ಗಾಂಧೀಜಿ ದೇಶ, ವಿಶ್ವ ಕಂಡ ಅತ್ಯುತ್ತಮ ಅಹಿಂಸಾ ನಾಯಕ-ಡಾ. ಡಿ ತಿಮ್ಮಯ್ಯ
ಮೈಸೂರು: ಗಾಂಧೀಜಿ ಅವರು ಈ ದೇಶ, ವಿಶ್ವ ಕಂಡ ಅತ್ಯುತ್ತಮ ಶಾಂತಿ ಮತ್ತು ಅಹಿಂಸ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ತಿಳಿಸಿದರು.
ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ ಜಯಂತಿ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಮಹಾತ್ಮ ಗಾಂಧೀಜಿ ಸದ್ಭಾವನಾ ಪ್ರಶಸ್ತಿ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಯಾರು ಪರಮಾತ್ಮನನ್ನು ನೋಡಿಲ್ಲ. ಪರಮಾತ್ಮನನ್ನು ನಾವು ಶಕ್ತಿ ಕೊಡು ಎಂದು ಕೇಳಿಕೊಳ್ಳುತ್ತೇವೆ. ಆದರೆ ಮಹಾ ಆತ್ಮ, ಮಹಾತ್ಮ ನಮ್ಮ ದೇಶದ 150 ಕೋಟಿ ಜನರಿಗೆ ಶಕ್ತಿಯನ್ನು ನೀಡಿದವರು ಎಂದು ಬಣ್ಣಿಸಿದರು.
ಗಾಂಧೀಜಿರವರ ತ್ಯಾಗ, ಹೋರಾಟ, ಶ್ರಮವನ್ನು ಈ ದೇಶದಲ್ಲಿ ಯಾರು ನೆನಪಿಸಿಕೊಳ್ಳುತ್ತಿಲ್ಲ.ಇಂದು ಭಾರತ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗಲು ಇವರ ಆಶೀರ್ವಾದ, ಸಂಕಲ್ಪವೇ ಕಾರಣ. ಮಹಾತ್ಮ ಗಾಂಧೀಜಿ ಅವರ ತ್ಯಾಗ ಶಾಂತಿ ಅಹಿಂಸ ಮಾರ್ಗವನ್ನು ಭಾರತೀಯರೆಲ್ಲರೂ ನೆನೆಸಿಕೊಳ್ಳಲೇಬೇಕು ಎಂದು ಹೇಳಿದರು.
ಗಾಂಧೀಜಿಯವರ ಆದರ್ಶಗಳನ್ನು ನಾವೆಲ್ಲರೂ ಆಳವಡಿಸಿಕೊಳ್ಳಬೇಕು ಕರ್ನಾಟಕ ಸೇನಾ ಪಡೆ ಮಹಾತ್ಮ ಗಾಂಧೀಜಿ ಯವರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಡಾ. ಡಿ ತಿಮ್ಮಯ್ಯ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಾಂಧಿವಾದಿ, ನಿವೃತ್ತ ಪ್ರಸಾರಾಂಗ ನಿರ್ದೇಶಕ ಕೆ.ಟಿ ವೀರಪ್ಪ, ಕೆ ಆರ್ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ. ಎಲ್ ದೇವೇಗೌಡ, ಸಮಾಜ ಸೇವಕರಾದ ಕೆ ಆರ್ ಧನ್ಯಕುಮಾರ್, ಕಿಯೋನಿಕ್ಸ್ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಬಾಲಾಜಿ ಪಿ ಎಸ್, ಓಂ ಶ್ರೀ ಸಾಯಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಣಿಪ್ರಭ ಹೆಚ್ ಪಿ, ಹಿರಿಯ ಸಾಹಿತಿ ಡಾ. ಪುಷ್ಪ ಎಂ ಅಯ್ಯಂಗಾರ್, ನಂದನ ಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ನೇತ್ರ ರೋಗ ತಜ್ಞ ಡಾ. ಸುಧಿಂದ್ರ ಆರ್, ಧಾರ್ಮಿಕ ಮುಖಂಡ ಡಾ. ಶ್ರೀಷಾ ಭಟ್ ಅವರುಗಳಿಗೆ ಶ್ರೀ ಮಹಾತ್ಮ ಗಾಂಧೀಜಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಮಹಾರಾಣಿ ವಿಜ್ಞಾನ ಕಾಲೇಜಿನ ಸುಮಾರು 40 ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮಹಾತ್ಮ ಗಾಂಧೀಜಿ ಕುರಿತು ಮಾತನಾಡಿದರು.
ಮಹಾತ್ಮ ಗಾಂಧೀಜಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಟಿ.ಜಿ ಆದಿಶೇಷಗೌಡ, ಮೈಸೂರು ಮಹಾನಗರ ಪಾಲಿಕೆ, ವಲಯ 3ರ ಸಹಾಯಕ ಆಯುಕ್ತ ಎಂ ಸಂದೀಪ್, ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಮೈಸೂರು ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಹನುಮಂತಯ್ಯ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ಪ್ರಭಾಕರ್, ನೇಹ, ಭಾಗ್ಯಮ್ಮ, ಜ್ಯೋತಿ, ಗೀತಾ ಗೌಡ, ಡಾ. ಶಾಂತರಾಜೇ ಅರಸ್, ಮೊಗಣ್ಣಾಚಾರ್, ಬಸವರಾಜು, ಕುಮಾರ್, ರಘು ಅರಸ್, ರವೀಶ್, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.
ಗಾಂಧೀಜಿ ದೇಶ, ವಿಶ್ವ ಕಂಡ ಅತ್ಯುತ್ತಮ ಅಹಿಂಸಾ ನಾಯಕ-ಡಾ. ಡಿ ತಿಮ್ಮಯ್ಯ Read More









