ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲೇ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್
ಪ್ರಶ್ನಿಸಿದ್ದಾರೆ.

ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ನೀರಾವರಿ ಇಲಾಖೆ ಏರ್ಪಡಿಸಿದ್ದ ಧನಗೆರೆ ಜಹಗೀರ್ ದಾರ್ ನಾಲೆ, ಸತ್ತೇಗಾಲ ಏತ ನೀರಾವರಿ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ನಂತರ ಶಾಸಕರು ಮಾತನಾಡಿದರು.

ಇದುವರೆಗೆ ಕಬಿನಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ. ಆ ಜವಾಬ್ದಾರಿಯನ್ನು ಎಇಇ ಗಳಾದ ರಾಮಕೃಷ್ಣ ಹಾಗೂ ರಮೇಶ್ ನೋಡಿಕೊಳ್ಳುತ್ತಿದ್ದರು ಈಗ ಕಾರ್ಯಪಾಲಕ ಅಭಿಯಂತರರಾಗಿ ಈರಣ್ಣರವರು ಬಂದಿದ್ದಾರೆ.

ನಾನು ಪ್ರತಿ ಭಾರಿ ಇಲ್ಲಿಗೆ ಬಂದಾಗಲೂ ನಾಲೆ ದುರಸ್ತಿ ಪಡಿಸಿ ಕೊಡುವಂತೆ ಒತ್ತಾಯ ಕೇಳಿ ಬರುತ್ತಿತ್ತು ಆದರೂ ಇದು ಜವಾಬ್ದಾರಿ ಕೆಲಸ. ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲಿ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ,ಇದು ಮದುವೆ ಮನೆಯಲ್ಲಿ ಗಂಜಿಗೆ ಅತ್ತಂತಾಗಿದೆ ಇಲ್ಲಿನ ಸ್ಥಿತಿ‌ ಎಂದು ‌ಬೇಸರ ಪಟ್ಟರು.

ಈ ಹೋಬಳಿಯ ರೈತರಿಗೆ ನೀರು ಕೊಡುವುದು ಸುಲಭ. ಈ ಜ್ವಲಂತ ಸಮಸ್ಯೆಗಳನ್ನು ನಿಮ್ಮ ಮುಂದೆ ಕುಳಿತು ಪರಿಹರಿಸಲು ಬಂದಿದ್ದೇನೆ ಕಾಲಾವಕಾಶ ಕೊಡಿ ವರ್ಷಕ್ಕೆ ಎರಡು ಬೆಳೆ ಬೆಳೆಯುವಂತಹ ಕೆಲಸ ಮಾಡುತ್ತೇನೆ. ಇದರಿಂದ ಧನಗೆರೆ ಜಹಗೀರ್ ದಾರ್ ನಾಲೆಯ 6060 ಎಕರೆ, ಸತ್ತೇಗಾಲ ಏತ ನೀರಾವರಿಯ 500 ಎಕರೆ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ 450 ಎಕರೆ ರೈತರ ಕುಟುಂಬಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.

ಆದರೆ ಹನೂರು ಕ್ಷೇತ್ರದ ಉಳಿದ ಹೋಬಳಿಗಳ ರೈತರ ಜಮೀನುಗಳಿಗೆ ನೀರು ತೆಗೆದುಕೊಂಡು ಹೋಗುವುದು ದುಸ್ಥರ. ಕೃಷಿಗೆ ನೀರಿಲ್ಲದೆ ಈಗಾಗಲೇ ಶೇಕಡ 30 ರಷ್ಟು ರೈತರು ಗುಳೆ ಹೋಗಿದ್ದಾರೆ, ಒಟ್ಟಾರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ 52 ಕೋಟಿ ಅನುದಾನ ಬಂದಿದೆ. ಅದನ್ನು ಅನುಮೋದನೆ ಮಾಡಿಸಿ ಹಣ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ. 52 ಕೋಟಿ ರೂ.ಗಳಿಗೆ ಡಿ.ಪಿ.ಆರ್ ಮಾಡದೆ ಆಗಲೇ ಎರಡು ಕೋಟಿ ಅನುದಾನ ತಂದಿದ್ದೆ ಎಂದರು.

ನೀರಿನ ಲಭ್ಯತೆಗೆ ದಾರಿ ಹುಡುಕುತ್ತೇನೆ ಆದರೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ವಾಗಬೇಕಿದೆ. ಇಲ್ಲಿ ಕನಿಷ್ಠ ಅಂತರ್ಜಲವಿದ್ದು, ಹೆಚ್ಚು ಕೆಲಸವಾಗಬೇಕು, ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದೇನೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಮುಂದಿನ ವರ್ಷದೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಬಿನಿ ಕಚೇರಿಯಲ್ಲಿ ಸಭೆ ಕರೆಯಲು ಚರ್ಚಿಸಲು ಅವಕಾಶ ಮಾಡಿಕೊಡಿ,ಇವೇ ಮುಂತಾದ ಬೇಡಿಕೆಗಳನ್ನು ರೈತರು ಶಾಸಕರ ಮುಂದಿಟ್ಟರು.

ಮಾರಮ್ಮ ದೇವಸ್ಥಾನದಿಂದ ಕಾವೇರಿ ನದಿ ಹೋಗುವ ರಸ್ತೆ ತೀರಾರ ಹದಗೆಟ್ಟಿದ್ದು ಕೂಡಲೇ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು 3.20 ಕೋಟಿ ರೂ ಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
 
ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡುತ್ತೇವೆ. ಶೇಕಡ 75 ರಷ್ಟು ಇಲ್ಲಿ ಒಣ ಭೂಮಿ ಇದೆ ಶೇ. 35 ರಿಂದ 40 ರಷ್ಟು ರೈತರು ಗುಳೆ ಹೋಗಿದ್ದಾರೆ ಅವರುಗಳನ್ನು ಕರೆತಂದು ಮತ್ತೆ ರೈತರಿಂದ ಪುನರ್ ಕೃಷಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ, ಚಿಕ್ಕರವಳಿ, ಕಾಂತಣ್ಣ, ಕಬಿನಿ ಇಲಾಖೆ ಕಾರ್ಯಪಾಲಕ ಅಬಿಯಂತರ  ಈರಣ್ಣ,ಸಹಾಯಕ ಕಾರ್ಯಪಾಲಕ ಅಬಿಯಂತರರುಗಳಾದ ರಾಮಕೃಷ್ಣ, ರಮೇಶ್, ಜಿ.ಪಂ. ಎಇಇ ಹಾಗೂ ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಸತ್ತೇಗಾಲ ಪಿಡಿಒ ಜುನೈದ್ ಅಹಮದ್, ಧನಗೆರೆ ಪಿಡಿಒ ಕಮಲ್ ರಾಜು, ಮತ್ತಿತರರು ಪಾಲ್ಗೊಂಡಿದ್ದರು.

ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ Read More

ಕೈವಾರ ತಾತಯ್ಯ ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು:ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಪ್ರಮುಖರು, ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.

ಪಟ್ಟಣದ ಬಳೇಪೇಟೆಯಲ್ಲಿ ಶ್ರಿ ಬಲಿಜಿಗ ಕುಲಬಾಂದವರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಕೈವಾರ ತಾತಯ್ಯನವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ ಕೈವಾರ ತಾತಯ್ಯನವರ ಬಗ್ಗೆ ಅಷ್ಟೊಂದು ತಿಳಿದಿಲ್ಲ. ಇಂದು ತಂತ್ರಜ್ಞಾನ ಬಹಳ ಮುಂದುವರೆದಿದೆ ಮೊಬೈಲ್ ನಲ್ಲಿ ಆಪ್ ಓಪನ್ ಮಾಡಿದರೆ ಗೂಗಲ್ ನಲ್ಲಿ ಎಂತಹ ಇತಿಹಾಸವನ್ನಾದರೂ ತಿಳಿದುಕೊಳ್ಳಬಹುದು, ನಾನು ಕೂಡ ಗೂಗಲ್ ಮುಖಾಂತರ ಸಾಕಷ್ಟು ವಿಚಾರಗಳನ್ನು ತಿಳಿದು ನಿಮ್ಮ ಮುಂದೆ ಪ್ರಚುರಪಡಿಸುತ್ತಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳಿದರು.

ಅಲ್ಲಿ ವ್ಯಕ್ತವಾಗಿರುವಂತೆ ನಮ್ಮ ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಕೂಡ ಪ್ರಮುಖರು. ಅವರು ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು ಪ್ರಕೃತಿಯ ಅವಿಭಾಜ್ಯ ಅಂಗವಾದ ಮಾನವನ ಪ್ರತಿ ಕೃತಿಯನ್ನು ಪೂಜಿಸಬೇಕು ಸ್ವೇಚ್ಛಾಚಾರಕ್ಕೆ ಬಳಸಿಕೊಂಡರೆ ಆಗಬಹುದಾದ ಅನಾಹುತಗಳನ್ನು ಆಡು ಭಾಷೆಯಲ್ಲಿ ಕಟ್ಟಿಕೊಟ್ಟ ಭವಿಷ್ಯವಾಣಿ ಅತ್ಯಂತ ಮಹತ್ವವಾದದ್ದು. ಅಂದರೆ ಒಳಿತನ್ನು ಮಾಡಿ ಒಳಿತನ್ನು ಪಡೆ ಎಂಬ ಅಂಶ ಇಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಪ್ರಮುಖರಾದ ಎಂ ಎಸ್ ರಾಮಯ್ಯ ಅವರು ಈ ಸಮಾಜದವರು, ಹಾಗೆಯೇ ಮಾಜಿ ಸಚಿವರಾದ ಸೀತಾರಾಮಯ್ಯರವರು ನನಗೆ ಚುನಾವಣೆಯಲ್ಲಿ ಸಿದ್ದರಾಮಯ್ಯರವರೊಡಗುಡಿ ಸಾಕಷ್ಟು ಸಹಾಯ ಮಾಡಿದ್ದಾರೆ, ಪಿ ಸಿ ಮೋಹನ್ ಅವರು ಹಾಗೂ ನಾನು ಸಹಪಾಠಿಗಳು 1994ರಲ್ಲಿ ಅವರು ನನ್ನೊಡನೆ  ಶಾಸಕರಾಗಿದ್ದರು ಎಂದು ಸ್ಮರಿಸಿದರು. ಪ್ರಾರಂಭದಲ್ಲಿ ಕೊಳ್ಳೇಗಾಲದಲ್ಲಿ ಕೆಲವೇ ಕೆಲವು ಕುಟುಂಬಗಳಿದ್ದ ಈ ಸಮಾಜ ಈಗ ಸಾಕಷ್ಟು ಬೆಳವಣಿಗೆಯಾಗಿರುವಂತಹದ್ದನ್ನು ನಾವು ಕಾಣುತ್ತೇವೆ ಎಂದು ಶಾಸಕರು ಸಂತಸ‌ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ನಾರಾಯಣಪ್ಪ ನವರಾಗಿ ಜನಿಸಿದ ತಾತಯ್ಯರವರು ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯರನ್ನು ಕಳೆದುಕೊಂಡು 50 ವರ್ಷ ಬಲಿಜ ಜನಾಂಗದ ಕುಲಕಸುಬಾದ ಬಳೆ ಹಾಗೂ ಮುತ್ತೈದೆಯರ ಸಾಮಾನುಗಳನ್ನು ವ್ಯಾಪಾರ ಮಾಡುತ್ತಾ ಬದುಕಿದ್ದವರು. ನಾರಾಯಣಪ್ಪ ರವರು ಲೌಕಿಕ ಜೀವನದಿಂದ ಬೇಸತ್ತು ಕೈವಾರದಲ್ಲಿರುವ ನರಸಿಂಹಸ್ವಾಮಿ ಗುಹೆಯಲ್ಲಿ ಒಂಬತ್ತು ವರ್ಷ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದು ಅಪಾರ ಜ್ಞಾನವನ್ನು ಸಂಪಾದಿಸಿದವರು. ಯೋಗಿಗಳಾಗಿ ನಾರಾಯಣಪ್ಪ ಅವರು ಕಾಲಜ್ಞಾನಿಗಳಾಗಿ ಕೀರ್ತನೆ ಮತ್ತು ತತ್ವಪದಗಳಿಂದ ಖ್ಯಾತರಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾವಿರಾರು ತತ್ವಪದಗಳನ್ನು ರಚಿಸಿದ್ದಾರೆ ಎಂದು ಕೃಷ್ಣಮೂರ್ತಿ ತಿಳಿಸಿದರು.

ನಮ್ಮದು ಹಿಂದೂ ಸಂಪ್ರದಾಯ. ಧಾರ್ಮಿಕವಾಗಿ ಅನೇಕ ದೇವರುಗಳನ್ನು ಪೂಜಿಸುತ್ತೇವೆ. ಅದಕ್ಕಾಗಿ ಒಂದು ದೇವಾಲಯ ನಿರ್ಮಾಣ ವಾಗಬೇಕು ಎಂದು ಜಾಗ ಕೇಳಿದ್ದೀರಿ, ನಗರ ಪ್ರದೇಶದಲ್ಲಿ ಜಾಗ ಸಿಗುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಯಾವುದಾದರೂ ಪುರಾತನ ದೇವಾಲಯವಿದ್ದರೆ ತಿಳಿಸಿ ಅದನ್ನೇ ಜೀರ್ಣೋದ್ಧಾರ ಮಾಡಲು ನನ್ನ ಸಹಕಾರ ಇರುತ್ತದೆ ಎಂದು ಹೇಳಿದ್ದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸವಾಗಬೇಕಾದರೆ ನನ್ನ ಇತಿ ಮಿತಿಯೊಳಗೆ ಸ್ಪಂದಿಸಿ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ. ಸಮಾಜದ ಅಭಿವೃದ್ಧಿಗೆ ನೀವು ಒಂದಾಗಿ ಎಂದು ಬಲಿಜ ಸಮುದಾಯಕ್ಕೆ ಕರೆ ನೀಡಿದರು.

ಬಹಳಷ್ಟು ರಾಜಕಾರಣಿಗಳು ಸಣ್ಣ ಪುಟ್ಟ ಸಮುದಾಯಗಳು ಕರೆದರೆ ಕಾರ್ಯಕ್ರಮಗಳಿಗೆ ಬರುವುದಿಲ್ಲ ಆದರೆ ನಾನು ನಿಮ್ಮ ಕರೆಗೆ ಓಗೊಟ್ಟು ಬಂದಿದ್ದೇನೆ ಎಂದು ಶಾಸಕರು ಹೇಳಿದರು.

ಈ ವೇಳೆ ಶಾಸಕ ಕೃಷ್ಣಮೂರ್ತಿ ಅವರನ್ನು ಬಲಿಜ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೈವಾರ ತಾತಯ್ಯನವರ ಬಗ್ಗೆ ಮಹೇಶ್ ಮಾತನಾಡಿದರು

ಸಮಾರಂಭದಲ್ಲಿ ಬಲಿಜಗ ಕುಲಬಾಂಧವರ ಸಂಘದ ಅಧ್ಯಕ್ಷ ಉದಯ ಕುಮಾರ್, ಸಿಟಿ ಪ್ಯಾಶನ್ ಮಹೇಶ್, ಹನೂರು ಮುಖಂಡ ವೆಂಕಟೇಶ್, ಸಂಸದ ಜಗದೀಶ್ ಶೆಟ್ಟರ್ ಆಪ್ತ ಸಹಾಯಕ ಗಿರೀಶ್ ಬಾಬು, ನಗರಸಭೆ ಸದಸ್ಯ ಪರಮೇಶ್ವರಯ್ಯ, ಬಿಜೆಪಿ ಮುಖಂಡ ಚಿಕ್ಕಲಿಂಗೆಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೈವಾರ ತಾತಯ್ಯ ಮಾನವ ಕುಲದ ಬಗ್ಗೆ ಚಿಂತಿಸಿದ್ದ ಮಹಾನ್ ಸಂತರು:ಕೃಷ್ಣಮೂರ್ತಿ Read More

ಪ್ರೀತಿಸಿದವಳು ಮದುವೆ ನಿರಾಕರಿಸಿದ್ದಕ್ಕೆ‌ ಪ್ರೇಮಿ ಆತ್ಮಹತ್ಯೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.6: ಪ್ರೀತಿಸಿದವಳು ಮದುವೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಪ್ರೇಮಿಯೊಬ್ಬ ಹುಣಸೆ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಜಾಗರಿಯ ಶಿಲ್ವೈಪುರ ಗ್ರಾಮದ ಶೇಷು ರಾಜು ಅವರ ಮಗ ಜಾನ್ಸನ್ ವಿಜಿ (22) ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ.

ಈತ ಮಂಡ್ಯದ ಕಲ್ಲು ಕೋರೆಯೊಂದರಲ್ಲಿ ಕಾರ್ಮಿಕ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದ.

ಕಳೆದ ಎರಡು ವರ್ಷಗಳಿಂದ ಸಮೀಪದ ಸಿ.ಆರ್.ನಗರದ ಜಪಮಾಲೆ ಎಂಬುವರ ಮಗಳು 21 ವರ್ಷದ ಮೇರಿ ಅಂಜಲಿ ಎಂಬುವುದನ್ನು ಪ್ರೀತಿಸುತ್ತಿದ್ದ.

ಮೇರಿ ಅಂಜಲಿ ಮಂಗಳೂರಿನ ಕಾಲೇಜಲ್ಲಿ ವ್ಯಾಸಂಗ ಮಾಡಿಕೊಂಡು ಅಲ್ಲಿಯೇ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದಳು.

ಇವರಿಬ್ಬರ ಪ್ರೀತಿಗೆ ಅಂಜಲಿ ಪೋಷಕರ ತೀವ್ರ ವಿರೋಧವಿತ್ತು.

ಕಳೆದ ಒಂದುವರೆ ವರ್ಷಗಳಿಂದ ಮೇರಿ ಅಂಜಲಿ ಮಂಗಳೂರು ತೊರೆದು ಜಾನ್ಸನ್ ವಿಜಿ ಕೆಲಸ ಮಾಡುತ್ತಿದ್ದ ಮಂಡ್ಯದಲ್ಲಿ ಬಂದು ಒಟ್ಟಿಗೆ ಉಳಿದುಕೊಂಡಿದ್ದರು.

ಆರು ತಿಂಗಳಿಂದೀಚೆಗೆ ಇಬ್ಬರು ಮಂಡ್ಯ ತೊರೆದು ಸ್ವಗ್ರಾಮ ಶಿಲ್ವೈಪುರಕ್ಕೆ ಬಂದು ಬೇರೆ ಮನೆ ಮಾಡಿಕೊಂಡು ವಾಸವಿದ್ದರು.

ಇಲ್ಲಿಗೆ ಬಂದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಗ್ರಾಮದ ಮುಖಂಡರು ಇಬ್ಬರಿಗೂ ಒಟ್ಟಿಗೆ ಜೀವನ ಮಾಡಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದರು.

ಮತ್ತೆ ಇಬ್ಬರು ಜಗಳ ಮಾಡಿಕೊಂಡು ಮೇರಿ ಅಂಜಲಿ ಇದೆ ಏಪ್ರಿಲ್ 3 ರಂದು ಇಲ್ಲಿನ ಗ್ರಾಮಾಂತರ ಠಾಣೆಗೆ ಬಂದು ವಿಜಿ ವಿರುದ್ಧ ದೂರು ನೀಡಿದ್ದಳು.

ದೂರು ಸ್ವೀಕರಿಸಿದ ಗ್ರಾಮಾಂತರ ಠಾಣೆ ಎ ಎಸ್ ಐ ಮಲ್ಲಿಕಾರ್ಜುನ ಸ್ವಾಮಿ ಮುಖಂಡರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಲು ಮುಂದಾದರೂ ಮೇರಿ ಅಂಜಲಿ ಈತ ತುಂಬಾ ಕುಡಿಯುತ್ತಾನೆ ಈತನನ್ನು ಮದುವೆಯಾದರೆ ನನ್ನ ಜೀವನ ಹಾಳಾಗುತ್ತದೆ ಎಂದು ಜಾನ್ಸನ್ ವಿಜಿಯನ್ನು ಮದುವೆಯಾಗಲು ಕಡಕ್ಕಾಗೇ ನಿರಾಕರಿಸಿದ್ದಳು.

ಇದರಿಂದ ಮನನೊಂದು ಜಾನ್ಸನ್ ವಿಜಿ ಮೇರಿ ಅಂಜಲಿಯನ್ನು ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರು ಇದನ್ನು ಧಿಕ್ಕರಿಸಿ ಠಾಣೆಯಿಂದ ಹೊರ ಹೋದಳು.

ಮಾರನೆಯ ದಿನ ಮೇರಿ ಅಂಜಲಿ ಬೆಂಗಳೂರಿಗೆ ಹೊರಟು ಹೋಗಿದ್ದಳು. ಇದೆಲ್ಲದರಿಂದ ಜಿಗುಪ್ಸೆಗೊಂಡ ಜಾನ್ಸನ್ ವಿಜಿ ತಮ್ಮ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಸೀರೆಯಿಂದ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಮೃತನ ತಂದೆ ಶೇಷುರಾಜು ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೀತಿಸಿದವಳು ಮದುವೆ ನಿರಾಕರಿಸಿದ್ದಕ್ಕೆ‌ ಪ್ರೇಮಿ ಆತ್ಮಹತ್ಯೆ Read More

ಬಸ್, ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು 15 ಮಂದಿಗೆ ಗಂಭೀರ ಗಾಯ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೆ.ಎಸ್.ಆರ್.ಟಿ. ಸಿ ಬಸ್ ಹಾಗೂ ಟಾಟಾಏಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ 15 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದಲ್ಲಿಂದು ನಡೆದಿದೆ.

ಕೊಳ್ಳೇಗಾಲ ಸಮೀಪದ ಸಿದ್ದಯ್ಯನಪುರ ಗ್ರಾಮದ ಬಳಿ ಇಂದು ಮಧ್ಯಾಹ್ನ ಈ ಭೀಕರ ಅಪಘಾತ ಸಂಭವಿಸಿದ್ದು,
ತಾಲೂಕಿನ ಬಾನೂರು ಗ್ರಾಮದ ರಾಜಮ್ಮ (53) ಶೃತಿ (30) ಮೃತ ದುರ್ದೈವಿಗಳು.

ರತ್ನಮ್ಮ, ಹರ್ಷಿತ, ನಿಂಗರಾಜು, ಸುಧಾ, ಗೌತಮ್, ಪ್ರಕಾಶ್, ರಮೇಶ್, ಮಹೇಶ್, ರಾಧಮ್ಮ, ಸಣ್ಣಮ್ಮ, ಸಿಂಧು, ಮಹದೇವ ಅವರುಗೆ ಗಂಭೀರ ಗಾಯಗಳಾಗಿವೆ.

ಎಲ್ಲರೂ ಕೊಳ್ಳೇಗಾಲದಿಂದ ಟಾಟಾ ಏಸ್ ನಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ಹನೂರು ಕಡೆಯಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಸಿದ್ದಯ್ಯನಪುರದ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ, 15 ಮಂದಿ ಗಾಯಗೊಂಡಿದ್ದಾರೆ.

ವಿಷಯ ತಿಳಿದ ಕೂಡಲೇ ಕೊಳ್ಳೇಗಾಲ ಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಲ್ಲಿನ ವೈದ್ಯರಾದ ಡಾಕ್ಟರ್ ರಾಜಶೇಖರ್ ಡಾಕ್ಟರ್ ದಿಲೀಪ್ ಡಾಕ್ಟರ್ ರಮೇಶ್ ಹಾಗೂ ಇತರ ವೈದ್ಯರು ತುರ್ತು ಪ್ರಥಮ ಚಿಕಿತ್ಸೆ ನೀಡಿದರು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಯಿತು.ಆಸ್ಪತ್ರೆ ಮುಂದೆ ಜನಜಾತ್ರೆ ಸೇರಿದೆ.

ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ಬಸ್, ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು 15 ಮಂದಿಗೆ ಗಂಭೀರ ಗಾಯ Read More

ಇಬ್ಬರ ಬಂಧನ:ಒಣ‌ ಗಾಂಜಾ ವಶ

ಕೊಳ್ಳೇಗಾಲ: ಮಾರಾಟ ಮಾಡಲು ಒಣ ಗಾಂಜಾ ಬೈಕಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಅರೇಪಾಳ್ಯ ಗ್ರಾಮದ ವಿನ್ಸೆಂಟ್ (35) ಹಾಗೂ ಜಕ್ಕಳ್ಳಿ ಗ್ರಾಮದ ಜಾನ್ ಬ್ರಿಟೋ(33) ಬಂಧಿತ ಆರೋಪಿಗಳು.

ಆರೋಪಿಗಳು ರಾತ್ರಿ 10 ಗಂಟೆ ವೇಳೆ ಜಕ್ಕಳ್ಳಿ ಗ್ರಾಮದಿಂದ ಕೊಳ್ಳೇಗಾಲ ಪಟ್ಟಣದ ಕಡೆಗೆ ಒಣಗಾಂಜಾ ಮಾರಾಟ ಮಾಡುವ ಸಲುವಾಗಿ  KA-10-EG-2177 ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ ಲಿಂಗಣಾಪುರ ಮಾರ್ಗವಾಗಿ ಬರುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಆಧಾರಿಸಿ ಲಿಂಗಣಾಪುರ ಸರ್ಕಲ್ ನಲ್ಲಿ ಬೈಕ್ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ 400 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.

ಕೂಡಲೇ ಆರೋಪಿಗಳು ಮತ್ತು ಬೈಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನ ಕ್ಕೆ ಕಳುಹಿಸಲಾಗಿದೆ.

ಪಿಎಸ್ಐ ವರ್ಷ ಅವರ ನೇತೃತ್ವದಲ್ಲಿ ಅಪರಾಧ ದಳದ ಸಿಬ್ಬಂದಿಗಳಾದ ಎಎಸ್ಐ ತಖೀವುಲ್ಲಾ, ರವಿ, ಕಿಶೋರ್, ವೆಂಕಟೇಶ್, ಬಿಳಿಗೌಡ,ಶಿವಕುಮಾರ್ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಅನಿಲ್, ರಾಜು, ಸಂಜಯ್ ಮತ್ತು ವೀರೇಂದ್ರ ದಾಳಿ ನಡೆಸಿದರು.

ಇಬ್ಬರ ಬಂಧನ:ಒಣ‌ ಗಾಂಜಾ ವಶ Read More

ವಿದ್ಯುತ್ ಕಂಬ ಏರಿತಾಯಿಯ ಕಣ್ಣೆದುರೇ ಪ್ರಾ*ಬಿಟ್ಟ ಮಗ

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಮಾ.18: ಹೈ-ಟೆನ್ನನ್‌ ವಿದ್ಯುತ್ ಕಂಬ ಏರಿ ಯುವಕನೊಬ್ಬ ತನ್ನ ತಾಯಿಯ ಕಣ್ಣೆದುರೇ ಪ್ರಾಣಬಿಟ್ಟಿರುವ ಧಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಗ್ರಾಮದ ಬಳಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿಯ ಮಗ ಮಸಣಶೆಟ್ಟಿ (27) ಮೃತ ದುರ್ದೈವಿ.

ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ ಈತ ಮದ್ಯವ್ಯಸನಿಯಾಗಿದ್ದು ಮದುವೆ ಮಾಡಿಕೊಡುವಂತೆ ಮನೆಯಲ್ಲಿ ತಂದೆ ತಾಯಿಯನ್ನು ಪೀಡಿಸುತ್ತಿದ್ದ.

ಇದಕ್ಕೆ ಮನೆಯವರು ನೀನು ಕುಡಿತಬಿಡು ಮದುವೆ ಮಾಡುತ್ತೇವೆ ಎಂದು ಹೇಳುತ್ತಿದ್ದರು ಇದೇ ವಿಚಾರಕ್ಕೆ ಮೃತ ಮಸಣಶೆಟ್ಟಿ ಆಗಾಗ ಮನೆಯಲ್ಲಿ ಕ್ಯಾತೆ ತೆಗೆದು ಗಲಾಟೆ ಮಾಡುತ್ತಿದ್ದ.

ಕಳೆದ ಮೂರು ದಿನಗಳಿಂದ ಮತ್ತೆ ಕ್ಯಾತೆ ತೆಗೆದು ಮನೆಯಲ್ಲಿ ಜೋರು ಗಲಾಟೆ ಮಾಡಿದ್ದ.

ಇಂದು ಬೆಳಗ್ಗೆ ಮನೆಯಿಂದ ಬಂದು ಮಸಣಶೆಟ್ಟಿ ಲಿಂಗನಪುರ ಬಳಿ ಜಮೀನಿನಲ್ಲಿ ಹಾಯ್ದು ಹೋಗಿರುವ ಹೈಟೆನ್ಷನ್ ವಿದ್ಯುತ್ ಕಂಬದ ಏರಿದ್ದ.

ಇದನ್ನು ಕಂಡು ಗಾಬರಿಗೊಂಡ ಜಮೀನಿನ ಮಾಲೀಕ ಸಂಬಂಧ ಪಟ್ಟ ಇಲಾಖೆಗೆಪಕ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಚೆಸ್ಕಾಂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಹೈ ಟೆನ್ಷನ್ ಕಂಬ ಏರಿ ಕುಳಿತಿದ್ದ ಮಸಣಶೆಟ್ಟಿಯನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ ತನ್ನ ತಾಯಿಯನ್ನು ಕರೆಸುವಂತೆ ಕೇಳಿಕೊಂಡಿದ್ದಾನೆ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಬಂದ ಕೂಡಲೇ ಯಾರ ಮನವೊಲಿಕೆಗೂ ಜಗ್ಗದೆ ಆಕೆಯ ಕಣ್ಣೆದುರೇ ವಿದ್ಯುತ್ ಲೈನ್ ಹಿಡಿದಿದ್ದಾನೆ, ಕ್ಷಣಮಾತ್ರದಲ್ಲಿ ಆತ ಮೃತಪಟ್ಟಿದ್ದಾನೆ.

ಆ ಸಂದರ್ಭದಲ್ಲಿ ಹೈ-ಟೆನ್ಷನ್ ತಂತಿಯಲ್ಲಿ ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸಲಾಗಿತ್ತು,ಆದರೂ ಇಂಡೆಕ್ಸ್ ನಲ್ಲಿ ಶೇಖರಣೆಯಾಗಿದ್ದ ವಿದ್ಯುತ್ ಶಾಖಕ್ಕೆ ಮಸಣಶೆಟ್ಟಿ ಪ್ರಾಣ ಹೋಗಿದೆ.

ಘಟನೆಯ ನಂತರ ಮೃತದೇಹವನ್ನು ಹೈಟೆನ್ಶನ್ ಕಂಬದಿಂದ ಇಳಿಸಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆಯ ನಂತರ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬ ಏರಿತಾಯಿಯ ಕಣ್ಣೆದುರೇ ಪ್ರಾ*ಬಿಟ್ಟ ಮಗ Read More

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೇಸಿಗೆ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ಪರಿಸ್ಥಿತಿ ನಿಭಾಯಿಸಿ ಎಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾ. ಪಂ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರಿಸ್ಥಿತಿ ನಿಭಾಯಿಸುವ ಸಂಬಂಧ ಹಾಗೂ ಸ್ವಚ್ಛತೆ ಕುರಿತು ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯ ಪಾಲಕ ಅಭಿಯಂತರರು ಹಾಗೂ ಗ್ರಾ.ಪಂ. ಪಿ.ಡಿ.ಒ ಗಳ ಸಭೆಯಲ್ಲಿ ಮಾತನಾಡಿದ ಅವರು ಬೇಸಿಗೆಯಲ್ಲಿ ನೀರಿನ ಭವಣೆ ಎದುರಿಸಲು ತಕ್ಷಣದಿಂದಲೇ ಸಜ್ಜಾಗಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದ ಹಾಗೆ ಮುಂಜಾಗ್ರತೆ ವಹಿಸುವ ಸಲುವಾಗಿ ಮಾರ್ಚ್ 1 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹಾಗೆಯೇ ಮಾರ್ಚ್ 7 ರಂದು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ವ್ಯಾಪ್ತಿಯ ಗ್ರಾ.ಪಂ. ಗಳ ಸಭೆ ನಡೆಸಲಾಗುತ್ತಿದೆ ಎಂದು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ ಸಭೆಯಲ್ಲಿ ತಿಳಿಸಿದರು

ಸಭೆಯಲ್ಲಿ ಭಾಗವಹಿಸಿದ್ದ ಪಾಳ್ಯ, ಚಿಕ್ಕಲ್ಲೂರು, ತೆಳ್ಳನೂರು, ಧನಗೆರೆ, ಸತ್ತೇಗಾಲ, ಮದುವನಹಳ್ಳಿ, ದೊಡ್ಡಿಂದುವಾಡಿ ಸಿಂಗನಲ್ಲೂರು, ಕೊಂಗರಹಳ್ಳಿ, ಗ್ರಾಮ ಪಂಚಾಯಿತಿಗಳ ಪಿಡಿಒಗಳು ನಮ್ಮ ಪಂಚಾಯಿತಿಗಳಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ, ಬೇಸಿಗೆ ವೇಳೆ ಕುಡಿಯುವ ನೀರಿನ ಭವಣೆ ಉಂಟಾದರೆ ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಟ್ಯಾಂಕ್ ಗಳು ತೊಂಬೆಗಳು ಹಾಗೂ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಹೇಳಿದರು.

ಈ ನಡುವೆ ಮಾತನಾಡಿದ ಧನಗೆರೆ ಗ್ರಾ.ಪಂ. ಪಿ.ಡಿ.ಒ ಕಮಲ್ ರಾಜ್, ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 15 ನೇ ಹಣಕಾಸು ಯೋಜನೆಯಡಿ 14 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಈಗಾಗಲೇ ಸ್ವಚ್ಛಗೊಳಿಸಿರುವ ಟ್ಯಾಂಕ್ ಗಳು, ತೊಂಬೆಗಳು ಹಾಗೂ ನೀರಿನ ತೊಟ್ಟಿಗಳಿಗೆಲ್ಲಾ ಒಂದೇ ರೀತಿಯ ಬಣ್ಣ ಬಳಿಸಿ ಎಂದು ತಾಕಿತು ಮಾಡಿದರು.

ಹಾಗೆಯೇ ಯಾವಾಗ ಸ್ವಚ್ಛಗೊಳಿಸಿದ್ದೀರಾ ಮುಂದೆ ಸ್ವಚ್ಛಗೊಳಿಸುವ ದಿನಾಂಕ ಯಾವುದು ಎಂಬುದನ್ನು ನೀರಿನ ಟ್ಯಾಂಕ್ ಹಾಗೂ ತೊಂಬೆಗಳ ಮೇಲೆ ಬರೆಸಬೇಕು. ಇದರಿಂದಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಅಭಿಯಾನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಪಿ ಡಿ ಒ ಗಳಿಗೆ ಸೂಚಿಸಿದರು.

ಮದುವನಹಳ್ಳಿ ದೊಡ್ಡ ಗ್ರಾಮವಾಗಿದ್ದು ಇಲ್ಲಿ 7,574 ಜನಸಂಖ್ಯೆ ಇದೆ ಆದರೆ ಇಲ್ಲಿರುವುದು ಒಂದೇ ಶುದ್ಧ ನೀರಿನ ಕುಡಿಯುವ ನೀರಿನ ಘಟಕ ಆದ್ದರಿಂದ ಇಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ತಾ.ಪಂ. ಇಒ ಗುರು ಶಾಂತಪ್ಪ ಬೆಳ್ಳುಂಡಗಿ ಅವರಿಗೆ ಸಲಹೆ ನೀಡಿದರು.

ಇದೇ ವೇಳೆ ಕಾಡಂಚಿನ ಗ್ರಾಮಗಳ ಜನರಲ್ಲಿ ಕಾಡ್ಗಿಚ್ಚು ಬೆಂಕಿ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕುರಿತು ತಹಸಿಲ್ದಾರ್ ಬಸವರಾಜ್ ಅವರಿಗೆ ಶಾಸಕರು ಸೂಚಿಸಿದಾಗ ಪ್ರತಿಕ್ರಿಯಿಸಿದ ತಹಸಿಲ್ದಾರರು ರಾಜಸ್ವ ನಿರೀಕ್ಷಕರು, ಅಗ್ನಿಶಾಮಕ ದಳದ ಅಧಿಕಾರಿಗಳು ಪಿಡಿಒ ಹಾಗೂ ಅರಣ್ಯ ಅಧಿಕಾರಿಗಳ ತಂಡ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಬೆಂಕಿ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ, ಹನೂರು, ಲೊಕ್ಕನಹಳ್ಳಿ ಹೋಬಳಿಗಳಿಗೆ ಹೋಲಿಕೆ ಮಾಡಿದರೆ ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಅಭಾವವಿಲ್ಲ,ಏಕೆಂದರೆ ಅಂತರ್ಜಲ ಇಲ್ಲಿ ಚೆನ್ನಾಗಿದೆ ಎಂದು ತಿಳಿಸಿದರು.

ಆದರೂ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿದ್ದಾರೆ. ಹಾಗೆ ಸ್ವಚ್ಛತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ, ಇನ್ನು 15 ದಿನಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ, ಸ್ವಚ್ಛತೆ ಇದ್ದರೆ ರೋಗ ಹರಡುವುದಿಲ್ಲ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ  ತಹಸೀಲ್ದಾರ್ ಎ.ಇ.ಬಸವರಾಜು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ. ಗ್ರಾಮೀಣ ಕಃಡಿಯುವ ನೀರು ಯೋಜನೆಯ ಕೊಳ್ಳೇಗಾಲ ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ಸುಧನ್ವ ನಾಗ್ ಹಾಗೂ ಪಾಳ್ಯ ಹೋಬಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್ Read More

ಹಾಲಿ, ಮಾಜಿ ಶಾಸಕರ ವಿರುದ್ದ ಬಿಜೆಪಿ ಮುಖಂಡ ನಿಶಾಂತ್ ಕಿಡಿ

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮೂರು-ಮೂರು ಸಾರಿ ಕುಳಿತವರು ಏನು ಮಾಡದೆ ಈವಾಗ ಹೋಗಿ ಕುಳಿತು ನಾನ್ ಮಾಡ್ದೆ ನಾನ್ ಮಾಡ್ದೆ ಎಂದು ಏನು ಮಾಡದೆ ಹಳೇದನ್ನೇ ತೆಗೆದುಕೊಂಡು ಕುಳಿತರೆೆ ಅಪಘಾತಗಳು ಹೆಚ್ಚಾಗುತ್ತವೆ ಎಂದು ಹನೂರು ಬಿಜೆಪಿ ಮುಖಂಡ ನಿಶಾಂತ್ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ದ ಕಿಡಿಕಾರಿದರು.

ತೆಳ್ಳನೂರು-ಬಂಡಳ್ಳಿ ಮಾರ್ಗದ ಬಸ್ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗಾಯಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ವೈದ್ಯರಿಂದ ಕೊಡಿಸಲಾಗುವುದು ಎಂದು ಹೇಳಿದರು.

ನಿರ್ವಾಹಕ ನವೀನ್ ಕುಮಾರ್ ಸಾವು ಬಹಳ ನೋವು ತಂದಿದೆ. ಅಪಘಾತಗಳು ಸಂಭವಿಸಲು ಕೆಟ್ಟ ರಸ್ತೆಗಳೆ ಕಾರಣ, ತಾಲ್ಲೂಕು ಕೇಂದ್ರವಾಗಿ ಇಷ್ಟು ವರ್ಷಗಳು ಕಳೆದರು ಹನೂರು ಕ್ಷೇತ್ರದಲ್ಲಿ ರಸ್ತೆಗಳಾಗಿಲ್ಲ, ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂಬುದಕ್ಕೆ ಇದೇ ಸೂಕ್ತ ಉದಾಹರಣೆ ಎಂದು ಕಿಡಿಕಾರಿದರು.

ಇನ್ನು ಎಷ್ಟು ಜನರ ಪ್ರಾಣದ ಜೊತೆ ಚಲ್ಲಾಟವಾಡುತ್ತಾರೆ. ಸರ್ಕಾರಕ್ಕೆ ಇದು ಸರಿಯಾದ ಸಮಯ ಈಗಲಾದರೂ ಸರ್ಕಾರ ಕಣ್ತರೆದು ನೋಡಿ ಉತ್ತಮ ರಸ್ತೆ ಸೌಕರ್ಯ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಕನಿಷ್ಟ ತೇಪೆ ಹಾಕುವ ಕೆಲಸವಾದರು ಜನ ನಿಟ್ಟಸಿರು ಬಿಡುತ್ತಾರೆ ಎಂದು ತಿಳಿಸಿದರು.

ಇದು ಯಾರ ವೈಪಲ್ಯ ಎಂಬ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಜನನಾಯಕರು ತಾನೆ ಹೋಗಿ ಕೇಳಬೇಕು ಸರ್ಕಾರಕ್ಕೆ, ಸರ್ಕಾರದ ಕಣ್ಣುತೆರೆಸುವವರು ಯಾರು? ಮೂರು-ಮೂರು ಸಾರಿ ಕುಳಿತವರು ಏನು ಮಾಡದೆ ಈವಾಗ ಹೋಗಿ ಕುಳಿತು ನಾನ್ ಮಾಡ್ದೆ ನಾನ್ ಮಾಡ್ದೆ ಎಂದು ಏನು ಮಾಡದೆ ಹಳೆಯದನ್ನು ತೆಗೆದುಕೊಂಡು ಕುಳಿತರೆ ಇಂತಹ ಅಪಘಾತಗಳು ಇನ್ನೂ ನೂರಾಗುತ್ತವೆ ಎಂದು ಮಾರ್ಮಿಕವಾಗಿ ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ವಿರುದ್ದ ನಿಶಾಂತ್ ಕಿಡಿಕಾರಿದರು.

ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಸುರೇಶ್, ತಿಮ್ಮರಾಜಿಪುರ ಪುಟ್ಟಣ್ಣ, ಯುವ ಮುಖಂಡ ಚೇತನ್, ಪಾಳ್ಯ ಸೋಮಣ್ಣ, ಉಪ್ಪಾರ ಮುಖಂಡ ನಾಗರಾಜು, ಅಪ್ಪು ಸ್ವಾಮಿ, ಕೃಷ್ಣಪ್ಪ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.

ಹಾಲಿ, ಮಾಜಿ ಶಾಸಕರ ವಿರುದ್ದ ಬಿಜೆಪಿ ಮುಖಂಡ ನಿಶಾಂತ್ ಕಿಡಿ Read More

೧೧ ರಿಂದ ೬ ಗಂಟೆವರೆಗೆ ವಿದ್ಯುತ್ ಪೂರೈಕೆ:ಮೇಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮ-ತಬಸ್ಸುಮ್

ಕೊಳ್ಳೇಗಾಲ: ಕೃಷಿ ಸಂಬಂಧ ರೈತರು ಕೇಳಿದಂತೆ ೧೧ ರಿಂದ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆ ಬಗ್ಗೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಚೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ತಬಸ್ಸುಮ್ ಭರವಸೆ ನೀಡಿದರು.

ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಜಾಗೃತಿ ವಹಿಸುವಂತೆ ಲೈನ್ ಮೆನ್ ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಚೆಸ್ಕಾಂ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ನಾಲ್ಕನೇ ತ್ರೈಮಾಸಿಕ ಅವಧಿಯ ಸಾರ್ವಜನಿಕ ಸಂಪರ್ಕ ಸಭೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿರು ಹಾಗೂ ರೈತರು, ಕೃಷಿ ಅವಲಂಬಿತ ರೈತರಿಗೆ ವಿದ್ಯುತ್ ಪೂರೈಕೆ ಕೊರತೆ, ಬೀದಿ ದೀಪ ನಿರ್ವಹಣೆ, ನಿರಂತರ ಜ್ಯೋತಿ ಯೋಜನೆಯಲ್ಲಿನ ವಿದ್ಯುತ್ ಕೊರತೆ ಬಗ್ಗೆ ಮತ್ತು ಗ್ರಾಮಗಳಿಗೆ ನಿಯೋಜಿಸಿರುವ ಲೈನ್ ಮೆನ್ ಗಳ ಕರ್ತವ್ಯ ಲೋಪದ ಬಗ್ಗೆ ಆರೋಪಗಳು ಕೇಳಿಬಂದವು. ಕೃಷಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಿಕೊಡಬೇಕೆಂದು ರೈತರಿಂದ ಬೇಡಿಕೆಗಳು ಕೇಳಿಬಂದವು.

ಈ ವೇಳೆ ಸಭೆಯ ನೇತೃತ್ವ ವಹಿಸಿದ್ದ ತಬಸ್ಸುಮ್ ಅವರು ಮಾತನಾಡಿ, ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದರ ಬಗ್ಗೆ ನಮ್ಮ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಹಾಗೂ ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಕ್ರಮವಹಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಜು ಅವರು ಮಾತನಾಡಿ ಸಭೆಯಲ್ಲಿ ರೈತರಿಂದ ಬಂದಿರುವ ದೂರುಗಳು ಮತ್ತು ಸಮಸ್ಯೆಗಳ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಇಲಾಖೆ ಲೈನ್ ಮೆನ್ ಗಳಿಂದ ಮುಂದಿನ ದಿನಗಳಲ್ಲಿ ಕರ್ತವ್ಯಲೋಪವಾಗದಂತೆ ಕ್ರಮ ವಹಿಸುತ್ತೇವೆ, ರೈತರ ಕೃಷಿ ಜಮೀನುಗಳಿಗೆ ಟಿಸಿ ಹಾಕುವುದಕ್ಕೆ ಸ್ಥಳ ಪರಿಶೀಲನೆ ನಡೆಸಿ ಒಂದು ಅಥವಾ ಎರಡು ಪಂಪ್ ಸೆಟ್ ಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎರಡಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಬೇಕಾಗುತ್ತವೆ. ಎಂಬ ಬಗ್ಗೆ ಅಕ್ಕಪಕ್ಕದ ಜಮೀನುಗಳಲ್ಲಿ ಕಂಬಗಳನ್ನು ಹಾಕಿಸಿ ವಿದ್ಯುತ್ ಪೂರೈಕೆ ಮಾಡಿಕೊಡಲಾಗುವುದು ಇಲಾಖೆ ನಿಗದಿ ಪಡಿಸಿದ ಮೊತ್ತವನ್ನು ಬಿಟ್ಟು ಬೇರೆ ಯಾರಿಗೂ ಹಣ ಕೊಡಬೇಕಾಗಿಲ್ಲ ಒಂದು ವೇಳೆ ಯಾರಾದರು ನಿಮ್ಮ ಬಳಿ ಹಣ ಕೇಳಿದರೆ ನಮಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

೧೧ ರಿಂದ ೬ ಗಂಟೆವರೆಗೆ ವಿದ್ಯುತ್ ಪೂರೈಕೆ:ಮೇಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮ-ತಬಸ್ಸುಮ್ Read More

ಎಸ್.ಪಿ.ಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ನೂತನ ಶಾಲಾ ಕಟ್ಟಡ ಉದ್ಘಾಟನೆ

ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿ ಎಸ್.ಪಿ.ಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ನೂತನ ಶಾಲಾ ಕಟ್ಟಡವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿಯವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ನಿರಂಜನ್ ಅವರು ತಮ್ಮ ತಾಯಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಈ ಹಳ್ಳಿಗಾಡಿನ ಮಕ್ಕಳ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಗ್ರಾಮದ ಜನತೆಯ ಸೇವೆ ಮಾಡಲು ಮುಂದಾಗಿದ್ದಾರೆ ದೊಡ್ಡ ದೊಡ್ಡ ನಗರ ವನ್ನು ಬಿಟ್ಟು ಹುಟ್ಟಿದ ಊರಿನಲ್ಲಿ ಜನರ ಸೇವೆ ಮಾಡುವ ಜೊತೆಗೆ ಅನೇಕ ಗ್ರಾಮೀಣ ಮಕ್ಕಳು ಉತ್ತಮ ಶಿಕ್ಷಣ ಪಡೆಯುಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ‌ ವ್ಯಕ್ತಪಡಿಸಿದರು.

ಬೆಂಗಳೂರಿನ ಎಂ ಎಸ್ ರಾಮಯ್ಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ನಿರಂಜನ್ ಅವರು ಬೆಂಗಳೂರಿನಂತ ಸಮುದ್ರದಲ್ಲಿ ಈಜಲು ಸಾಧ್ಯವಿಲ್ಲವೆಂದು ಸ್ವಗ್ರಾಮಕ್ಕೆ ಬಂದು ಶಿಕ್ಷಣ ಸಂಸ್ಥೆ ತೆರೆದಿದ್ದಾರೆ

ಬಹಳಷ್ಟು ಶಿಕ್ಷಣ ಸಂಸ್ಥೆಗಳನ್ನು ನಾನು ನೋಡಿದ್ದೇನೆ ಎಲ್ಲವೂ ಕಮರ್ಷಿಯಲ್ ಓರಿಯೆಂಟೆಡ್ ಶಿಕ್ಷಣ ಸಂಸ್ಥೆಗಳು. ಬೆಂಗಳೂರಿನಂತಹ ಪಟ್ಟಣದಲ್ಲಿ ನಾನು ಗಮನಿಸಿರುವ ಹಾಗೆ ಸೋಫಿಯಾ ಸ್ಕೂಲ್ ಅಂತ ಇದೆ ನನ್ನಷ್ಟೇ ವಯಸ್ಸಾಗಿದೆ ಅದಕ್ಕೆ 60 ವರ್ಷಕ್ಕೂ ಹೆಚ್ಚು ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಆ ಶಿಕ್ಷಣ ಸಂಸ್ಥೆಯಲ್ಲಿ ಮದುವೆಗೂ ಮುನ್ನವೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರವೇಶದ ಸೀಟು ಕಾಯ್ದಿರಿಸಬೇಕು. ಆ ಕಾಲದಲ್ಲಿ ಅಲ್ಲಿ 5 ಲಕ್ಷ ರೂ. ಡೊನೇಷನ್ ಮುಂಗಡ ಸೀಟು ಕಾಯ್ದಿರಸಲಿಕ್ಕೆ ಎಂದು ವಿವರಿಸಿದರು.

ಬೆಂಗಳೂರಿನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ನೀವು ಇಲ್ಲಿ ಬಂದು ಶಿಕ್ಷಣ ಸಂಸ್ಥೆ ತೆರೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನಾನು ಶಾಸಕನಾಗಿ ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು.

ಎಂ ಎಸ್ ರಾಮಯ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ ಮಂಜುನಾಥ್ ಮಾತನಾಡಿ ಉತ್ತಮ ಮಾರ್ಗದರ್ಶಕರಿದ್ದಾಗ ಸಾಧನೆ ಮಾಡುವುದು ಸುಲಭ. ವಿದ್ಯೆ ಇದ್ದ ಕಡೆ ವಿನಯ ಬರುತ್ತದೆ ವಿನಯದಿಂದ ಗೌರವ ಸಂಪಾದನೆಯಾಗುತ್ತದೆ ಎಂದು ಹೇಳಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಕೆ.ಶಿವರಾಜು ಮಾತನಾಡಿ ಮಾನವನನ್ನು ಮನುಷ್ಯನನ್ನಾಗಿ ಪರಿವರ್ತನೆ ಮಾಡುವ ಸಾಧನ ಶಿಕ್ಷಣ. ಪಟ್ಟಣದಲ್ಲಿ ಶಿಕ್ಷಣ ಪಡೆಯುವುದು ಸುಲಭ ಆದರೆ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಯಶಸ್ವಿಯಾಗುವುದು ಸುಲಭದ ಮಾತಲ್ಲ ಇಂತಹ ಕೆಲಸಕ್ಕೆ ನಿರಂಜನ್ ಅವರ ಕುಟುಂಬ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕುಂತೂರು ವೀರ ಸಿಂಹಾಸನ ಮಠದ ಶ್ರೀ ಶಿವಪ್ರಭು ಸ್ವಾಮೀಜಿರವರು ಆಶೀರ್ವಚನ ನೀಡಿದರು

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕುಂತೂರು ರಾಜೇಂದ್ರ, ಸ್ಥಳೀಯ ಗ್ರಾ ಪಂ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯೆ ರತ್ನಮ್ಮ, ಶಾಲೆಯ ಸಂಸ್ಥಾಪಕ ನಿರಂಜನ್. ಕೆ. ಗೌಡ, ಮುಖ್ಯ ಶಿಕ್ಷಕಿ ಮಮತಾ, ಶನೇಶ್ವರ ದೇವಸ್ಥಾನದ ಅರ್ಚಕ ಮಹಾದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಎಸ್.ಪಿ.ಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ನೂತನ ಶಾಲಾ ಕಟ್ಟಡ ಉದ್ಘಾಟನೆ Read More