ಜಾತ್ಯಾತೀತ ವ್ಯಾಪಾರಿ, ಜನಸ್ನೇಹಿ ಸತೀಶ್ ವಿರುದ್ಧ ಗಡಿಪಾರು ಯೋಚನೆ ಸರಿಯಲ್ಲ: ಮಹೇಶ್ ಕಾಮತ್

ಮೈಸೂರು, ಮಾ.12: ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಾಪಾರಿಯಾಗಿ ಹಲವಾರು ಮುಸ್ಲಿಂ ಸಮುದಾಯದವರಿಗೂ ಕೆಲಸ ನೀಡುತ್ತಿರುವ ಸತೀಶ ಅವರು ಉರ್ದು ತಿಳಿಯದೇ ಯಾರೋ ಕಳುಹಿಸಿದ್ದ ಪೋಸ್ಟರನ್ನ ಬಳಸಿದ್ದಕ್ಕೆ ಜೈಲಿಗೆ ಹೋಗಿ ಬರುವಂತಾದುದು ದುರಾದೃಷ್ಟವೇ ಸರಿ.

ವ್ಯಾಪಾರಿಯಾಗಿ ಹಲವಾರು ವರ್ಷದಿಂದ ಬಹಳಷ್ಟು ಜನರಿಗೆ ಅದರಲ್ಲೂ ಮುಸ್ಲಿಂ ಸಮುದಾಯದವರಿಗೂ ಕೆಲಸ ಕೊಟ್ಟು ಅರಿವಿಲ್ಲದೇ ಮಾಡಿದ ತಪ್ಪಿಗೆ ಶಿಕ್ಷೆಗೆ ಒಳಪಟ್ಟಿದ್ದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಬೇಸರ ಪಟ್ಟಿದ್ದಾರೆ.

ಇಂದು ಪೋಲೀಸರು ಸತೀಶ ಅವರನ್ನು ಗಡಿಪಾರು ಮಾಡಬೇಕೆಂದು ಆಲೋಚಿಸುತ್ತಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿಷಾದಿಸುತ್ತದೆ ಎಂದು ಅವರು‌ ತಿಳಿಸಿದ್ದಾರೆ.

ಸತೀಶ್ ಈ ಎಲ್ಲಾ ವಿಷಯದ ಬಗ್ಗೆ ಆದ ಮಾಹಿತಿ ನೀಡಿ ವಿಷಾದ ವ್ಯಕ್ತಪಡಿಸಿದರೂ ಕೂಡಾ ಪೋಲೀಸರು ಕ್ರಮ ವಹಿಸಲು ಮುಂದಾಗಿರುವುದು ಯಕ್ಷ ಪ್ರಶ್ನೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್
ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತೀಶ ಅವರೇ ಆದ ಅಚಾತುರ್ಯಕ್ಕೆ ಬೇಸರ ವ್ಯಕ್ತಪಡಿಸಿರುವುದು ಸಾಕಲ್ಲವೇ ಅವರು ಉರ್ದು ಬಾಷೆ ತಿಳಿಯದೇ ಯಾರೋ ಕಳುಹಿಸಿದ ಪೋಟೋ ಹಾಕಿರುವುದಾಗಿ ತಿಳಿಸಿಲ್ಲವೆ ಎಂದು ಕಾಮತ್ ಪ್ರಶ್ನಿಸಿದ್ದಾರೆ.

ಇಷ್ಟು ವರ್ಷ ಜಾತಿ ಧರ್ಮ ನೋಡದೇ ಕೆಲಸ ನೀಡಿರುವುದು ತಪ್ಪೇ, ಹಾಗಾದರೆ ಪೋಲೀಸರಿಗೆ ಯಾರ ಒತ್ತಡವಿದೆ ಡ್ರೈ ಪ್ರೂಟ್ ವ್ಯಾಪಾರಸ್ತರೇನಾದರೂ ಒತ್ತಡ ಹಾಕಿರಬಹುದೇ ಎಂದು ಕೆ ಮಹೇಶ ಕಾಮತ್ ಪ್ರಶ್ನಿಸಿದ್ದಾರೆ.

ಪೋಲೀಸರು ಈ ವಿಷಯಕ್ಕೆ ಕೂಡಲೇ ಇತಿಶ್ರೀ ಹಾಕಬೇಕು ಹಾಗೂ ಸತೀಶ್ ಅವರು ಯಾರ ಭಯದ ಇಲ್ಲದೆ ಮುಕ್ತವಾಗಿ ವ್ಯಾಪಾರ ಮಾಡಲು ಸಹಕರಿಸಬೇಕು ಗಡೀಪಾರು ಯೋಚನೆ ಬಿಡಬೇಕು ಎಂದು ಅವರು ಆಗ್ರಹಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಷಯವನ್ನು ಇಲ್ಲೇ ಮುಗಿಸಿ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸಲು ಪ್ರೇರೇಪಿಸಬೇಕು ಎಂದು ಕೆ ಮಹೇಶ ಕಾಮತ್ ಮನವಿ ಮಾಡಿದ್ದಾರೆ.

ಜಾತ್ಯಾತೀತ ವ್ಯಾಪಾರಿ, ಜನಸ್ನೇಹಿ ಸತೀಶ್ ವಿರುದ್ಧ ಗಡಿಪಾರು ಯೋಚನೆ ಸರಿಯಲ್ಲ: ಮಹೇಶ್ ಕಾಮತ್ Read More

ಹಿಂದುಗಳಿಗೆ ಸನಾತನ ಬೋರ್ಡ ರಚಿಸಿ:ಕೆ ಮಹೇಶ ಕಾಮತ್

ಮೈಸೂರು: ದೇಶದಲ್ಲಿ ಮುಸಲ್ಮಾನರಿಗೆ ವಕ್ಫ ಬೋರ್ಡ ಹಾಗೂ ಕ್ರೈಸ್ತರಿಗೆ ಅವರದೇ ಬೋರ್ಡ ಇದೆ,ಅದೇ ರೀತಿ ಬಹುಸಂಖ್ಯಾತರಾದ ಹಿಂದುಗಳಿಗೆ ಸನಾತನ ಬೋರ್ಡ ಏತಕ್ಕೆ ರಚಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾದ್ಯಕ್ಷ
ಕೆ ಮಹೇಶ ಕಾಮತ್ ಪ್ರಶ್ನಿಸಿದ್ದಾರೆ.

ಭಕ್ತರ ದೇಣಿಗೆಯಿಂದ ದೇವಸ್ಥಾನಗಳು ನಡೆಯುವಂತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಕೊಡಬೇಕು. ಸರ್ಕಾರವು ಕೇವಲ ಹಿಂದೂ ದೇವಾಲಯ ಮತ್ತು ಹಿಂದೂ ದಾರ್ಮಿಕ ಕೇಂದ್ರವನ್ನು ಮುಜರಾಯಿ ಇಲಾಖೆಗೆ ಒಳಪಡಿಸುವ ಬದಲು ದೇವಸ್ಥಾನದವರಿಗೂ ಆಡಳಿತ ನಡೆಸಲು ಬಿಡಬೇಕು ಎಂದು ಅವರು‌ ಆಗ್ರಹಿಸಿದ್ದಾರೆ.

ಇತ್ತೀಚೆಗೆ ತಿರುಪತಿ ಪ್ರಸಾದ‌ ಲಡ್ಡುವಿಗೆ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬೆರೆಸಿದ ಘಟನೆ ನಡೆದಿದೆ.

ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಸ್ಲೀಂ ಜನರಿಂದ ತುಪ್ಪ ಖರೀದಿಸಿದ ವಿಷಯವನ್ನು ಕೇಂದ್ರ ಸರ್ಕಾರ ಗಂಬೀರವಾಗಿ ಪರಿಗಣಿಸಿ ಸನಾತನ ಬೋರ್ಡ ರಚಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.

ಸ್ವಾಮೀಜಿಗಳಿಗೂ ಕೆಲವು ನಿಭಂದನೆಗಳನ್ನ ಹಾಕಬೇಕು ಯಾವುದೇ ಸ್ವಾಮೀಜಿ ಅನೈತಿಕ ಚಟುವಟಿಕೆಯಲ್ಲಿ ಬಾಗಿಯಾದದ್ದು ಸಾಬೀತಾದ ಕೂಡಲೇ ಅವರಿಗೆ ಕೂಡಲೇ ಆ ಸ್ಥಾನದಿಂದ ತೆಗೆದು ಹಾಕಿ ಸರಿಯಾದವರಿಗೆ ನೇಮಿಸುವಂತೆ ಮಾಡಬೇಕು.

ಹಿಂದುಗಳ ಮೇಲೆ ದೌರ್ಜನ್ಯವಾದಾಗ ಎಲ್ಲಾ ಸ್ವಾಮೀಜಿಗಳು ಹಿಂದುಗಳ ಪರವಾಗಿ ನಿಲ್ಲಲೇಬೇಕು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಹ ಉಲ್ಲೇಕಿಸಬೇಕು ಎಂದು ಮಹೇಶ್ ಕಾಮತ್ ಒತ್ತಾಯಿಸಿದ್ದಾರೆ.

ದೇವಸ್ಥಾನದ ಆದಾಯವನ್ನ ಕೇವಲ ಹಿಂದೂ ದೇವಾಲಯಗಳ ಅಭಿವ್ರದ್ದಿಗೆ ಉಪಯೋಗಿಸಬೇಕು,ಎಲ್ಲಾ ದೇವಸ್ಥಾನದಲ್ಲಿ ಹಿಂದೂಗಳಿಗೆ ಉಚಿತ ಊಟೋಪಚಾರ ಹಾಗೂ ತಂಗುವ ವ್ಯವಸ್ಥೆ ಮಾಡಿದರೆ ಭಕ್ತರ ಸಂಖ್ಯೆಯೂ ಹೆಚ್ಚುತ್ತದೆ ಹಾಗೆ ಆದಾಯವೂ ಹೆಚ್ಚುತ್ತದೆ ಎಂದು ಕೆ ಮಹೇಶ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಗಳಿಗೆ ಸನಾತನ ಬೋರ್ಡ ರಚಿಸಿ:ಕೆ ಮಹೇಶ ಕಾಮತ್ Read More