ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲಗಳ ಪ್ರತಿಭಟನೆ

ಮೈಸೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಶನಿವಾರ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲಗಳವರು ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ,ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಖುರ್ಚಿ ಕಿತ್ತಾಟದಲ್ಲಿ ನಿರತವಾಗಿದೆ, ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಲು ವಿಳಂಬ ನೀತಿ ತೋರಿದ್ದು ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ದರ ದೊರಕುತ್ತಿಲ್ಲ, ರಾಗಿ ಹಾಗೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಪೈ. ಟಿ. ರವಿ ಲಕ್ಷ್ಮೀಪುರ, ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ರೈತ ಮೋರ್ಚಾ ನಗರಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಈರಪ್ಪ, ಉಪಾಧ್ಯಕ್ಷ ನಾಣಿಗೌಡ, ಹಿರಿಯ ಮುಖಂಡರಾದ ಎಸ್ ಡಿ ಮಹೇಂದ್ರ, ಹಿನಕಲ್ ಶ್ರೀನಿವಾಸ್, ಚಾಮುಂಡೇಶ್ವರಿ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ. ರಾಘವೇಂದ್ರ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಅಪ್ಪಾಜಿಗೌಡ, ಶಿವಕುಮಾರ್ ಚಿಕ್ಕಕಾನ್ಯ, ಈರೇಗೌಡ, ಉಪಾಧ್ಯಕ್ಷರಾದ ಶ್ರೀಕಂಠಸ್ವಾಮಿ, ಬಿ.ಸಿ.ಶಶಿಕಾಂತ್, ಸುನಿಲ್ ದಾರಿಪುರ, ಮುಖಂಡರಾದ ಮೋನಿಕಾ, ನಾರಾಯಣ, ಮಧು ಬ್ಯಾತಹಳ್ಳಿ, ಚೇತನ್, ರೈತ ಮೋರ್ಚಾ ಪದಾಧಿಕಾರಿಗಳಾದ ದೇವರಾಜ್, ಮಂಜುನಾಥ್ ಅರಸ್, ಗೋಪಾಲ್ ಅಯ್ಯಂಗಾರ್,
ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಎಸ್ ಮಹೇಶ್ ಕುಮಾರ್, ಪುಟ್ಟಮ್ಮಣ್ಣಿ, ವಸುಮತಿ, ರಾಧಾ, ಉಮೇಶ್, ಪ್ರದೀಪ್, ಸಂಪ್ರೀತ್, ಸದಾಶಿವರಾವ್, ಶ್ರೀರಂಗ, ಕೃಷ್ಣಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲಗಳ ಪ್ರತಿಭಟನೆ Read More

ರಾಮಕೃಷ್ಣನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜನರಿಂದ ಉತ್ತಮ ಸ್ಪಂದನೆ

ಮೈಸೂರು: ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಚಾಮುಂಡೇಶ್ವರಿ ನಗರ ಮಂಡಲದಿಂದ ರಾಮಕೃಷ್ಣ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರಂಭಿಸಲಾಗಿದ್ದು ಉತ್ತಮ ಸ್ಪಂದನೆ‌ ವ್ಯಕ್ತವಾಗಿದೆ.

ಅಭಿಯಾನದ ವೇಳೆ ಮನೆ,ಮನೆಗಳಿಗೆ ತೆರಳಿ ಸಾರ್ವಜನಿಕರನ್ನು ಭೇಟಿಯಾಗಿ ಮಿಸ್ಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯರಾಗುವ ಬಗೆಯನ್ನು ತಿಳಿಸಿಕೊಡಲಾಯಿತು.

ಲಿಂಕ್ ಹಾಗೂ ಒಟಿಪಿ ಮೂಲಕ ಅರ್ಜಿ ಬರೆಸಿ ನೂರಾರು ಕುಟುಂಬಗಳವರನ್ನು ಸದಸ್ಯರನ್ನು ಮಾಡಲಾಯಿತು.

ಈ ವೇಳೆ ಸಾರ್ವಜನಿಕರೊಬ್ಬರು ಇದರಿಂದ ನಮಗೇನು ಪ್ರಯೋಜನ ಎಂಬ ಪ್ರಶ್ನೆಯನ್ನು ಮಂಡಲದ ಅಧ್ಯಕ್ಷ ರಾಕೇಶ್ ಭಟ್ ಅವರಿಗೆ ಕೇಳಿದರು.

ಅದಕ್ಕೆ,ಚುನಾವಣಾ ಸಮಯದಲ್ಲಿ ಮಾತ್ರ ಜನರ ಮನೆ ಮುಂದೆ ಬರುವ ಬದಲು, ಮೊದಲೇ ಅವರ ಬಳಿ ಬಂದು ಅವರ ಪರಿಚಯದ ಜೊತೆಗೆ ಅಭಿಪ್ರಾಯ ಪಡೆದು ಸ್ಥಳೀಯ ಸಮಸ್ಯೆಗಳು ಹಾಗೂ ಇತರ ವಸ್ತುಸ್ಥಿತಿ ತಿಳಿದುಕೊಳ್ಳುವುದು, ಪಕ್ಷದ ವಿಚಾರಗಳನ್ನು ತಿಳಿಸಿ ಜನರಿಗೆ ಹತ್ತಿರವಾಗಿಸುವುದು ಎಂದು ತಿಳಿಹೇಳಿದರು.

ಇತ್ತೀಚೆಗೆ ಚುನಾವಣಾ ಸಮಯದಲ್ಲಿ ಮತದಾರರಿಗೆ ಉಚಿತಗಳ ಆಮಿಷವೊಡ್ಡಿ ಮತ ಪಡೆಯುವ ಚಾಳಿ ಪ್ರಾರಂಭವಾಗಿದ್ದು, ಅದರಿಂದ ಜನರಿಗೆ ಅಗತ್ಯ ವಸ್ತುಗಳ ದರ ಹೆಚ್ಚಳ, ದುಬಾರಿ ತೆರಿಗೆ, ಸರ್ಕಾರಕ್ಕೆ ಆರ್ಥಿಕ ಹೊರೆ, ಅಭಿವೃದ್ಧಿ ಕುಂಠಿತವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಹೆಚ್.ಜಿ.ರಾಜಮಣಿ, ಬಿ.ಸಿ.ಶಶಿಕಾಂತ್, ಶಿವಕುಮಾರ್, ಕಾಂತರಾಜ ಅರಸ್, ಎಸ್.ಸಿ.ಮೋರ್ಚಾ ನಗರ ಉಪಾಧ್ಯಕ್ಷರಾದ ಎನ್.ಪ್ರತಾಪ್, ಮಂಡಲ ಕಾರ್ಯದರ್ಶಿಗಳಾದ ವಿನುತ, ಕಲಾವತಿ, ಮೋರ್ಚಾಗಳ ಪದಾಧಿಕಾರಿಗಳಾದ ಚಂದನ್ ಗೌಡ, ಚಂದ್ರಶೇಖರ ಸ್ವಾಮಿ, ಶುಭಶ್ರೀ, ರಮಾಬಾಯಿ, ನವೀನ, ಮಹಾದೇವ, ರಾಧಾ ಮುತಾಲಿಕ್, ದೇವರಾಜು, ರಾಮಕೃಷ್ಣಪ್ಪ ಹಾಗೂ ಇತರರು ಭಾಗವಹಿಸಿದ್ದರು.

ಸಾಯಿ ಬಾಬಾ ದೇವಸ್ಥಾನದ ಅರ್ಚಕರಾದ ಪ್ರಸನ್ನ ಅವರು ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ ಮಾಡಿದರು.

ರಾಮಕೃಷ್ಣನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜನರಿಂದ ಉತ್ತಮ ಸ್ಪಂದನೆ Read More