಾಟಕದ ಇತರ ಆಸ್ಪತ್ರೆಗಳಿಗಿಂತ ಅತಿ ಹೆಚ್ಚು ಸಿಆರ್‌ಎಸ್‌ ಹೈಪೆಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಸಾಧನೆ ಮಾಡುವ ಮೂಲಕ ಮೈಸೂರಿನ ನಾರಾಯಣ ಆಸ್ಪತ್ರೆಯು ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ.

ಈ ಶಸ್ತ್ರಚಿಕಿತ್ಸೆಯ ವೆಚ್ಚವು ಸಾಮಾನ್ಯವಾಗಿ ಬಹುತೇಕ ಎಲ್ಲಾ ವಿಮಾ ಯೋಜನೆಗಳು ಕವರೇಜ್ ನೀಡುತ್ತವೆ ಎಂದು ಮಾಹಿತಿ ನೀಡಿದರು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ಕೃಷ್ಟ ನಾರಾಯಣ ಆಸ್ಪತ್ರೆ Read More

ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಗೆದ್ದ ಮಕ್ಕಳು – ಕುಟುಂಬದ ಸ್ನೇಹ ಸಮ್ಮಿಲನ

ಮೈಸೂರು: ಅಂತರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನದ ಪ್ರಯುಕ್ತ ಮೈಸೂರಿನ ನಾರಾಯಣ ಆಸ್ಪತ್ರೆಯು ಕ್ಯಾನ್ಸರ್ ಗೆದ್ದವರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡು ದೈರ್ಯ ತುಂಬಲಾಯಿತು.

ಮೈಸೂರಿನ ದಿ ಏಟ್ರಿಯಮ್ ಬೊಟಿಕ್ ಹೋಟೆಲ್‌ ನಲ್ಲಿ ಆಯೋಜಿಸಿದ್ದ ಬಾಲ್ಯದ ಕ್ಯಾನ್ಸರ್ ಗೆದ್ದವರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಗೆದ್ದ 30ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡು ತಮ್ಮ ಸ್ಫೂರ್ತಿದಾಯಕ ಕತೆಗಳನ್ನು ಹಂಚಿಕೊಂಡರು.

ಐಎಪಿ ಮೈಸೂರು 2025ರ ಅಧ್ಯಕ್ಷರು ಮತ್ತು ಪೀಡಿಯಾಟ್ರಿಕ್ ಕನ್ಸಲ್ಟೆಂಟ್ ಡಾ. ಶ್ರೀನಿವಾಸ್ ಬಿ ಹೆಚ್, ಮೈಸೂರಿನ ನಾರಾಯಣ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ರವಿ ಎಂ ಎನ್, ಪೀಡಿಯಾಟ್ರಿಕ್ ಕ್ರಿಟಿಕಲ್ ಕೇರ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಯಶವಂತ್ ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಪುಟಾಣಿಗಳ ಧೈರ್ಯವನ್ನು ಶ್ಲಾಘಿಸಲಾಯಿತು ಮತ್ತು ಚಿಕಿತ್ಸೆ ಹೊರತಾಗಿ ಅವರಿಗೆ ಭಾವನಾತ್ಮಕ, ಔಷಧೀಯ ನೆರವು ನೀಡುವ ಮಹತ್ವದ ಕುರಿತು ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಶ್ರೀನಿವಾಸ್ ಬಿ.ಎಚ್ ಅವರು, ಮಕ್ಕಳಲ್ಲಿ ಕ್ಯಾನ್ಸರ್ ರೋಗವನ್ನು ಕಾಣುವುದು ಬಹಳ ಬೇಸರದ ವಿಷಯವಾಗಿದೆ. ಆದರೆ ಈ ಮಕ್ಕಳು ತೋರುವ ಧೈರ್ಯ ಮಾತ್ರ ಅಸಾಧಾರಣವಾದುದಾಗಿದೆ ಎಂದು ಹೇಳಿದರು.

ಅತ್ಯಾಧುನಿಕ ಚಿಕಿತ್ಸೆ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲದಿಂದ ಕ್ಯಾನ್ಸರ್ ನಿಂದ ಗುಣಮುಖರಾಗುವ ಕಡೆ ಸಾಗಬಹುದಾಗಿದೆ. ಎಂದು ತಿಳಿಸಿದರು.

ಡಾ. ರವಿ ಎಂ ಎನ್ ಅವರು ಮಾತನಾಡಿ, ಬಾಲ್ಯದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದು ಎಂದರೆ ಕೇವಲ ವೈದ್ಯಕೀಯ ಕೆಲಸ ಮಾಡುವುದಷ್ಟೇ ಅಲ್ಲ. ಬದಲಿಗೆ ಪ್ರತೀ ಹಂತದಲ್ಲೂ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಮಾಡಬೇಕು, ಅವರು ನಿರಾಳವಾಗಿ ಇರಬೇಕು,ಆ ನಿಟ್ಟಿನಲ್ಲಿ ನಾರಾಯಣ ಆಸ್ಪತ್ರೆಯು ಅತ್ಯದ್ಭುತ ವಾತಾವರಣವನ್ನು ನಿರ್ಮಿಸಿದ್ದು, ಮಕ್ಕಳು ಮತ್ತು ಅವರ ಕುಟುಂಬಕ್ಕೆ ಬೇಕಾದ ನೆರವು ಒದಗಿಸಿ ಧೈರ್ಯವಾಗಿ ನಿಲ್ಲಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮೈಸೂರಿನ ನಾರಾಯಣ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ-ಆಂಕೊಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ತರಂಗಿಣಿ ದುರುಗಪ್ಪ ಅವರು, “ಸೂಕ್ತ ಸಮಯದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ನಿಂದ ಮುಕ್ತಿ ಹೊಂದಬಹುದಾಗಿದೆ ಎಂದು ತಿಳಿಸಿದರು.

ಚಿಕಿತ್ಸೆಯ ನಂತರ ಭಾವನಾತ್ಮಕ ನೆರವು ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಇಂತಹ ಸ್ನೇಹ ಸಮ್ಮಿಲನಗಳು ಬಹಳ ಮುಖ್ಯವಾಗಿವೆ ಎಂದು ಅಭಿಪ್ರಾಯ ಪಟ್ಟರು.

ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಗೆದ್ದ ಮಕ್ಕಳು – ಕುಟುಂಬದ ಸ್ನೇಹ ಸಮ್ಮಿಲನ Read More