ಸೆ.23, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿಧರ್ಮಸ್ಥಳ ಚಲೋ

ಮೈಸೂರು: ಧರ್ಮಸ್ಥಳ ಉಳಿವಿಗೆ ಹಾಗೂ ಧರ್ಮಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸೆಪ್ಟೆಂಬರ್ 23ರಂದು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ ಈ ವಿಷಯ ತಿಳಿಸಿದರು.

ಈ ಕುರಿತು ಕಾವೇರಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಸೆಪ್ಟೆಂಬರ್ 23ರಂದು ಬೆಳಗ್ಗೆ 5 ಗಂಟೆಗೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಎಲ್ಲಾ ಸಂಘ-ಸಂಸ್ಥೆಗಳ ಮುಖ್ಯಸ್ಥರು ಧರ್ಮಸ್ಥಳಕ್ಕೆ ಹೊರಡಲಿದ್ದಾರೆ ಎಂದು ತಿಳಿಸಿದರು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಹೋರಾಟಗಾರರು ಸಂಘ ಸಂಸ್ಥೆಗಳವರು ತಮ್ಮ ಹೆಸರುಗಳನ್ನು ಅಶೋಕ್ ಸುಬ್ಬಣ್ಣ ಮೊಬೈಲ್ ನಂಬರ್ 9880853893 ನಂಬರ್ ನಲ್ಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತೇಜೇಶ್ ಲೋಕೇಶ್ ಗೌಡ ವಿನಂತಿಸಿದರು

ಸುದ್ದಿಗೋಷ್ಠಿಯಲ್ಲಿ ಪ್ರದೀಪ್, ಬೋಗಾದಿ ಸಿದ್ದೇಗೌಡ, ಪುಷ್ಪ, ವಿಜಯ,ಸಿ.ಹೆಚ್.ಕೃಷ್ಣಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸೆ.23, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿಧರ್ಮಸ್ಥಳ ಚಲೋ Read More

ದೇವರಾಜ ಅರಸರು ಹಿಂದುಳಿದ ವರ್ಗಗಳ ಜನರ ಪಾಲಿನ ದೇವರು-ಜಯಪ್ರಕಾಶ್

ಮೈಸೂರು: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಹಿಂದುಳಿದ ವರ್ಗಗಳ ನೇತಾರ, ಮಹಾನ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ ದೇವರಾಜ ಅರಸು ರವರ 110 ನೇ ಜಯಂತಿ ಆಚರಿಸಲಾಯಿತು.

ಕಾವೇರಿ ಕ್ರಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಅವರು ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ಅನುಯಾಯಿಗಳಾದ ಪ್ರಮೋದ್ ಮಹಾಜನ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಡಾ. ಜೀವರಾಜ್ ಆಳ್ವ ಅವರುಗಳು ಅರಸು ಅವರ ಆದರ್ಶಗಳನ್ನು ಪಾಲನೆ ಮಾಡಿದವರು ಎಂದು ಸ್ಮರಿಸಿದರು.

ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದು ಅನೇಕ ಬಡವರು, ಕೂಲಿಕಾರರಿಗೆ ದೇವರಾದರು. ವರುಣಾ ಕಾಲುವೆಯನ್ನು ನಿರ್ಮಾಣ ಮಾಡಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದವರು.

ದೇವರಾಜ ಅರಸುರವರಿಗೆ ಅವರೇ ಸಾಟಿ ಹೊರತು ಬೇರಾರೂ ಇಲ್ಲ. ಹಿಂದುಳಿದ ವರ್ಗಗಳ ಜನಗಳ ಪಾಲಿನ ದೇವರು ಅವರು ಎಂದು ಹೇಳಿದರು.

ತೇಜೇಶ್ ಲೋಕೇಶ್ ಗೌಡ ನಿರೂಪಣೆ ಮಾಡಿದರು, ನೇಹಾ ಸಿಹಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ರಘು ಅರಸ್, ಕುಮಾರ್, ರವೀಶ್, ಚಂದ್ರು, ಪ್ರಜ್ವಲ್, ಪ್ರಭಾಕರ್, ಹಮೀದ್, ಸುಫಿಯಾ, ರಿಹಾನ್ ಮತ್ತಿತರರು ಉಪಸ್ಥಿತರಿದ್ದರು.

ದೇವರಾಜ ಅರಸರು ಹಿಂದುಳಿದ ವರ್ಗಗಳ ಜನರ ಪಾಲಿನ ದೇವರು-ಜಯಪ್ರಕಾಶ್ Read More