ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚಾರಣೆ

ಮೈಸೂರು: ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ವತಿಯಿಂದ ಮಹಾಜನ ಪದವಿಪೂರ್ವ ಕಾಲೇಜಿನಲ್ಲಿ
ಅಪರಾಧ ತಡೆ ಮಾಸಾಚಾರಣೆ ಹಮ್ಮಿಕೊಳ್ಳಲಾಯಿತು.

ಈ ವೇಳೆ ಜಯಲಕ್ಷ್ಮಿ ಪುರಂ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾರಾಯಣ್ ಅವರು ಮಾತನಾಡಿ ಸೈಬರ್ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ದುರ್ಬಳಕೆ ಮತ್ತು ಆನ್ಲೈನ್ ಗೇಮಿಂಗ್ ಚಟಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂತಹ ಚಟುವಟಿಕೆಗಳು ಎಲ್ಲಾದರೂ ಕಂಡುಬಂದರೆ ಯಾವುದೇ ಸಂಧರ್ಬದಲ್ಲಿ ಪೋಷಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿ ನಿಮ್ಮ ಜವಾಬ್ದಾರಿ ಮೆರೆಯಬೇಕು ಎಂದು ನಾರಾಯಣ್ ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ವಿಶಕಂಠಮೂರ್ತಿ ಅವರು ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ದುಷ್ಟ ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಸಾಕ್ಷಿಕರಿಸಲು ನಾನು ಪ್ರತಿಯೊಂದು ದಿನವೂ ಖುದ್ದಾಗಿ ವೀಕ್ಷಿಸುತ್ತೇನೆ ನಮ್ಮ ವಿದ್ಯಾರ್ಥಿ ಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಟೋಟಗಳಲ್ಲಿ ಬಹಳ ಚಟುವಟಿಕೆಯಿಂದ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದರೂ ನಾವು ಮುಂದಿನದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ಸಮಿತಿ ರಚಿಸಿ ತಕ್ಷಣ ಕಾರ್ಯರಂಭ ಮಾಡುತ್ತೇವೆ ಮತ್ತು ಪೋಷಕರ ಜೊತೆ ಈ ಸಂಬಂಧ ಸಭೆ ಮಾಡಿ ಅವರ ಸಹಾಯವನ್ನು ಪಡೆದು ಉತ್ತಮ ವಾತಾವರಣ ನಿರ್ಮಿಸುತ್ತೇವೆ ಇದಕ್ಕೆ ನಮ್ಮ ಆಡಳಿತ ಮಂಡಳಿಯವರು ಸಹಾ ಬಹಳ ಸಹಕಾರಿ ಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಸ್ವಾಮಿ ಗೌಡ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ ಆರ್. ರಾಘವೇಂದ್ರ ಮತ್ತು ಎಲ್ಲ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚಾರಣೆ Read More

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್

ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸರು ಉಪನ್ಯಾಸಕರೊಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ದೂರು ನೀಡಿದ್ದು,ಭರತ್ ಭಾರ್ಗವ ಎಂಬ ಉಪನ್ಯಾಸಕನ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡು ಬಂಧಿಸಲಾಗಿದೆ.

ಬಿ ಎನ್ ಎಸ್ ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿನಿತ್ಯ ಈ ಉಪನ್ಯಾಸಕ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾರೆ.

ಮಾರ್ಕ್ಸ್ ಹೆಚ್ಚು ನೀಡುತ್ತೇನೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿ, ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಅಂತಾ ಕರೆಯುತ್ತಿದ್ದನೆಂದು ಮಹಿಳಾ ಉಪನ್ಯಾಸಕರಿಗೆ ವಿಧ್ಯಾರ್ಥಿನಿ ದೂರು ನೀಡಿದ್ದರು.

ದೂರು ನೀಡಿದ ಕಾರಣ ಭರತ್ ಭಾರ್ಗವ್ ಕರೆ ಮಾಡಿ ಬೆದರಿಕೆ ಕೂಡಾ ಹಾಕಿದ್ದ.ಜತೆಗೆ ವಿದ್ಯಾರ್ಥಿನಿ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ.ಅಲ್ಲದೆ ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ಆಕೆ‌ ದೂರಿದ್ದಾರೆ.

ಈಗ ಉಪನ್ಯಾಸಕ ಕಂಬಿ ಎಣಿಸುವಂತಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್ Read More

ನಡು ರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ

ಮೈಸೂರು: ಹೋಟೆಲ್ ಬಿಲ್ ಪಾವತಿ ಮಾಡಿಲ್ಲವೆಂದು ಆರೋಪಿಸಿ ಮಾಲೀಕರು ಸೇರಿದಂತೆ ಮೂವರು ವ್ಯಕ್ತಿಗಳು ಮಹಿಳೆಯೊಬ್ಬರ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚವಟಿ ವೃತ್ತದ ಬಳಿ ಈ ಘಟನೆ ನಡೆದಿದೆ.

ಮೈಸೂರು ಕಿಚನ್ ಹೋಟೆಲ್ ಮಾಲೀಕರಾದ ಸವಿತಾ ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೂ ಮಾರಾಟ ಮಾಡುವ ಶೋಭಾ ರವರು ಮೈಸೂರು ಕಿಚನ್ ಹೋಟೆಲ್ ನಲ್ಲಿ ಖಾರಾಬಾತ್ ಹಾಗೂ ರೈಸ್ ಭಾತ್ ಖರೀದಿಸಿದ್ದಾರೆ.170 ರೂ ಬಿಲ್ ಪಾವತಿಸಿದ್ದಾರೆ.

ಆದರೆ 10 ದಿನಗಳ ನಂತರ ಮಾಲೀಕರಾದ ಸವಿತಾ ಇಬ್ಬರು ವ್ಯಕ್ತಿಗಳನ್ನ ಕಾರಿನಲ್ಲಿ ಕರೆತಂದು ಪಂಚವಟಿ ವೃತ್ತದ ಬಳಿ ಹೋಗುತ್ತಿದ್ದ ಶೋಭಾ ಅವರನ್ನ ಅಡ್ಡಗಟ್ಟಿ ಬಿಲ್ ಪಾವತಿಸಿಲ್ಲವೆಂದು ಆರೋಪಿಸಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ.

ಇದರಿಂದ ತಮ್ಮ ಕಿವಿ ತಮಟೆ ಒಡೆದುಹೋಗಿದೆ ಎಂದು ಆರೋಪಿಸಿರುವ ಶೋಭಾ ಸವಿತಾ ಹಾಗೂ ಇಬ್ಬರು ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಡು ರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ Read More