ರತ್ನಪುರಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಕ ಪ್ರ ಪಾ ರೈತ ಪರ್ವ

ಹುಣಸೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಹುಣಸೂರಿನ ರತ್ನಪುರಿ ಕಾಲೋನಿಯ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಮುಖಂಡರು ರಾಜ್ಯದಲ್ಲೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಇಒ ಮಹದೇವ್, ಸರ್ಕಲ್ ಇನ್ಸ್ಪೆಕ್ಟರ್ ರವಿ, ನಗರಸಭಾ ಆಯುಕ್ತರಾದ ಮಾನಸ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುರುಗ ಪಾಲ್ಗೊಂಡಿದ್ದರು.

ಕರ್ನಾಟಕ ಪ್ರಜಾ ಪಾರ್ಟಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರವಿ ಅವರ ನೇತೃತ್ವದಲ್ಲಿ ನೋಟ್ ಬುಕ್ ಹಾಗೂ ಲೇಖನಿ ವಿತರಿಸಲಾಯಿತು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಿಬ್ಬಂದಿ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.

ರತ್ನಪುರಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಕ ಪ್ರ ಪಾ ರೈತ ಪರ್ವ Read More

ಡಿಸಿ ‌ಕಚೇರಿ: ಅರಸು ಪ್ರತಿಮೆ‌ ದೇವರಾಜ‌ ಅರಸರಿಗೆ ಹೋಲಿಕೆಯಾಗಲ್ಲ:ಕೆ.ಪ್ರ ಪಾ

ಹುಣಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪ್ರತಿಮೆ ಅತ್ಯಂತ ಕೆಟ್ಟದಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಪದಾಧಿಕಾರಿಗಳು ಕಿಡಿಕಾರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರು ಪ್ರತಿಮೆಯನ್ನು ಕಂಡು ತೀರ ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ಆಂಗಲ್ ನಿಂದ ನೋಡಿದರೂ ಈ ಪ್ರತಿಮೆ ದೇವರಾಜ ಅರಸು ಅವರಿಗೆ ಹೋಲಿಕೆಯೇ ಆಗುವುದಿಲ್ಲ. ಯಾರನ್ನೋ ನೋಡಿದಂತಾಗುತ್ತದೆ, ಅತ್ಯಂತ ಕೆಟ್ಟದಾಗಿ ಕೆತ್ತಲಾಗಿದೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಡಿ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಲು ಹಣ ಬಿಡುಗಡೆ ಮಾಡಿದ್ದರು ಎಂಬ ಮಾಹಿತಿ ಇದೆ. ಅದು ಸರಿಯಾದುದೇ ಆಗಿದೆ. ಆದರೆ ಇಂತಹ ಕೆಟ್ಟ ವಿಗ್ರಹವನ್ನು ಏಕೆ ಮಾಡಬೇಕಿತ್ತು ಈ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹುಣಸೂರಿನಲ್ಲಿ ಸ್ಥಾಪಿಸಲಾಗಿರುವ ಡಿ ದೇವರಾಜ ಅರಸು ಅವರ ಪ್ರತಿಮೆಯನ್ನು ನೋಡಿ ಬನ್ನಿ ಅದು ಅರಸರೆ ಎದ್ದು ಬಂದಂತೆ ಕಾಣುತ್ತಿದೆ, ಆ ರೀತಿಯ ಪ್ರತಿಮೆ ಸ್ಥಾಪಿಸುವುದು ಬಿಟ್ಟು ಇಂತಹ ಕೆಟ್ಟ ಪ್ರತಿಮೆಯನ್ನು ಏಕೆ ಮಾಡಬೇಕಿತ್ತು ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.

ಹೀಗೆ ಸುಖಾಸುಮ್ಮನೆ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಪ್ರತಿಮೆ ಸ್ಥಾಪನೆಗೆ ಸುಮಾರು 60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ, ಈ ರೀತಿ ಜನರ ತೆರಿಗೆ ಹಣವನ್ನು ಏಕೆ ಪೋಲು ಮಾಡಬೇಕು ಎಂದು ಚೆಲುವರಾಜು ಕಿಡಿ ಕಾರಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗ ಸ್ಥಾಪಿಸಿರುವ ಅರಸು ಅವರ ಪ್ರತಿಮೆಯನ್ನು ಕೂಡಲೇ ತೆಗೆದುಹಾಕಿ ಹೊಸದಾಗಿ ದೇವರಾಜ ಅರಸು ಅವರಿಗೆ ಹೋಲಿಕೆಯಾಗುವಂತಹ ಪ್ರತಿಮೆಯನ್ನೇ ಸ್ಥಾಪನೆ ಮಾಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಡಿಸಿ ‌ಕಚೇರಿ: ಅರಸು ಪ್ರತಿಮೆ‌ ದೇವರಾಜ‌ ಅರಸರಿಗೆ ಹೋಲಿಕೆಯಾಗಲ್ಲ:ಕೆ.ಪ್ರ ಪಾ Read More

ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು

ಹುಣಸೂರು: ಹುಣಸೂರು ತಾಲೂಕಿನಲ್ಲಿ ರೈತರು ಮತ್ತು ಬಡಜನರೊಂದಿಗೆ ಜನಪ್ರತಿನಿಧಿಗಳು ಮತ್ತು ವಿದ್ಯುತ್ ಇಲಾಖೆಯವರು ಕಣ್ಣಾಮುಚ್ಚಾಲೆ ಆಡುತ್ತಾ
ಸುಮ್ಮನೆ ಅಲೆದಾಡಿಸುತ್ತಾರೆ.

ಹುಣಸೂರಿನಲ್ಲಿ ಬಡವರಿಗೊಂದು ನ್ಯಾಯ ಬಲಾಢ್ಯರಿಗೊಂದು ನ್ಯಾಯ ಎಂಬಂತೆ ಆಗಿಬಿಟ್ಟಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿಕಾರಿದ್ದಾರೆ.

ಹುಣಸೂರಿನಲ್ಲಿ ಮೋರ್ ಸೂಪರ್ ಮಾರ್ಕೆಟ್ ಗೆ ಯಾವುದೇ ದಾಖಲೆಗಳಿಲ್ಲದೆ ಕರೆಂಟ್ ಕೊಟ್ಟಿದ್ದಾರೆ.ಆದರೆ ರೈತರು, ಬಡ ಜನರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಕೇಳಿದರೆ ಎನ್ ಒ ಸಿ ತೆಗೆದುಕೊಂಡು ಬನ್ನಿ ಕಟ್ಟಡದ ಪ್ಲಾನ್, ಲೈಸನ್ಸ್ ತೆಗೆದುಕೊಂಡು ಬನ್ನಿ ಎಂದು ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ನಗರಸಭೆ ಸದಸ್ಯರು ಮೋರ್ ಸೂಪರ್ ಮಾರ್ಕೆಟ್ ನೊಂದಿಗೆ ಶಾಮೀಲಾಗಿದ್ದಾರೆ, ಅಧಿಕಾರಿಗಳನ್ನು ದುರುಪಯೋಗ
ಪಡಿಸಿಕೊಳ್ಳುತ್ತಿದ್ದಾರೆ, ಆದರೆ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಲು ಇಚ್ಛಿಸುತ್ತಾರೆ.ಇಲ್ಲಿ ಮೋರ್ ಸೂಪರ್ ಮಾರ್ಕೆಟ್‌ ಓಪನ್ ಮಾಡಿರುವುದೇ‌‌ ಸರಿ ಇಲ್ಲ.ಸರ್ಕಾರದ ಜಾಗ ದುರುಪಯೋಗ‌ ಆಗುತ್ತಿದೆ.ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವಾಗುತ್ತಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಮೋರ್ ಸೂಪರ್ ಮಾರ್ಕೆಟ್ ಗೆ ನಗರಸಭೆಯವರು ಯಾವುದೇ ದಾಖಲೆ ಕೇಳದೆ ಜಾಗ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ಮೋರ್ ಸೂಪರ್ ಮಾರ್ಕೆಟ್ ನವರು
ಅನಧಿಕೃತವಾಗಿ ವಿದ್ಯುತ್ ಲೈನ್ ಗಳನ್ನು ಎಳೆದುಕೊಂಡು ಕರೆಂಟ್ ಹರಿಸಿಕೊಳ್ಳುತ್ತಾರೆ,ಅನಧಿಕೃತವಾಗಿ ಮಳಿಗೆ ಪ್ರಾರಂಭಿಸಿದ್ದಾರೆ, ಇದನ್ನೆಲ್ಲ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಧಮ್ಕಿ ಹಾಕಿಸುತ್ತಾರೆ ಎಂದು ಚೆಲುವರಾಜು ದೋರಿದ್ದಾರೆ.

ಹುಣಸೂರು ತಾಲೂಕು ಹನಗೋಡು ಹೋಬಳಿ ದೊಡ್ಡ ಹೆಜ್ಜೂರಿನಲ್ಲಿ ರೈತರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲವೆಂದು ಕೆಲವರ ಪಂಪ್ ಸೆಟ್ ಗಳ ಕರೆಂಟ್ ಕಿತ್ತು ಹೋಗಿದ್ದಾರೆ. ರೈತರಿಗೆ ಒಂದು ನ್ಯಾಯ ಸೂಪರ್ ಮಾರ್ಕೆಟ್ ನವರಿಗೆ ನ್ಯಾಯವೆ ಇದನ್ನೆಲ್ಲಾ ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಬೆಳೆ ಬೆಳೆಯದಿದ್ದರೆ ನಮಗೆ ಒಂದು ಹೊತ್ತು ಊಟಕ್ಕೂ ಗತಿ ಇರುವುದಿಲ್ಲ ರೈತರು ದೇಶದ ಬೆನ್ನೆಲುಬು. ಅಂತಹುದರಲ್ಲಿ ರೈತರಿಗೆ ಹುಣಸೂರಿನಲ್ಲಿ ಅನ್ಯಾಯ ಆಗುತ್ತಿದೆ. ದುಡ್ಡಿರುವವರ ಪರ ಕೆಲಸ ಮಾಡಲಾಗುತ್ತಿದೆ.

ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು,ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.

ವಿದ್ಯುತ್ ಇಲಾಖೆಯವರು ಮತ್ತು ನಗರಸಭೆ ಅಧಿಕಾರಿಗಳಿಗೆ ರೈತರ ಪರ ಕೆಲಸ ಮಾಡುವಂತೆ ತಾಕೀತು ಮಾಡಲಿ.ರೈತರಿಗೆ ನ್ಯಾಯ ಕೊಡಲಿ ಎಂದು ಚಲುವರಾಜು ಒತ್ತಾಯಿಸಿದ್ದಾರೆ.

ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು Read More