ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡರಿಗೆ ಸನ್ಮಾನ

ಮೈಸೂರು: ಕರ್ನಾಟಕ ಸರ್ಕಾರದ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡ ಅವರಿಗೆ ಮಯೂರ ಕನ್ನಡ ಯುವಕರ ಬಳಗ ಅಭಿನಂದಿಸಿದೆ.

2025ರ ಕರ್ನಾಟಕ ಸರ್ಕಾರ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಡಾ. ಎನ್ ಎಸ್ ರಾಮೇಗೌಡ ಅವರು‌ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಾಗೂ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೂ‌ ಆದ ಡಾಕ್ಟರ್ ಎನ್ ಎಸ್ ರಾಮೇಗೌಡ ಅವರನ್ನು ಕುವೆಂಪು ನಗರದ ಅವರ ನಿವಾಸದಲ್ಲಿ ಮಯೂರ ಕನ್ನಡ ಯುವಕರ ಬಳಗದವರು ಸನ್ಮಾನಿಸಿ,ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಎಸ್ ಪಿ ಯೋಗಣ್ಣ, ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು,ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಕಿಶೋರ್ ಕುಮಾರ್, ಶೇಖರ್, ಕಿರಣ್,ಜಿಬು ಮ್ಯಾಥ್ವಸ್ ಮತ್ತಿತರರು ಡಾಕ್ಟರ್ ಎನ್ ಎಸ್ ರಾಮೇಗೌಡ ಅವರಿಗೆ ಶುಭಕೋರಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡರಿಗೆ ಸನ್ಮಾನ Read More

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ತೇಜೇಶ್

ಮೈಸೂರು: ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅವರು ಈ‌ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನನಾಗಿದ್ದಾರೆ.

ತೇಜೇಶ್ ಲೋಕೇಶ್ ಗೌಡ ಅವರು ಕಳೆದ 15 ವರ್ಷಗಳಿಂದ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾಗಿ ಕನ್ನಡ ನಾಡಿನ ನೆಲ ಜಲ ಭಾಷೆ ಗಳ ವಿಷಯ ಬಂದಾಗಲೆಲ್ಲಾ ಯಾವುದೇ ರಾಜೀ ಮಾಡಿಕೊಳ್ಳದೆ ಸತತ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಅವರನ್ನು ಕನ್ನಡ ಹೋರಾಟ ಕ್ಷೇತ್ರದಿಂದ
ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದ್ದು,ತಮ್ಮನ್ನು ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ತೇಜೇಶ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ತೇಜೇಶ್ Read More