ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್

ಮೈಸೂರು: ಇತ್ತೀಚಿನ ದಿನಗಳಲ್ಲಿ ವಿವಾಹಿತ ಮಹಿಳೆಯರೇ ಹಚ್ಚು ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.ಇದಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಘಟನೆ ಸೇರ್ಪಡೆಯಾಗಿದೆ.

ಅಂಗಡಿ ಮಾಲೀಕನ ಜೊತೆ ಅಕ್ರಮ ಸಂಬಂಧ ಬೆಳೆಸಿ‌ದ ಮಹಿಳೆ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ನಗರದ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿಕೇರಿಯಲ್ಲಿ ನಡೆದಿದೆ.

ತನಗೆ ಮೋಸ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹಿಡಿದು ಕಾನೂನು ರೀತಿ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಪತಿ ಲಷ್ಕರ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ ಜಸ್ವಂತ್ ಸೋನಿ ಅವರು ಪತ್ನಿ ಸುಶೀಲಾ,ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ಸಹಕರಿಸಿದ ರಾಕೇಶ್ ಸೋನಿ ವಿರುದ್ದ ದೂರು ದಾಖಲಿಸಿದ್ದಾರೆ.

14 ವರ್ಷಗಳ ಹಿಂದೆ ಜಸ್ವಂತ್ ಸೋನಿ ಹಾಗೂ ಸುಶೀಲ ವಿವಾಹವಾಗಿದ್ದು,ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಜಸ್ವಂತ್ ಸೋನಿ ಅವರು ತಮ್ಮ ಅಣ್ಣ ರಾಜಕುಮಾರ್ ಅವರ ಅಂಗಡಿಯಲ್ಲಿ ಗೋಲ್ಡ್ ಸ್ಮಿತ್ ಆಗಿ ಕೆಲಸ ಮಾಡುತ್ತಿದ್ದರು.
ಅಂಗಡಿಗೆ ರಾಜೇಶ್ ಕುಮಾರ್ ಭೇಟಿ ಕೊಡುತ್ತಿದ್ದರು.ನಂತರ ಜಸ್ವಂತ್ ಸೋನಿ ಅವರು ರಾಜೇಶ್ ಕುಮಾರ್ ಸೋನಿ ಯವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು.

ಜಸ್ವಂತ್ ಸೋನಿ ಅಂಗಡಿಗೆ ಕೆಲಸಕ್ಕೆ ಬಂದಾಗ ರಾಜೇಶ್ ಕುಮಾರ್ ಸೋನಿ ಅವರು ಜಸ್ವಂತ್ ಮನೆಗೆ ಹೋಗುತ್ತಿದ್ದರು.

ಹಾಗೆಯೇ ಜಸ್ವಂತ್ ಪತ್ನಿ ಜತೆ ಸಲುಗೆ ಬೆಳೆದು ಪ್ರೀತಿ,ಅಕ್ರಮ ಸಂಬಂಧ ಶುರುವಾಗಿದೆ. ಈ ಅಕ್ರಮ ಸಂಬಂಧ ವಿಚಾರ ಪತಿಗೆ ಗೊತ್ತಾಗಿದೆ.

ಅಕ್ರಮ ಸಂಬಂಧದ ಬಗ್ಗೆ ತಕರಾರು ಮಾಡಿದ್ರೆ ಚಿನ್ನ ಕಳುವು ಆರೋಪ ಹೊರೆಸಿ ಜೈಲಿಗೆ ಕಳಿಸುವುದಾಗಿ ಪ್ರೇಮಿಗಳು ಬೆದರಿಕೆ ಹಾಕಿದ್ದಾರೆ.

ನಂತರ ಪತ್ನಿ ಸುಶೀಲಾ ಮನೆಯಲ್ಲಿದ್ದ ದಾಖಲೆ ಪತ್ರಗಳು,ಚೆಕ್ ಬುಕ್,ಐಟಿ ಫೈಲ್ಸ್ ಹಾಗೂ 260 ಗ್ರಾಂ ಚಿನ್ನಾಭರಣಗಳ ಜೊತೆ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ

ನೊಂದ ಪತಿ ಜಸ್ವಂತ್ ಸೋನಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪತ್ನಿ ಸುಶೀಲಾ ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ರಾಕೇಶ್ ಕುಮಾರ್ ಸೋನಿ ವಿರುದ್ದ ಪ್ರಕರಣ ದಾಖಲಾಗಿದೆ.

ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್ Read More

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: ಮೈಸೂರಿನ ಹೂಟಗಳ್ಳಿಯ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಸುದರ್ಶನ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಆಚರಿಸಿ ಧ್ವಜಾರೋಹಣ ನೆರವೇರಿಸಿ ನಂತರ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್.ಶ್ರೀನಿವಾಸನ್,ಸಮಾಜ ಸೇವಕರಾದ ಪುಷ್ಪ ಅಯ್ಯಂಗಾರ್,ವೈದೇಹಿ ಅಯ್ಯಂಗಾರ್ , ಪ್ರಕಾಶ್ ಎಂ.ಹೆಚ್ ಸೇರಿದಂತೆ ಶಾಲಾ ಆಡಳಿತ ಮಂಡಳಿ ಸದಸ್ಯರು,ಮಕ್ಕಳು ಉಪಸ್ಥಿತರಿದ್ದರು.

ಸುದರ್ಶನ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ Read More

ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ವಿಕ್ರಮ ಅಯ್ಯಂಗಾರ್ ನೇಮಕ

ಮೈಸೂರು: ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ
ನಡೆದ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಿಗೆ ಪತ್ರ ವಿತರಣಾ ಸಮಾರಂಭದ ವೇಳೆ ವಿಕ್ರಂ ಅಯ್ಯಂಗಾರ್ ಅವರಿಗೆ ಮೈಸೂರು ಜಿಲ್ಲೆಯ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಅರ್ಹತಾ ಪತ್ರ ನೀಡಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಅವರು ವಿಕ್ರಂ ಅಯ್ಯಂಗಾರ್ ಅವರಿಗೆ ಅರ್ಹತಾ ಪತ್ರ ನೀಡಿ
ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹೆಸರಾಂತ ಹಿರಿಯ ಕವಿಗಳಾದ ಡಾ ಸಿ ಪಿ ಕೃಷ್ಣಕುಮಾರ್,
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ ದೀಪಕ್, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕರಿಯಪ್ಪ, ಮೈಸೂರಿನ ಸಂಚಾಲಕರಾದ ಚಂದ್ರಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಮತ್ತಿತರರು ಹಾಜರಿದ್ದರು.

ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ವಿಕ್ರಮ ಅಯ್ಯಂಗಾರ್ ನೇಮಕ Read More

ಬೋರ್ ವೆಲ್ ಪೈಪ್ ಅಳವಡಿಕೆ ವಿಚಾರದಲ್ಲಿ ಕ್ಯಾತೆ; ಮಹಿಳೆಗೆ ಹಲ್ಲೆ-ನಾಲ್ವರ ವಿರುದ್ದ ಎಫ್ಐಆರ್

ಮೈಸೂರು: ಬೋರ್ ವೆಲ್ ಅಳವಡಿಸುವ ವಿಚಾರದಲ್ಲಿ ಕ್ಯಾತೆ ತೆಗೆದ ಯುವಕ ಮಹಿಳೆ ಮೇಲೆ ಮೊಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ತೊಂಡಾಳು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮಹದೇವಮ್ಮ ಎಂಬುವರು ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದ ಚೇತನ್ ಕುಮಾರ್ ಹಾಗೂ ಆತನಿಗೆ ಸಾಥ್ ನೀಡಿದ ಚಿತ್ರ,ಮಮತ ಹಾಗೂ ಕುಮಾರ್ ಎಂಬುವರ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಂಡಾಳು ಗ್ರಾಮದ ಸರ್ವೆ ನಂ 75 ರ ಜಮೀನಿನಲ್ಲಿ ರಾಘವೇಂದ್ರ ಎಂಬುವರು ಬೋರ್ ವೆಲ್ ಹಾಕಿಸಿದ್ದು ಪೈಪ್ ಅಳವಡಿಸುವ ಕಾಮಗಾರಿ ಮಾಡುತ್ತಿದ್ದಾಗ ಚಿತ್ರ,ಮಮತ ಹಾಗೂ ಕುಮಾರ್ ಗಲಾಟೆ ಮಾಡಿ ರಾಘವೇಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ‌ ವೇಳೆ ಪತಿಯ ನೆರವಿಗೆ ಪತ್ನಿ ಮಹದೇವಮ್ಮ ಧಾವಿಸಿದ್ದಾರೆ.ಆಗ ಚೇತನ್ ಕುಮಾರ್ ಮೊಚ್ಚಿನಿಂದ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ.ಗಾಯಗೊಂಡ ಮಹದೇವಮ್ಮಾ ಅವರಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೋರ್ ವೆಲ್ ಪೈಪ್ ಅಳವಡಿಕೆ ವಿಚಾರದಲ್ಲಿ ಕ್ಯಾತೆ; ಮಹಿಳೆಗೆ ಹಲ್ಲೆ-ನಾಲ್ವರ ವಿರುದ್ದ ಎಫ್ಐಆರ್ Read More

ಗ್ಯಾರಂಟಿಗಳಿಂದ ಸರ್ಕಾರ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ:ಹೆಚ್.ವಿಶ್ವನಾಥ್

ಮೈಸೂರು,ಏ.3: ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಸರ್ಕಾರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಇದೊಂದು ಹುಚ್ಚು, ಮೂರ್ಖತನದ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ತಲುಪಿದೆ ಎಂದು ಹೇಳಿದರು.

16 ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಚಪಲ ಗ್ಯಾರಂಟಿಗಳಿಂದ ಸರ್ಕಾರ ಅಧೋಗತಿ ತಲುಪುವಂತಾಗಿದೆ ಎಂದು ದೂರಿದರು.

ಉಚಿತ ಗ್ಯಾರಂಟಿಗಳಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಗಂಡ ಹೆಂಡತಿಯರ ನಡುವೆ ಒಡಕು ಉಂಟಾಗಿದೆ. ಅವರವರಲ್ಲೇ ಗಲಾಟೆ ತಂದಿಟ್ಟಿದ್ದಾರೆ. ಬೇಕಾದರೆ ಒಂದು ಸರ್ವೆ ಮಾಡಿಸಿ,ಇದಕೊಂದು ಮಾನ ದಂಡ ಬೇಡವಾ ಎಂದು ಪ್ರಶ್ನಿಸಿದರು.

ವೃದ್ಧಾಪ್ಯ ವೇತನಕ್ಕೂ ಒಂದು ಮಾನ ದಂಡ ಇದೆ. ಸಾಲ ಮಾಡಿ ಉಚಿತ ಕೊಡುವ ಅಗತ್ಯ ಇತ್ತಾ, ಒಂದು ಮಾನದಂಡದ ಆಡಿಯಲ್ಲಿ ಕೊಡಿ. ಇದೊಂದು ಹುಚ್ವು ಸರ್ಕಾರ, ಯಾವುದೇ ಮಾನದಂಡವಿಲ್ಲದೆ ಎಲ್ಲರಿಗೂ ಕೊಡುತ್ತೇವೆ ಎನ್ನುವುದು ಸರ್ಕಾರದ ಮೂರ್ಖತನ ಎಂದು ತಿಳಿಸಿದರು.

ಇಲ್ಲಿವರೆಗೆ 76 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದರೆ ಆ ಹಣದಿಂದ ಎಷ್ಟು ಯೋಜನೆಗಳನ್ನು ಮಾಡಬಹುದಿತ್ತು. 76 ಸಾವಿರ ಕೋಟಿ ಖರ್ಚು ಮಾಡಿದ್ದರ ಫಲ ಏನು, ಆರ್ಥಿಕ ಶಿಸ್ತು ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದರು.

ದುಡಿಯುವ ಕೈಗೆ ಕೆಲಸ ಕೊಡಿ.2013 ರಲ್ಲಿ ಜನಪರ ಕಾರ್ಯಕ್ರಮಗಳ ಅಂಶಗಳ ಪಟ್ಟಿ ತಯಾರಿಸಿದ್ದೇ ನಾವು. ಆರು ಪ್ರೋಗ್ರಾಂ ನಾವು ಕೊಟ್ಟಿದ್ದು ನಾನು ,ರಮೇಶ್ ಕುಮಾರ್, ಇಬ್ರಾಹಿಂ. ಅನ್ನಭಾಗ್ಯ ಕಲ್ಪನೆ‌ ನಾವು ಕೊಟ್ಟಿದ್ದು,ಅದೆಲ್ಲಾ ಸಿದ್ದರಾಮಯ್ಯ ತಲೆಯಲ್ಲಿ ಇರಲಿಲ್ಲ ಎಂದು ವಿಶ್ವನಾಥ್ ತಿಳಿಸಿದರು.

ಆಗ ಅವರು ಉತ್ತಮ ಜನಪರ ಆಡಳಿತ ಕೊಟ್ಟರು.ಆದರೆ ಈಗ ಸಿಎಂ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಆರೋಪಿಸಿದ ಹಳ್ಳಿಹಕ್ಕಿ, ದುಡಿಯುವ ಕೈಗೆ ಕೆಲಸ ಕೊಡಿ ಎಂದು ಒತ್ತಾಯಿಸಿದರು.

ಎರಡೂ ಪಕ್ಷಗಳೂ ದಿವಾಳಿಯಾಗಿವೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಲೆ ಇಲ್ಲದಂತಾಗಿದೆ. ವ್ಹೀಲ್ ಚೇರನಲ್ಲಿ ಕೂತು ಆಡಳಿತ ನಡೆಸಲಿಕ್ಕೆ ಆಗಲ್ಲ. ಸದನದಲ್ಲಿ ನಡೆದ ಘಟನೆ ನಾಚಿಕೆಗೇಡು. ಮಾನ ಮರ್ಯಾದೆ ಇರುವವರು ಸದನದಲ್ಲಿ ಇರೋಕಾಗುತ್ತಾ. ಮಧುಬಲೆಯಲ್ಲಿ 48 ಜನ ಇದ್ದಾರೆ ಎಂದು ಕಾಂಗ್ರೆಸ್ ನವರೇ ಹೇಳಿದ್ದಾರೆ. ಅದನ್ನ ಯಾರು ಅಂತ ಹೊರ ತಗೆಯುವ ಕೆಲಸ ವಿಪಕ್ಷದವರೂ ಮಾಡಲಿಲ್ಲ. ಎರಡೂ ಪಕ್ಷಗಳೂ ದಿವಾಳಿಯಾಗಿವೆ ಎಂದು ಸ್ವಪಕ್ಷ ಹಾಗೂ ಆಡಳಿತ ಪಕ್ಷಗಳ ವಿರುದ್ಧ ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದರು.

ವಿಶ್ವನಾಥ್ ರಾಜಕೀಯದಲ್ಲಿ ನನಗಿಂತ ಹಿರಿಯರು, ನಾನು ಎಂಎಲ್ಎ ಆಗೋಕಿಂತ ಮುಂಚಿತವಾಗಿ ಆದರು, ಆದರೆ ನಾನು ಸಿಎಂ ಆದೆ ಅವರು ಆಗಲಿಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಕಿಚಾಯಿಸಿದ್ದರ ಕುರಿತು ಮಾತನಾಡಿದ ವಿಶ್ವನಾಥ್, ಹೌದಪ್ಪ ನಾನು ನೀನು ಒಟ್ಟಿಗೆ ಓದಿದ್ದೆವು, ಒಟ್ಟಿಗೆ ವಕೀಲ ವೃತ್ತಿ ಆರಂಭಿಸಿದ್ದೆವು. ನಾನು ಮೊದಲು ಎಂಎಲ್ಎ ಆದೆ, ನಿನ್ನನ್ನ ಕಾಂಗ್ರೆಸ್ ಗೆ ಕರೆದಂದದ್ದು ನಾನು, ಕಾಂಗ್ರೆಸ್ ಗೆ ಕರೆ ತರದಿದ್ದರೆ ಹೇಗೆ ಸಿಎಂ ಆಗುತ್ತಿದ್ರಿ ಎಂದು ಟಾಂಗ್ ನೀಡಿದರು.

ನಮ್ಮ‌ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ, ವಿರೋಧ ಪಕ್ಷ ಸ್ಥಾನ ನಿಭಾಯಿಸೋದು ಗೊತ್ತಿಲ್ಲ, ಕೇಳೊ ತಾಕತ್ತೂ ಇಲ್ಲ ಎಂದು ಗುಡುಗುದರು.

ಬಿಜೆಪಿ ಕಾಂಗ್ರೆಸ್ ಹೊಂದಾಣಿಕೆ ಹೆಚ್ಚಾಗಿದೆ ಆದ್ದರಿಂದಲೇ ವಿಜಯೇಂದ್ರ ಗೆದ್ದಿದ್ದು ಎಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.

ಗ್ಯಾರಂಟಿಗಳಿಂದ ಸರ್ಕಾರ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ:ಹೆಚ್.ವಿಶ್ವನಾಥ್ Read More

ಪಕ್ಷದ ಸಿದ್ಧಾಂತಕ್ಕೆ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಿ:ಡಾ. ಬಿಜೆವಿ

ಮೈಸೂರು,ಮಾ.6: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೂಲ ಸಿದ್ದಾಂತಕ್ಕೆ ಎಂದಾದರೂ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಬೇಕು ಎಂದು
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ ಬಿ ಜೆ ವಿಜಯ್ ಕುಮಾರ್ ಕರೆ ನೀಡಿದರು.

ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಜಿಲ್ಲಾ, ತಾಲೂಕು ಹಾಗೂ ವಿಧಾನಸಭಾ ಪದಾಧಿಕಾರಿಗಳ ಪ್ರಥಮ ಸಭೆ, ಪ್ರತಿಜ್ಞಾವಿಧಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಕಚೇರಿ ನಮಗೆ ದೇಗುಲ, ಗೆದ್ದ ಪ್ರತಿಯೊಬ್ಬ ಪದಾಧಿಕಾರಿಯೂ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿಕೊಟ್ಟು ನಂತರ ಇತರೆ ಕಾರ್ಯಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿ ಸಾಧ್ಯವಾದರೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅಭಿನಂದನಾ ಸಮಾರಂಭ ನಡೆಸೋಣ ಎಂದು ತಿಳಿಸಿದರು.

ತಮ್ಮ ತಮ್ಮಲ್ಲಿ ಯಾವುದಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಬಿಟ್ಟು ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ, ಪಕ್ಷದಲ್ಲಿ ಸದರಿಸಾಲಿನಲ್ಲಿ ನಿಂತು ಕೆಲಸ ಮಾಡುವ ಮನೋಭಿಲಾಷೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಯಾವುದೇ ಘಟಕದಲ್ಲಿ ಗೆದ್ದರೂ ಸಹ ಮೊದಲು ಕಾರ್ಯಚಟುವಟಿಕೆ ಆರಂಭವಾಗುವುದೇ ಪಕ್ಷದ ಕಚೇರಿಯಿಂದ, ಪಕ್ಷದ ಶಿಷ್ಟಾಚಾರ ಯಾರು ಮರೆಯಬಾರದು ಎಂಬ ತಿಳುವಳಿಕೆ ನೀಡಿದರು.

ರಾಷ್ಟ್ರೀಯ ವಿಕೋಪ, ಶಿಕ್ಷಣಕ್ಕೆ ಸಂಭದಿಸಿದ ವಿಚಾರಗಳು, ಸಂವಿಧಾನ ಬದ್ದ ಕೆಲಸಗಳು ಯುವ ಕಾಂಗ್ರೆಸ್ ಮೂಲ ಐಡಿಯಲಾಜಿ ಎಂದು ಹೇಳಿದರು. ಎಲ್ಲಾ ಪ್ರತಿಭಟನೆ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ವಿಜಯಕುಮಾರ್ ಸೂಚಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಕಾರ್ಯಾಗಾರ ಮಾಡುವ ಅಲೋಚನೆ ಇದೆ ಎಂಬ ಮಾಹಿತಿ ನೀಡಿದರು.

ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಮೂರ್ತಿ ಮಾತನಾಡಿ,ದೇಶದಲ್ಲಿ ಬಿಜೆಪಿ ಸೃಷ್ಟಿ ಮಾಡುತ್ತಿರುವ ಕೋಮುಗಲಭೆ ಹಾಗೂ ಹಸಿ ಹಸಿ ಸುಳ್ಳುಗಳಿಂದ ದೇಶ ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದೆ, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ರಾಜಕೀಯ ಲೇಪನ ಮಾಡಿ ದೇಶದ ಜನತೆಗೆ ಭೋಗಸ್ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ,
ಇದರ ವಿರುದ್ಧದ ಹೋರಾಟ ಮಾಡುವುದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಮೈಸೂರಿನ ಉದಯಗಿರಿ ಗಲಾಟೆಯನ್ನ ಬಿಜೆಪಿ ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದೆ. ದೇಶದಲ್ಲಿ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆಯುವ ತನಕ ಯುವ ಕಾಂಗ್ರೆಸ್ ಪದಾಧಿಕಾರಿಗಳು ವಿಶ್ರಾಂತಿ ಬಯಸಬಾರದು ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಗುಡ್ಡಪ್ಪ ಎಂ ಶಿವಣ್ಣ, ಎಂ. ಶಿವಪ್ರಸಾದ್, ಈಶ್ವರ್ ಚಕ್ಕಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್, ನಗರ ಅಧ್ಯಕ್ಷ ಅಬ್ರಾರ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ದೀಪಕ್ ಶಿವಣ್ಣ, ನಜ್ಮಾನ್ ನಜೀರ್, ಅಬ್ರಾರ್ ಅಹಮದ್, ಜಿಲ್ಲಾ ಸೇವಾದಳದ ಅಧ್ಯಕ್ಷ ಸಾ.ಮಾ ಯೋಗೇಶ್, ಎಸ್.ಸಿ ಘಟಕದ ನಗರ ಅಧ್ಯಕ್ಷ ರಮೇಶ್, ಒಬಿಸಿ ನಗರ ಅಧ್ಯಕ್ಷ ಎನ್ ಆರ್ ನಾಗೇಶ್, ನಗರ ಸೇವಾದಳದ ಅಧ್ಯಕ್ಷ ಎಂ ಕೆ ಅಶೋಕ್ ಹಾಜರಿದ್ದರು.

ಪಕ್ಷದ ಸಿದ್ಧಾಂತಕ್ಕೆ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಿ:ಡಾ. ಬಿಜೆವಿ Read More

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿನಲ್ಲಿ ಸುಮಾರು ಮೂರು ತಿಂಗಳಿಂದ ತರಬೇತಿ ಪಡೆದು ಪರೀಕ್ಷೆ ಬರೆಯಲು ತೆರಳುತ್ತಿರುವ ಅಭ್ಯರ್ಥಿಗಳಿಗೆ ಶುಭ ಕೋರಲಾಯಿತು.

ಅಭ್ಯರ್ಥಿಗಳಿಗೆ ಶುಭವಾಗಲೆಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು.

ಸಂಜೆ ಸೈನಿಕ ಅಕಾಡೆಮಿಯಲ್ಲಿ ಮೈಸೂರು ಪತ್ರಿಕಾ ಸಂಘದ ಮಾಜಿ ಅಧ್ಯಕ್ಷರಾದ ಮಹೇಂದ್ರ.ಸಿ ಕೆ ಅವರ ಉಪಸ್ಥಿತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಹೇಂದ್ರ.ಸಿ ಕೆ ಅವರು ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದರು.

ಧಕ್ಷಿಣ ಭಾರತದಲ್ಲಿ ಈ ತರಹ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಇರುವುದು ಹೆಮ್ಮೆಯ‌ ವಿಷಯವಾಗಿದೆ, ಈ ಸಂಸ್ಥೆಯಿಂದ 361 ಅಭ್ಯರ್ಥಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಒಂದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.

ಇಂತಹ ಸಂಸ್ಥೆಯಲ್ಲಿ ನೀವು ತರಬೇತಿ ಪಡೆದಿರುವುದು ನಿಜವಾಗಿಯೂ ಶ್ಲಾಘನೀಯ, ನೀವೆಲ್ಲರೂ ಪರೀಕ್ಷೆ ಬರೆದು ಆಯ್ಕೆ ಆದಮೇಲೆ ನಿಮ್ಮೆಲ್ಲರನ್ನೂ ನಾನೇ ಬಂದು ಸನ್ಮಾನಿಸುತ್ತೇನೆ ಎಂದು ವಿಶ್ವಾಸ ನೀಡಿದರು.

ಇದೇ‌ ವೇಳೆ ಸೈನಿಕ್ ಅಕಾಡೆಮಿಯ ಎಲ್ಲಾ ಅಧ್ಯಾಪಕರು ಸ್ಪರ್ಧಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ವಿಶ್ವಾಸ ತುಂಬಿದರು.

ಸೈನಿಕ್ ಅಕಾಡೆಮಿಯ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್.ಸಿಎಂ ಅವರು ಕಳೆದ ಮೂರು ತಿಂಗಳಿನಿಂದ ನಮ್ಮಲ್ಲಿ ತರಬೇತಿ ಪಡೆದ ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಪರೀಕ್ಷೆ ಬರೆಯಲು ತಯಾರಾಗಿರುವ ನೀವು ಯುದ್ಧಕ್ಕೆ ಸಜ್ಜಾದ ಸೈನಿಕರಂತೆ,ನೀವೆಲ್ಲರೂ ಸೇನೆಗೆ ಆಯ್ಕೆಯಾಗಿ ಎಂದು ಶುಭ ಕೋರಿದರು,

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹೇಂದ್ರ.ಸಿ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರಾದ ರವಿ, ವಿಜಯ್, ನಮ್ರತಾ, ಮಲ್ಲಿಕಾರ್ಜುನ, ಶ್ರೀಲಕ್ಷ್ಮಿ ಹಾಗೂ ಸಿಬ್ಬಂದಿ, ಸಹ ಸಿಬ್ಬಂದಿ ದಿಲೀಪ್, ಚೇತನ್, ಉಪಸ್ಥಿತರಿದ್ದರು.

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ Read More

ಜಗತ್ತಿನಲ್ಲೇ ಭಾರತ ಕಥೆಗಳ ಆಗರ: ಕೇಂದ್ರ‌ಸಚಿವ ಡಾ.ಮುರುಗನ್ ಬಣ್ಣನೆ

ಮೈಸೂರು: ಭಾರತ ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲೇ ಕಥೆಗಳ ಆಗರವೆನಿಸಿದೆ‌ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಬಣ್ಣಿಸಿದರು‌.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮುರುಗನ್ ಮಾತನಾಡಿದರು.

ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದೆ, ಭಾರತದಲ್ಲಿ ನಿರ್ಮಾಣವಾದ ಸಿನೆಮಾಗಳು ಈಗ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿವೆ ಎಂದು ಹೇಳಿದರು‌.

ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ  ಘೋಷಣೆ ಮಾಡಲಾಗಿತ್ತು, ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು ಎಂದು ತಿಳಿಸಿದರು.

ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಹಾಲಿವುಡ್ ಸಿನೆಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ನಮ್ಮ ದಕ್ಷಿಣ ಭಾರತದ ಸಿನೆಮಾಗಳಾದ ಆರ್ ಆರ್ ಆರ್, ಕಾಂತಾರ, ಬಾಹುಬಲಿ, ಪುಷ್ಪದಂತಹ ಸಿನೆಮಾಗಳು ನಮ್ಮ ತನದ ಕಥೆಗಳನ್ನು ಹೇಳುವ ಮೂಲಕ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಸಿನೆಮಾಗಳಿಗೆ ಬೇಕಾದ ಅನುದಾನವನ್ನು ಕೇಂದ್ರದಿಂದ ನೀಡಲಾಗುತ್ತಿದೆ ಎಂದು ಡಾ.ಮುರುಗನ್ ತಿಳಿಸಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಸುನೀಲ್ ಪುರಾಣಿಕ್ ಪರಿದೃಶ್ಯದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಚಿತ್ರ ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಸಾಕ್ಷ್ಯಚಿತ್ರ, ಕಿರುಚಿತ್ರದ ಮೂಲಕ, ಸಿನೆಮಾ ಕ್ಷೇತ್ರಕ್ಕೆ ಬರಬೇಕೆನ್ನುವ ಪ್ರತಿಭೆಗಳಿಗೆ ಪರಿದೃಶ್ಯ ಉತ್ತಮ ವೇದಿಕೆ. ಬೆಂಗಳೂರಲ್ಲಿ ಪ್ರಾರಂಭವಾದ ಪರಿದೃಶ್ಯ ಮುಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದ ಹಬ್ ಆಗಲಿರುವ ಮೈಸೂರಿಗೆ ರವಾನೆಯಾಗಿದ್ದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಣೈ, ಮೈಸೂರು ಸಿನೆಮಾ ಸೊಸೈಟಿಯ ಅಧ್ಯಕ್ಷ ಡಾ. ಚಂದ್ರಶೇಖರ ಸಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.

ಜಗತ್ತಿನಲ್ಲೇ ಭಾರತ ಕಥೆಗಳ ಆಗರ: ಕೇಂದ್ರ‌ಸಚಿವ ಡಾ.ಮುರುಗನ್ ಬಣ್ಣನೆ Read More

ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ನಿಂದ ವೃದ್ಧರಿಗೆ ಸ್ವೆಟರ್, ಮಫ್ಲರ್ ವಿತರಣೆ

ಮೈಸೂರು: ಕೆ ಆರ್ ಎಸ್ ರಸ್ತೆಯಲ್ಲಿರುವ ದಯಾಶಂಕರ ವೃದ್ಧಾಶ್ರಮ ಮತ್ತು ಪ್ರಕೃತಿ ವೃದ್ಧಾಶ್ರಮದವರಿಗೆ ಶ್ರೀ ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ಮತ್ತು ಲಿಟಲ್ ಸ್ಟಾರ್ ಕಿಂಡರ್ ಗಾರ್ಡನ್ ವತಿಯಿಂದ ಸ್ವೆಟರ್ ಮತ್ತು ಮಫ್ಲರ್ ವಿತರಿಸಿ‌ ಮಾದರಿಯಾಗಿದ್ದಾರೆ.

ಚಳಿ, ಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ವೃದ್ಧರಿಗೆ ಸ್ವೆಟರ್ ಮತ್ತು ಮಫ್ಲರ್ ವಿತರಿಸಿ ಆರೋಗ್ಯದ ಬಗ್ಗೆ ಗಮನ ನೀಡಬೇಕೆಂದು ತಿಳುವಳಿಕೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಶೋಭಾ ರಾಣಿ ಚಳಿಗಾಲದೊಂದಿಗೆ ಚಂಡಮಾರುತಗಳ ಪ್ರಭಾವದಿಂದ ಪ್ರಸ್ತುತ ದಿನಗಳಲ್ಲಿ‌ ಶೀತ ವಾತಾವರಣ ಹೆಚ್ಚಾಗಿದೆ, ಈ ನಿಟ್ಟಿನಲ್ಲಿ ಬಡವರಿಗೆ ಕೈಲಾದ ಸಹಾಯಮಾಡಬೇಕೆಂಬ ಉದ್ದೇಶದಿಂದ ಈ ಸಣ್ಣ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಮತಾ, ರೂಪ, ಶಿವು, ಜಯಂತಿ ,ಮಧು, ಕಾರ್ತಿಕ್ ಮತ್ತಿತರರು ಹಾಜರಿದ್ದರು.

ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ನಿಂದ ವೃದ್ಧರಿಗೆ ಸ್ವೆಟರ್, ಮಫ್ಲರ್ ವಿತರಣೆ Read More

ಅದ್ದೂರಿಯಾಗಿ ನೆರವೇರಿದ ಶ್ರೀ ಪಾರ್ವತಿ ದೇವಿಯ 9ನೆ ವಾರ್ಷಿಕೋತ್ಸವ

 

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಡಾ. ಅಣ್ಣಾಜಪ್ಪನವರ ನವಗ್ರಹ ಶ್ರೀ ಮೃತ್ಯುಂಜಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿ ದೇವಿಯ 9 ನೆ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿತು.

ಮುಂಜಾನೆ 6.30ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಂತರ ಗಣಪತಿ ಹೋಮ, ನವಗ್ರಹ ಹೋಮ ಮೃತ್ಯುಂಜಯ ಹೋಮ, ಪಾರ್ವತಿ ದೇವಿ ದುರ್ಗಾ ಹೋಮ ಹಮ್ಮಿಕೊಳ್ಳಲಾಯಿತು.

ತದನಂತರ ಪೂರ್ಣಾವತಿ ಮಾಡಲಾಯಿತು, ಕುಂಭಾಭಿಷೇಕದ ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಯಿತು.

ನೂರಾರು ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ದೇವಾಲಯದ ವ್ಯವಸ್ಥಾಪಕರಾದ ಶಿವಾರ್ಚಕ ಎಸ್. ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಮತ್ತಿತರರ ನೇತೃತ್ವದಲ್ಲಿ ಪುಜಾ ಕಾರ್ಯಗಳು ನೆರವೇರಿತು.

ಪಾರ್ವತಿ ತಾಯಿಗೆ ನೀಲಿ ಬಣ್ಣದ ಸೀರೆ ಉಡಿಸಿ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.ಇಡೀ ದೇಸ್ಥನ ವನ್ನು ತಳಿರು ತೋರಣ,ಹೂವಿನ ಹಾರದಿಂದ ಅಲಂಕರಿಸಿದ್ದು‌ ವಿಶೇಷವಾಗಿತ್ತು.

ಅದ್ದೂರಿಯಾಗಿ ನೆರವೇರಿದ ಶ್ರೀ ಪಾರ್ವತಿ ದೇವಿಯ 9ನೆ ವಾರ್ಷಿಕೋತ್ಸವ Read More