ಪಾರ್ಕ್ ಗಳನ್ನ ಅಭಿವೃದ್ಧಿ ಪಡಿಸಿ; ಪುಂಡರ ಹಾವಳಿ ತಪ್ಪಿಸಿ-ಶ್ರೀ ವತ್ಸ‌ ಸೂಚನೆ

ಮೈಸೂರು:ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಟಿ.ಎಸ್.ಶ್ರೀ ವತ್ಸ‌ ಸೂಚಿಸಿದರು.

ವಾರ್ಡ್ ನಂಬರ್ 61ರ ಸುತ್ತಮುತ್ತ ವಿದ್ಯಾರಣ್ಯಪುರಂ ಭಾಗಗಳಲ್ಲಿ ಇಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ರವರು ಅಧಿಕಾರಿಗಳೊಂದಿಗೆ ಪಾದಯಾತ್ರೆ ಮಾಡಿ ಸ್ಥಳೀಯರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಿದರು.

ಉದ್ಯಾನವನಗಳ ಸುತ್ತ ಗಿಡಗಳನ್ನು ಹಾಕಿಸುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಹಾಗೂ ರಾತ್ರಿಯ ಸಮಯದಲ್ಲಿ ಪುಂಡ ಹುಡುಗರು ಮಧ್ಯಪಾನ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ಸ್ಥಳೀಯ ನಿವಾಸಿಯಾದ ರಂಗರಾಜುರವರು ದೂರಿದರು.

ಮತ್ತೊಬ್ಬ ನಿವಾಸಿ ಪದ್ಮಮ್ಮನವರು ನಗರಪಾಲಿಕೆ ವತಿಯಿಂದ ಇರುವ ಮಳಿಗೆಗಳು ಶಿಥಿಲವಾಗಿದ್ದು, ಈ ಜಾಗಗಳಲ್ಲಿ ಪುಂಡ ಯುವಕರು ಅಸಭ್ಯ ವರ್ತನೆ ಮಾಡುತ್ತಾರೆ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಾದಯಾತ್ರೆ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ,ಇಂಜಿನಿಯರ್ ಚೇತನ್,ಅರೋಗ್ಯಾಧಿಕಾರಿ ಶಿವಪ್ರಸಾದ್,ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ ಉಸ್ತುವಾರಿ ಜೋಗಿಮಂಜು,ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್,ಶಿವಲಿಂಗ ಸ್ವಾಮಿ,
ಕಿಶೋರ್ ,ವಾಸು,ಶ್ರೀಧರ ಭಟ್,
ಮಹದೇವ್,ಮಂಗಳ,ಮಹದೇವಣ್ಣ,ಕಿಶೋರ್, ಪ್ರದೀಪ್,ಮತ್ತಿತರರು ಹಾಜರಿದ್ದರು.

ಪಾರ್ಕ್ ಗಳನ್ನ ಅಭಿವೃದ್ಧಿ ಪಡಿಸಿ; ಪುಂಡರ ಹಾವಳಿ ತಪ್ಪಿಸಿ-ಶ್ರೀ ವತ್ಸ‌ ಸೂಚನೆ Read More

ವಚನಗಳ ಮೂಲಕ ಬೆಳಕು ಚೆಲ್ಲಿದವರು ಅಂಬಿಗರ ಚೌಡಯ್ಯ:ಟಿ.ಎಸ್. ಶ್ರೀ ವತ್ಸ

ಮೈಸೂರು: ಮನುಷ್ಯರ ನಡುವೆ ಇದ್ದ ತಾರತಮ್ಯವನ್ನು ತೊಡೆದುಹಾಕಿ ತಮ್ಮ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ ಎಂದು ಶಾಸಕ ಟಿ.ಎಸ್. ಶ್ರೀ ವತ್ಸ ಬಣ್ಣಿಸಿದರು.

ಇಂತಹ ವಚನಕಾರರ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮoದಿರಲ್ಲಿ ಹಮ್ಮಿಕೊಂಡಿದ್ದ, ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವ ಮಂಟಪದ ಸುತ್ತ ನದಿ, ಹೊಳೆ ಏನು ಇಲ್ಲ ಹೇಗೆ ನೀವು ಅಂಬಿಗರ ವೃತ್ತಿಯನ್ನು ಮಾಡುತ್ತೀರಾ ಎಂದು ಕೇಳಿದಾಗ ಮಾನವ ಎಂಬ ಸಂಪನ್ಮೂಲ ಏನಿದೆ ಅದರ ಹೊಳೆಯಲ್ಲಿ ಮನುಷ್ಯರ ನಡುವೆ ತಾರತಮ್ಯ ಹೊಡೆದು ಹಾಕಿ ಅವರೆಲ್ಲರನ್ನೂ ದಡ ಸೇರಿಸುತ್ತೇನೆ. ಅವರಲ್ಲಿ ಸಮಾಜ ಶೋಷಣೆಗೆ ಒಳಗಾದ ಮನುಷ್ಯರನ್ನು ಮೇಲೆತ್ತುವ ಕಾಯಕವೇ ನನ್ನ ಅಂಬಿಗನ ವೃತ್ತಿ ಎಂಬ ವಿಚಾರವನ್ನು ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅನುಭವ ಮಂಟಪವನ್ನು ಮೊದಲ ಪಾರ್ಲಿಮೆಂಟ್ ಎಂದು ಕರೆಯುತ್ತೇವೆ. ಅನುಭವ ಮಂಟಪದ ಚಿತ್ರಣವನ್ನು ವಿಧಾನಸಭೆಯಲ್ಲಿ ಸ್ಪೀಕರ್ ಅವರು ಅನಾವರಣ ಮಾಡಿರುವುದು ಶ್ಲಾಘನೀಯ ಎಂದು ಶ್ರೀವತ್ಸ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯ ನವರ ವಚನವನ್ನು ಶುಭಕಾರ್ಯಗಳಲ್ಲಿ ಹೇಳುತ್ತಾ ಹೆಚ್ಚಿನ ಪ್ರಚಾರಕ್ಕೆ ಒಳಪಡಿಸುತ್ತ ಪ್ರಸ್ತುತದಲ್ಲಿಯೂ ಉಳಿದುಕೊಳ್ಳುವಂತೆ ಮಾಡಿದವರು ಅವರ ಮಗ ಎಂದು ಹೇಳಿದರು. ಜೊತೆಗೆ ನಮ್ಮೆಲ್ಲರಿಗೂ ಈ ಕಾಲದಲ್ಲಿಯೂ ಸಹ ಬೆಳಕನ್ನು ಚೆಲ್ಲುತ್ತ ಇರುವುದು ಅಂಬಿಗ ಚೌಡಯ್ಯ ನವರ ವಚನಗಳು ಎಂದು ತಿಳಿಸಿದರು.

ಮಹಾರಾಜ ಕಾಲೇಜಿನ, ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಆರ್.ಎನ್. ಪದ್ಮನಾಭ ಅವರು ಮಾತನಾಡಿ ಅಂಬಿಗರ ಚೌಡಯ್ಯ ದೈತ್ಯ ಪ್ರತಿಭೆ, ಮಹಾಯೋಗಿ, ಭಾರತ ದರ್ಶನದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ, ಅವರ ಅನುಭವದಿಂದ ಸತ್ಯವನ್ನು ತಿಳಿಸಿದ ಮಹಾಪುರುಷ, ಮಹಾಹರಿಕಾರ, ಕ್ರಾಂತಿಕಾರಿ ಚಿಂತಕ, ಎಲ್ಲದಕ್ಕಿಂತ ಮಿಗಿಲಾಗಿ ಇವರು ಸಮಾಜ ಸುಧಾರಕರು ಹಾಗೂ ನೇರ ನುಡಿಯನ್ನು ಹೊಂದಿದ್ದವರು. ಇಂತಹವರು ನಿಜವಾಗಿಯೂ ನಮ್ಮೆಲ್ಲರ ಬದುಕಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಇವರು ಏಕದೇವೋ ಉಪಸಕರಾಗಿದ್ದರು. ಶಿವನಲ್ಲಿ ದೇವರನ್ನು ನೆನೆದು ಹಸಿವನ್ನು ಮುಚ್ಚಿ, ಜನರನ್ನು ಗೌರವಿಸಿ ನಡೆದುಕೊಂಡರೆ ಮೋಕ್ಷ ಸಾಧ್ಯ ಎಂಬ ಮಾತನ್ನು 12 ನೇ ಶತಮಾನದಲ್ಲೇ ನಮಗೆ ಹೇಳಿದ್ದಾರೆ. 12 ನೇ ಶತಮಾನದಲ್ಲಿ ಹೇಳಿದ ಮಾತನ್ನು 21ನೇ ಶತಮಾನದಲ್ಲಿ ವೈಭವೀಕರಿಸಿ ನೋಡುತ್ತಿದ್ದೇವೆ ಎಂದರೇ ಅದು ಅವರು ಹೇಳಿದ ಮಾತು, ಮಾಡಿಕೊಂಡು ಬಂದ ಕೆಲಸ, ನಡೆದುಕೊಂಡು ಬಂದ ವಿಚಾರಗಳಿಗೆ ಎಷ್ಟು ಬೆಲೆ ಇದೆ ಇದನ್ನು ಕೇಳುತ್ತಿರುವ ನಾವೇ ಪುಣ್ಯವಂತರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಮುಖಂಡರಾದ ರಂಗಸ್ವಾಮಿ ಹಾಗೂ ಅಂಬಿಗರ ಚೌಡಯ್ಯ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವಚನಗಳ ಮೂಲಕ ಬೆಳಕು ಚೆಲ್ಲಿದವರು ಅಂಬಿಗರ ಚೌಡಯ್ಯ:ಟಿ.ಎಸ್. ಶ್ರೀ ವತ್ಸ Read More

ಕರ್ತವ್ಯ ಭವನಕ್ಕೆ ಸಾರ್ವಜನಿಕರಿಗೆಮುಕ್ತ ಪ್ರವೇಶ- ಟಿ.ಎಸ್ ಶ್ರೀ ವತ್ಸ

ಮೈಸೂರು: ಕ್ಷೇತ್ರದ ಜನತೆ ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸುವ ಮೂಲಕ ನನಗೆ ಹೆಚ್ಚಿನ ಜವಬ್ದಾರಿ ಕೊಟ್ಟಿದ್ದಾರೆ ಅವರ ಕೆಲಸವನ್ನು ಕರ್ತವ್ಯದ ರೀತಿಯಲ್ಲಿ ಸೇವೆ ಮಾಡುವುದು ನನ್ನ ಧರ್ಮ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಕೆ.ಅರ್.ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀ ವತ್ಸ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಅಗ್ರಹಾರದ ಬಳಿ ಇರುವ ವಲಯ ಕಚೇರಿಯಲ್ಲಿ ಪ್ರಾರಂಭಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ನನ್ನ ಕಚೇರಿಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಯಾವುದೆ ಕೆಲಸವಿದ್ದರು ಈ ಕಚೇರಿಗೆ ಬರಬೇಕೆಂದು ಮನವಿ ಮಾಡಿದರು.

ಕಚೇರಿ ಉದ್ಘಾಟನೆ ಸಂಧರ್ಭದಲ್ಲಿ ಬಂದು ಶುಭ ಹಾರೈಸಿದ ಮಠಾಧಿಶರುಗಳಿಗೆ, ಸಾರ್ವಜನಿಕರಿಗೆ, ನನ್ನ ಮತದಾರರಿಗೆ, ಅಧಿಕಾರಿಗಳಿಗೆ,ಕಾರ್ಯಕರ್ತರಿಗೆ, ನನ್ನ ಹಿತೈಶಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ,ಕೇಬಲ್ ಮಹೇಶ್, ನಗರ ಉಪಾಧ್ಯಕ್ಷ ಜೋಗಿಮಂಜು,ರಾಜ್ಯ ಕಾರ್ಯಕಾರಿಣಿ ಸದಸ್ಯ ಶೀನಿವಾಸ್,ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಕೆ.ಅರ್ ಯುವ ಮೊರ್ಚಾ ಅಧ್ಯಕ್ಷ ನಿಶಾಂತ್,ರವಿ,
ಲಖನ್,ಸತ್ಯಾನಂದ ವಿಟ್ಟು,ರಂಜನ್,ಶರತ್ ಭಂಡಾರಿ ಮತ್ತಿತರರು ಹಾಜರಿದ್ದರು.

ಕರ್ತವ್ಯ ಭವನಕ್ಕೆ ಸಾರ್ವಜನಿಕರಿಗೆಮುಕ್ತ ಪ್ರವೇಶ- ಟಿ.ಎಸ್ ಶ್ರೀ ವತ್ಸ Read More