ಹೆಣ್ಣು ಮಗುವಿನ ಬಗ್ಗೆ ಹೆಮ್ಮೆಯ ಭಾವ ಇರಲಿ:ಡಾ.ಮಂಜುನಾಥ್

ಮೈಸೂರು: ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವ ಇರಬೇಕು ಎಂದು ಕಾಂಗರೂ ಆಸ್ಪತ್ರೆಯ ವೈಧ್ಯಕೀಯ ನಿರ್ದೆಶಕರು ಡಾ. ಮಂಜುನಾಥ್ ಹೇಳಿದರು.

ಕಾಳಿದಾಸ ರಸ್ತೆಯಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಕಾಂಗರೂ ಫರ್ಟಿಲಿಟಿ ಸೆಂಟರ್
ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಉಡುಗೊರೆ ಯನ್ನು ನೀಡಿ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಹೆಣ್ಣಿನ ಸಂಖ್ಯೆ ಕಡಿಮೆ ಆಗುತ್ತಿದೆ, ಇದರಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು, ಅದು ಕಾನೂನು ರೀತಿ ಅಪರಾಧವಾಗಿದೆ, ಸ್ತ್ರೀ ಪುರುಷರ ಅನುಪಾತ ಸಮನಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ.ಮಂಜುನಾಥ್ ತಿಳಿಹೇಳಿದರು.

ಕಾಂಗರೂ ಆಸ್ಪತ್ರೆಯ ತಜ್ಞ ವೈದ್ಯರುಗಳಾದ
ಡಾ.ವೀಣಾ ಕೀರ್ತಿ, ಡಾ.ಶೃತಿ ಪುರುಷೋತ್ತಮ,ಡಾ.ಲೀಲಾವತಿ ಹಾಗೂ ಸಿಬ್ಬಂದಿ ಗಳಾದ ಡಾ.ಅಥಿತಿ, ಶೋಭರಾಣಿ,
ಅಕ್ಷತ, ನಿವೇದಿತಾ, ಫರೀನ್ ಹಾಗೂ ಮಂಜುನಾಥ್ ಮತ್ತಿತ್ತರು ಹಾಜರಿದ್ದರು.

ಹೆಣ್ಣು ಮಗುವಿನ ಬಗ್ಗೆ ಹೆಮ್ಮೆಯ ಭಾವ ಇರಲಿ:ಡಾ.ಮಂಜುನಾಥ್ Read More

ಮೈಸೂರಿನಲ್ಲಿ ಕಾಂಗರೂ ಕೇರ್ ರ್ಫರ್ಟಿಲಿಟಿ ಸೆಂಟರ್ ಉದ್ಘಾಟನೆ

ಮೈಸೂರು: ಮೈಸೂರಿನಲ್ಲಿ ಕಾಂಗರೂ ಕೇರ್
ಫರ್ಟಿಲಿಟಿ ಸೆಂಟರ್ ಇದೇ ಬುಧವಾರದಿಂದ ಪ್ರಾರಂಭವಾಯಿತು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ‌ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಕಾಂಗರೂ ಕೇರ್ ಫರ್ಟಿಲಿಟಿ ಸೆಂಟರ್ ಲೋಕಾರ್ಪಣೆ ಮಾಡಿದರು.

ಕಾಂಗರೂ ಕೇರ್‌ನ ಸಿಇಒ ಮತ್ತು ಸಂಸ್ಥಾಪಕ ನಿರ್ದೇಶಕ ಡಾ ಶೇಖರ್ ಸುಬ್ಬಯ್ಯ ಅವರು
ಸ್ವಾಮೀಜಿಗಳಿಗೆ ಕೇಂದ್ರದ ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳನ್ನು ಪರಿಚಯಿಸಿದರು.

ಸ್ವಾಮೀಜಿಗಳು ಕಂಗಾರೂ ಫರ್ಟಿಲಿಟಿ ಸೆಂಟರ್ ತೋರಿದ ನಿಷ್ಠೆ ಮತ್ತು ಪ್ರಗತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದು ಭರವಸೆಯನ್ನು ಬೆಳೆಸಲು ಮತ್ತು ಅಸಾಧಾರಣ ಆರೋಗ್ಯಸಂಬಂಧಿ ಫಲಿತಾಂಶಗಳನ್ನು ಒದಗಿಸಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ‌ಅಭಿಪ್ರಾಯಪಟ್ಟರು.

ನೂತನ ಫರ್ಟಿಲಿಟಿ ಕೇಂದ್ರವು ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಸುಸಜ್ಜಿತವಾಗಿ ವಿನ್ಯಾಸಗೊಂಡಿದೆ. ನುರಿತ ಮತ್ತು ಅನುಭವಿ ವೈದ್ಯಕೀಯ ತಂಡವನ್ನು ಹೊಂದಿದೆ.

ಹಿಸ್ಟರೊಸ್ಕೋಪಿಕ್ ಮತ್ತು ಲ್ಯಾಪರೊಸ್ಕೋಪಿಕ್ ಮಧ್ಯಸ್ಥಿಕೆಗಳಂತಹ ಕಡಿಮೆ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಗಳ ಜೊತೆಗೆ ಇನ್ ವಿಟ್ರೊ ಫರ್ಟಿಲೈಸೇಶನ್ ಮತ್ತು ಗರ್ಭಾಶಯದ ಗರ್ಭಧಾರಣೆಯ ಸುಧಾರಿತ ಕಾರ್ಯವಿಧಾನಗಳನ್ನು ಒಳಗೊಂಡಿವೆ.

ಡಾ ಶೇಖರ್ ಸುಬ್ಬಯ್ಯ,ಬಂಜೆತನದ ಭಾವನಾತ್ಮಕ ಸಂಗತಿ ಮತ್ತು ದೈಹಿಕ ಸವಾಲುಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ರೋಗಿಗಳಿಗೆ ಶಕ್ತಿ ತುಂಬುವ ಮತ್ತು ಅವರ ಪೋಷಕರ ಕನಸುಗಳನ್ನು ಸಾಧಿಸಲು ಸಹಾಯ ಮಾಡುವ ಪೋಷಣೆ, ಪೋಷಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ನಂತರ ಕಾಂಗರೂ ಕೇರ್ ಫರ್ಟಿಲಿಟಿ ಸೆಂಟರ್‌ನ ಒಬಿಜಿ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಎಚ್.ಕೆ.ಸ್ವಾತಿ ಅವರು ಮಾತನಾಡಿ, ಬಂಜೆತನಕ್ಕೆ ತಡವಾಗಿ ಮದುವೆ ಆಗುವುದು. ಕೆಲಸದ ಒತ್ತಡ, ಪರಿಸರ ಮಾಲಿನ್ಯ ಮತ್ತು ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇತ್ತೀಚಿನ ಎಲ್ಲಾ ತಂತ್ರಜ್ಞಾನಗಳೊಂದಿಗೆ ಸುಸಜ್ಜಿತವಾಗಿ ಕೇಂದ್ರವೊಂದನ್ನು ಮೈಸೂರಿನಲ್ಲಿ ತೆರೆಯಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಗೋಕುಲ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷರಾದ ಡಾ. ಜಯರಾಮ್, ಡಾ.ಸೂರಜ್, ಡಾ.ಲಕ್ಷ್ಮಣ್, ಡಾ.ಮಂಜುನಾಥ್, ಡಾ.ರಾಮಪ್ರಿಯಾ, ಡಾ.ಲೀಲಾವತಿ ಮತ್ತು ಡಾ.ಆರಿಫ್ ಉಪಸ್ಥಿತರಿದ್ದರು.

ಮೈಸೂರಿನಲ್ಲಿ ಕಾಂಗರೂ ಕೇರ್ ರ್ಫರ್ಟಿಲಿಟಿ ಸೆಂಟರ್ ಉದ್ಘಾಟನೆ Read More