ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಿಂದ ವ್ಯಕ್ತಿ ಕುಸಿದು ಬಿದ್ದು ವ್ಯಕ್ತಿ ಸಾವು

ಮೈಸೂರು: ಗಣಪತಿ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರು ಟ್ರ್ಯಾಕ್ಟರ್‌ನಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯಲ್ಲಿ ನಡೆದಿದೆ.

ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಆಟೋ ರಾಜು(34) ಎಂಬವರು ಮೃತಪಟ್ಟಿದ್ದು,ಅವರಿಗೆ ಪತ್ನಿ, ಎರಡು ಹೆಣ್ಣು, ಗಂಡು ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ.

ಎರಡು ಕಡೆ ಪ್ರತಿಷ್ಠಾಪಿಸಿದ್ದ ಗಣಪತಿಗಳನ್ನು ಗ್ರಾಮಸ್ಥರು ವಿಸರ್ಜನೆಗಾಗಿ ಟ್ರ್ಯಾಕ್ಟರ್ ಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ಮನೆಗಳ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದರು.

ಆಗ ಟ್ರ್ಯಾಕ್ಟರ್ ನಲ್ಲಿದ್ದ ಆಟೋರಾಜು ದಿಢೀರ್ ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಹುಣಸೂರು ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದರು.

ಇದರಿಂದಾಗಿ ಸಂಭ್ರಮ ಮನೆಮಾಡಿದ್ದ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ.ಕೂಡಲೇ ಮೆರವಣಿಗೆ ರದ್ದು ಮಾಡಿ ನೇರವಾಗಿ ಚಿಕ್ಕ ಕೆರೆಯಲ್ಲಿ ಗಣಪತಿಗಳನ್ನು ವಿಸರ್ಜಿಸಿದ್ದಾರೆ.

ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಿಂದ ವ್ಯಕ್ತಿ ಕುಸಿದು ಬಿದ್ದು ವ್ಯಕ್ತಿ ಸಾವು Read More

ಸಿದ್ದನಕೊಪ್ಪಲು ಚರಂಡಿ ರಾಡಿ;ಡೇಂಘಿಯಿಂದ ಬಳಲುತ್ತಿರುವ ಜನ!

ಹುಣಸೂರು: ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ರಾಮ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನ ಕೊಪ್ಪಲು ಕಿರಿಜಾಜಿ ಗ್ರಾಮದ ಚರಂಡಿ ನೀರು ತುಂಬಿ ಜನರಿಗೆ ಮಾರಕವಾಗಿದೆ.

ಸಿದ್ದನ ಕೊಪ್ಪಲು ರಸ್ತೆಯಿಂದ ಕಿರಿಜಾಜಿ ಗ್ರಾಮದ ಕಡೆಗೆ ಸಾಗುವ ಈ ಚರಂಡಿ ಸತತ ಮಳೆಯಿಂದಾಗಿ ನೀರು ತುಂಬಿಕೊಂಡು ಕೆಸರಿನಿಂದ ರಾಡಿಯಾಗಿದೆ.

ಈ ಚರಂಡಿ ಜಮೀನಿನಲ್ಲಿ ಹಾದು ಹೋಗುವುದರಿಂದ ಜಮೀನಿನ ಮಾಲೀಕರು ತಮ್ಮ ಜಮೀನಿಗೆ ತೊಂದರೆಯಾಗುತ್ತದೆ ಎಂದು ಚರಂಡಿ ಪೂರ್ಣಗೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ ಹಾಗಾಗಿ ಡ್ರೈನೇಜ್ ಅರ್ಧಕ್ಕೆ ನಿಂತು ನೀರು ಅಲ್ಲೇ ನಿಲ್ಲುವಂತಾಗಿಬಿಟ್ಟಿದೆ.

ಮಳೆಯಿಂದಾಗಿ ನೀರು ತುಂಬಿಕೊಂಡಿರುವುದರಿಂದ ನೀರು ಮುಂದೆ ಸಾಗದೆ ಮನೆಗಳ ಕಾಂಪೌಂಡ್ ಮತ್ತು ಮನೆಗಳಿಗೂ ನುಗ್ಗಿ ರಾಡಿ ಆಗುತ್ತಿದೆ ಎಂದು ಸ್ಥಳೀಯರಾದ ಸುವರ್ಣ, ಪರಮೇಶ್ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ.

ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಅವರುಗಳು ಚರಂಡಿಯಲ್ಲಿ ನೀರು ತುಂಬಿಕೊಂಡು ಗಬ್ಬೆದ್ದುಹೋಗಿದೆ.

ನೀರಿನಲ್ಲಿ ಹೂಳು ತುಂಬಿಕೊಂಡು ಸೊಳ್ಳೆಗಳ ಕಾಟ ವಿಪರೀತವಾಗಿದ್ದು,ನಾಲ್ಕೈದು ಮಂದಿಗೆ ಡೇಂಘಿ‌ ಬಂದಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಊರಿನ ಜನ ಆತಂಕ‌ ಪಟ್ಟಿದ್ದಾರೆ.

ನಾವು ಪದೇ ಪದೇ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇ ಒ ಗಳಿಗೆ ದೂರ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇ ಒ ಅವರು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿ 15 ದಿನಗಳಾಗಿದೆ.ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜನ ಆಕ್ರೋಶ‌ ವ್ಯಕ್ತಪಡಿಸಿದರು.

ಚರಂಡಿ ತುಂಬಿರುವುದರಿಂದ ಮಕ್ಕಳು ಓಡಾಡುವುದು ಕಷ್ಟವಾಗಿದೆ, ಜಾರಿ ಬಿದ್ದರೆ ಗೊತ್ತಾಗುವುದಿಲ್ಲ, ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ ಎಂದು ಸುವರ್ಣ ಅಳಲು ತೋಡಿಕೊಂಡಿದ್ದಾರೆ.

ಈ‌ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕೂಡ ವರ್ಷಿಣಿ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

ಡ್ರೈನೇಜ್ ಸರಿ ಇಲ್ಲದಿರುವ ಬಗ್ಗೆ ದೂರು ನೀಡಲಾಗಿದೆ.ಪಿಡಿಒ ಅವರನ್ನು ಕೇಳಿದರೆ ತಮಗೆ ವರ್ಗಾವಣೆಯಾಗಿದೆ ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡುವುದಿಲ್ಲ ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಸಿದ್ದನ ಕೊಪ್ಪಲು-ಕಿರಿಜಾಜಿ ಚರಂಡಿ ಅವ್ಯವಸ್ಥೆ ಇಂದು,ನಿನ್ನೆಯದಲ್ಲಾ, ಕಳೆದ ಒಂದು ವರ್ಷದಿಂದ ಚರಂಡಿ ಹೀಗೆ ಗಬ್ಬೆದ್ದು ಹೋಗಿದೆ.ಹೂಳು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತದೆ ಊಟ ಕೂಡಾ ಮಾಡಲಾಗುವುದಿಲ್ಲ.ಗ್ರಾಮ ಪಂಚಾಯಿತಿ ಸದಸ್ಯರು ಬಂದು ನೋಡುವುದಿಲ್ಲ‌ ಎಂದು ಸ್ಥಳೀಯ ಜನತೆ‌ ಆರೋಪಿಸಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಸಿದ್ದನಕೊಪ್ಪಲು‌ ಚರಂಡಿಯನ್ನು ಸರಿಪಡಿಸಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಟ್ಟು ರೋಗರುಜಿನಗಳಿಂದ ಪಾರು ಮಾಡಿಯಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿದ್ದನಕೊಪ್ಪಲು ಚರಂಡಿ ರಾಡಿ;ಡೇಂಘಿಯಿಂದ ಬಳಲುತ್ತಿರುವ ಜನ! Read More

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ!

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದುದನ್ನು ಸರಿಪಡಿಸಲಾಗಿದ್ದು, ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿ ಕಸ ತೆಗೆದು ಯಾವದೋ ಕಾಲವಾಗಿತ್ತು,ಈಗ ಸತತ ಮಳೆ ಬರುತ್ತಿದ್ದು,ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು‌ ವಾಸನೆ ಬರುತ್ತಿತ್ತು.

ಚರಂಡಿಯಲ್ಲಿ ಹುಳು,ಹುಪ್ಪಟಿ ತುಂಬಿತ್ತಲ್ಕದೆ ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿತ್ತು.

ಇದರಿಂದಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದರು.

ಜನರ ಆತಂಕ ಗಮನಿಸಿ ವರ್ಷಿಣಿ ನ್ಯೂಸ್ ನವರು ಸುದ್ದಿ ಪ್ರಕಟಿಸಿದ್ದರು.ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ
ಚರಂಡಿ ಹೂಳು ತೆಗೆಸಿ ಸಾಧ್ಯವಾದಷ್ಟು ಸರಿಪಡಿಸಿದ್ದಾರೆ.

ಚರಂಡಿ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು,ಪಿಡಿಒ ಹಾಗೂ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನವರಿಗೆ ಸ್ಥಳೀಯ ಜನರು ಮತ್ತು ಚೆಲುವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

ವರ್ಷಿಣಿ ನ್ಯೂಸ್ ಫಲಶೃತಿ:ಹೊನ್ನಿಕುಪ್ಪೆ ಗ್ರಾಮದ ಚರಂಡಿ ಸ್ವಚ್ಛ! Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಯಲ್ಲಿಕೊಳಕು ನೀರು! ಕೇಳುವವರೇ ಇಲ್ಲಾ

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದು ಜನ ಬದುಕಲಾರದ ಸ್ಥಿತಿಯಲ್ಲಿದ್ದಾರೆ.

ಚರಂಡಿಯಲ್ಲಿ ಕಸ ತೆಗೆದು ಯಾವ ಕಾಲವಾಯಿತೊ ಗೊತ್ತಿಲ್ಲ.ಹೂಳು ತುಂಬಿದೆ,ಹಾಗಾಗಿ ಮಳೆ ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು‌ ವಾಸನೆ ಬರುತ್ತಿದೆ.

ಚರಂಡಿಯಲ್ಲಿ ನೀರು ನಿಂತಿರುವುದರಿಂದ ಹುಳು,ಹುಪ್ಪಟಿ ತುಂಬಿವೆ, ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ, ಹಾಗಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಆತಂಕ ವ್ಯಕ್ತಪಡಿಸಿದ್ದಾರೆ.

ಎಷ್ಟು ದಿನಗಳಿಂದ ಚರಂಡಿಯಲ್ಲಿ ನೀರು ತುಂಬಿಕೊಂಡು ಕಬ್ಬು ವಾಸನೆ ಬಂದು ಗ್ರಾಮದ ವಾತಾವರಣ ಹಾಳಾಗಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರಾಗಲಿ ಅಧ್ಯಕ್ಷರಾಗಲಿ,ಪಿಡಿಒ ಆಗಲಿ ಯಾರೂ ಇತ್ತ ಗಮನ ಹರಿಸಿಲ್ಲ ಬಹಳ ಸಾರಿ ದೂರು ನೀಡಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಜನರು ಮತ್ತು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿಯ ಕೆಟ್ಟ‌‌ವಾಸನೆ ತಡೆಯಲಾಗದೆ‌ ಕೆಲವರಿಗೆ ಕಾಲರಾ ಕಾಡುತ್ತಿದೆ.ಜನ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ.

ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ತಕ್ಷಣ ಗ್ರಾಮಕ್ಕೆ ಆಗಮಿಸಿ ಇಲ್ಲಿನ ಚರಂಡಿಗಳನ್ನು ಸ್ವಚ್ಛಪಡಿಸಲು ಕ್ರಮ ಕೈಗೊಳ್ಳಬೇಕು, ಹೂಳು ತೆಗೆಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕೆಂದು ಗ್ರಾಮಸ್ಥರ ಪರವಾಗಿ ಚಲುವರಾಜು ಒತ್ತಾಯಿಸಿದ್ದಾರೆ.

ದೂರು ಕೊಟ್ಟರೂ ಏನು ಕ್ರಮ ತೆಗೆದುಕೊಳ್ಳದ ಪಿಡಿಒ ಮೇಲೆ ಇ ಒ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಯಲ್ಲಿಕೊಳಕು ನೀರು! ಕೇಳುವವರೇ ಇಲ್ಲಾ Read More

ಕಾವೇರಿ ಹಾರ್ಟ್ ಅಂಡ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉರುಳಿಸಲು ಯತ್ನ:ಕಿಡಿ

ಹುಣಸೂರು: ಅನ್ಯಾಯಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಹುಣಸೂರು ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ, ಇದಕ್ಕೊಂದು ಸ್ಪಷ್ಟ ಉದಾರಣೆ ಇಂದು ನಡೆದಿದೆ.

ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ಸ್ಥಾಪನೆಯಾಗಿರುವ ಕಾವೇರಿ ಹಾರ್ಟ್ ಅಂಡ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೊಂಡು ಈಗಾಗಲೇ ಅಗತ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

ಆದರೆ ನಗರಸಭೆ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ಕಾವೇರಿ ಆಸ್ಪತ್ರೆ ಕಟ್ಟಡವನ್ನು ಉರುಳಿಸಲು ಪೋಲೀಸ ಸರ್ಪಗಾವಲಿನಲ್ಲಿ ಆಗಮಿಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಸ್ಥಳೀಯರು ತೀವ್ರ ‌ವಿರೋಧ‌ ವ್ಯಕ್ತಪಡಿಸಿ ಕಟ್ಟಡ ಒಡೆಯುವುದನ್ನು ತಡೆದರು.

ಆಸ್ಪತ್ರೆ ಉರುಳಿಸಲು ಮುಂದಾದಾಗ ಪೊಲೀಸರು ಮತ್ತು ಜನರ ನಡುವೆ ಕೆಲಕಾಲ ವಾಗ್ವಾದ ಕೂಡ ನಡೆಯಿತು.

ಜೆಸಿಬಿ ಸದ್ದು ಮಾಡುವಷ್ಟರಲ್ಲಿ ಜನರ ವಿರೋಧ ಮತ್ತು ಕರ್ನಾಟಕ ಪ್ರಜಾ ಪಾರ್ಟಿಯವರ ವಿರೋಧದಿಂದ ಸದ್ಯಕ್ಕೆ ಹುಣಸೂರು ನಗರಸಭೆ ಅಧಿಕಾರಿಗಳು ಒಂದು ತಿಂಗಳು ಕಾಲಾವಕಾಶ ನೀಡಿ ಕಟ್ಟಡ ಒಡೆಯುವುದರಿಂದ ಹಿಂದೆ ಸರಿದಿದ್ದಾರೆ.

ಹೈ ಕೋರ್ಟ್ ಆದೇಶ ಇರುವುದರಿಂದ ನಾವು ಕಟ್ಟಡ ತೆರವುಗೊಳಿಸುತ್ತಿದ್ದೇವೆ ಎಂಬುದಾಗಿ ನಗರಸಭೆಯವರು ಈಗ ಹೇಳುತ್ತಿದ್ದಾರೆ ಆದರೆ ಕಟ್ಟಡಕ್ಕೆ ಪಾಯ ಹಾಕಿ ಕಟ್ಟಡ ಮೇಲೆ ಏಳುವಾಗ ನಗರಸಭೆಯವರ ಕಣ್ಣಿಗೆ ಬೀಳಲಿಲ್ಲವೇ ಏನು ಮಾಡುತ್ತಿದ್ದರು ಎಂದು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಹಾರ್ಟ್ ಅಂಡ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉರುಳಿಸಲು ಯತ್ನ:ಕಿಡಿ Read More

ರಾಡಿಯಾದ ಹೌಸಿಂಗ್ ಬೋರ್ಡ್ ರಸ್ತೆ;ಬೀದಿ ದೀಪವೂ ಇಲ್ಲದೆ ಕಂಗಾಲಾದ ಜನ

ಹುಣಸೂರು: ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 27, ಹೌಸಿಂಗ್ ಬೋರ್ಡ್ ಗೆ ಹೋಗುವ ರಸ್ತೆ ಕಿತ್ತು ರಾಡಿಯಾಗಿಬಿಟ್ಟಿದೆ.

ಈ ರಸ್ತೆ ಚೆನ್ನಾಗಿಯೇ ಇತ್ತು ಆದರೆ ಯಾವ ಕಾರಣಕ್ಕೆ ರಸ್ತೆಯನ್ನು ಕಿತ್ತು ಹಾಕಿದ್ದಾರೆ ಎಂಬುದು ತಿಳಿಯದು.

ರಸ್ತೆ ಗುಂಡಿಗಳಲ್ಲಿ ಈಗ ಮಳೆ ನೀರು ತುಂಬಿಕೊಂಡು ಮನೆಯಿಂದ ಮಕ್ಕಳು,ಹಿರಿಯರು ಸೇರಿದಂತೆ ಯಾರೂ ಹೊರಬರದಂತಾಗಿದೆ.

ಏಕೆಂದರೆ ರಸ್ತೆ ಗುಂಡಿ ಮಯವಾಗಿದ್ದು ಮಳೆ ನೀರು ಸದಾ ತುಂಬಿಕೊಂಡು ಹೆಸರು ಗದ್ದೆಯಾಗಿದೆ, ಇಷ್ಟು ಕೆಟ್ಟ ರಸ್ತೆಯಲ್ಲಿ ಓಡಾಡುವುದು ಹೇಗೆ? ರಾತ್ರಿಯಾಗುತ್ತಿದ್ದಂತೆ ಕತ್ತಲು ಆವರಿಸುತ್ತದೆ ಕಳ್ಳರು ಬಂದರೆ ಏನು ಮಾಡಬೇಕು ಎಂದು ಜನ ಪ್ರಶ್ನಿಸಿದ್ದಾರೆ.

ನಗರಸಭೆ ಆಯುಕ್ತರು, ಅಧಿಕಾರಿಗಳು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸಿ ತೋರಿಸಲಿ ಎಂದು ಇಲ್ಲಿನ ಜನ ಕಿಡಿಕಾರಿ ಒತ್ತಾಯಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಗಳಿಗೆ ಈ ರಸ್ತೆ ಕಾಣಿಸುತ್ತದೊ ಇಲ್ಲವೋ ತಿಳಿಯದು ಚೆನ್ನಾಗಿದ್ದ ರಸ್ತೆಯನ್ನ ಕಿತ್ತು ಹಾಕಿರುವುದು ಏಕೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರಸ್ತೆಯಲ್ಲಿ ರಾತ್ರಿಯಾದರೆ ಕತ್ತಲು ಆವರಿಸಿಕೊಂಡಿರುತ್ತದೆ ಏಕೆಂದರೆ ಇಲ್ಲಿರುವ 8 ವಿದ್ಯುತ್ ಕಂಬಗಳ ದೀಪಗಳನ್ನು ತೆಗೆದುಹಾಕಲಾಗಿದೆ, ಇದುವರೆಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಜನ ಆಕ್ರೋಶ ದಿಂದ ನುಡಿದಿದ್ದಾರೆ.

ಎರಡು ತಿಂಗಳಿಂದ ರಸ್ತೆಯಲ್ಲಿ ಬೀದಿ ದೀಪಗಳೂ ಇಲ್ಲ, ಮೊದಲೇ ರಸ್ತೆ ಕಿತ್ತು ರಾಡಿಯಾಗಿದೆ, ಬೀದಿ ದೀಪಗಳು ಇಲ್ಲದ ಕಾರಣ ಸಂಜೆಯಾಗುತ್ತಿದ್ದಂತೆ ಸಣ್ಣಪುಟ್ಟ ಸಾಮಾನು ತರಲು ಕೂಡಾ ಹೊರ ಬರುವುದು ಸಾಧ್ಯವಾಗುತ್ತಿಲ್ಲ, ಕೆಲಸ ಕಾರ್ಯಗಳಿಗೆ ಹೊರಗೆ ಹೋದವರು ಮನೆಗೆ ವಾಪಸ್ ಬರುವುದು ಹೇಗೆ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.

ಕತ್ತಲೆಯಲ್ಲಿ ಈ ಕೆಟ್ಟ ರಸ್ತೆಯಲ್ಲಿ ಜನ ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ ಆದರೂ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಿರುಗಿ ನೋಡಿಲ್ಲ ಎಂದು ಜನರ ಪರವಾಗಿ ಅವರು ಕಿಡಿಕಾರಿದ್ದಾರೆ.

ತಕ್ಷಣವೇ 21ನೇ ವಾರ್ಡ್ ರಸ್ತೆಯನ್ನು ಸರಿಪಡಿಸಬೇಕು ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು ಇಲ್ಲದಿದ್ದರೆ ಜನ ನಗರ ಸಭೆ ಮುಂದೆ ಪ್ರತಿಭಟನೆ ಮಾಡಲು ಸಿದ್ಧರಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ರಾಡಿಯಾದ ಹೌಸಿಂಗ್ ಬೋರ್ಡ್ ರಸ್ತೆ;ಬೀದಿ ದೀಪವೂ ಇಲ್ಲದೆ ಕಂಗಾಲಾದ ಜನ Read More

ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಸುಳ್ಳು 11-ಬಿ ಖಾತೆ ಸೃಷ್ಟಿಸಿ ತಮಗೆ ಸೇರಿದ ಸ್ವತ್ತನ್ನು ಯಾರೋ ಮೂರನೆ ವ್ಯಕ್ತಿಗೆ ‘ಬಿ’ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಸ್ವತ್ತಿನ ಮಾಲೀಕರು ಪ್ರತಿಭಟನೆ ನಡೆಸಿದರು.

ಸ್ವತ್ತಿನ ಮಾಲೀಕ ಮಣಿಪುತ್ರ ಮತ್ತು ಅವರ‌ ಸಹೋದರ ಪ್ರಶಾಂತ್ ಮತ್ತಿತರರು ನಡೆಸಿದ ಪ್ರತಿಭಟನೆಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಬೆಂಬಲ ನೀಡಿದರು.

ಹುಣಸೂರು ತಾಲ್ಲೂಕು,
ಹನಗೋಡು ಹೋಬಳಿ 2ನೇ ಪಕ್ಷಿರಾಜಪುರ ಗ್ರಾಮದ ಮಣಿಪುತ್ರ ಬಿನ್ ಲೇಟ್: ಶುದ್ದರಾಜು ಅವರಿಗೆ ,ಸಂತರಾಜ್ ಮತ್ತು ಅಕ್ಕ ಮನಿಲಾ ರವರಿಗೆ ಸೇರಿದ ಸ್ವತ್ತನ್ನು 3ನೇ ವ್ಯಕ್ತಿಗೆ ಅಂದರೆ ನತಾನಿಯಲ್ ಬಿನ್ ಲೇಟ್: ಜೈಶಂಕರ್ ರವರಿಗೆ ಯಾವುದೇ ಹಕ್ಕುಬಾಧ್ಯತೆ ಇಲ್ಲದಿದ್ದರೂ ಸಹ ಉಮ್ಮತ್ತೂರು ಗ್ರಾಮ ಪಂಚಾಯಿತಿ ಪಿ.ಡಿ.ಒ. ಮಹದೇವ ರವರು ಯಾವುದೇ ಆರ್.ಡಿ. ವಂಶವೃಕ್ಷ ಪಡೆಯದೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಕೊಟ್ಟಿದ್ದಾರೆ, ಸದರಿ ಸ್ವತ್ತನ್ನು ‘ಬಿ’ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ‘ಬಿ’ ಖಾತೆ ದಾಖಲು ಮಾಡಲು ನನ್ನ ಅಕ್ಕ ಮನಿಲಾ ಅಥವಾ ನನ್ನ ಭಾವ ಸಂತರಾಜು ರವರ ಹೆಸರಿನಲ್ಲಿ ರೆವಿನ್ಯೂ ಆರ್.ಟಿ.ಸಿ. ಇರುವುದಿಲ್ಲ. ನನ್ನ ಹೆಸರಿಗೆ ವಿಲ್ ದಾಖಲಾಗಿದ್ದರೂ ಸಹ ಪರಿಗಣಿಸದೆ ಸುಳ್ಳು ಖಾತೆ ಸೃಷ್ಟಿಸಿರುತ್ತಾರೆ. ಇದರ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪ್ರಶಾಂತ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಖಾತೆ ವಜಾ ಮಾಡಬೇಕು ಹಾಗೂ ಭ್ರಷ್ಟಾಚಾರ ಎಸಗಿರುವ ಪಿ.ಡಿ.ಒ ಮಹದೇವ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.

ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ Read More

ಕೆಪಿಪಿ ಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿ ಕೊಡುಗೆ

ಹುಣಸೂರು: ಕರ್ನಾಟಕ ರಾಜ್ಯ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ‌ ಹೊನ್ನಿಕೊಪ್ಪಲು‌‌‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.

79‌ ನೆ‌ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ
ಕೆಪಿಪಿ ರೈತಪರ್ವ ರಾಜ್ಯಾಧ್ಯಕ್ಷ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು 30 ಸಾವಿರ ರೂ ಮೌಲ್ಯದ ಟಿವಿಯನ್ನು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಿ‌ ಮಾದರಿಯಾಗಿದ್ದಾರೆ.

ಈ ವೇಳೆ ತಾಲೂಕು ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಚೆಲುವರಾಜು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಪಾರ್ವತಿ, ಶಾಲೆಯ ಮುಖ್ಯ ಶಿಕ್ಷಕರಾದ ಎನ್ ಕೆ ರಮೇಶ್, ಶಾಲೆಯ ಸಹ ಶಿಕ್ಷಕರಾದ ಗಿರೀಶ್ ಕುಮಾರ್ ಕೆ.ಎಸ್, ರವಿಕುಮಾರ್, ಕುಮಾರಿ ರೇಖಾ ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ‌ ಸಂದರ್ಭದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿರುವ ಟಿವಿಯನ್ನು ಪಡೆದು ಪ್ರಜಾ ಪಾರ್ಟಿ ರಾಜ್ಯ ಅಧ್ಯಕ್ಷ ಶಿವಣ್ಣ ಹಾಗೂ ತಾ.ಅಧ್ಯಕ್ಷ ಚೆಲುವ ರಾಜು ಅವರಿಗೆ ಶಾಲೆಯ ಪರವಾಗಿ ಅಭಿನಂದಿಸಲಾಯಿತು.

ಕೆಪಿಪಿ ಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿ ಕೊಡುಗೆ Read More

ಹುಣಸೂರು ನಗರಸಭೆ ಪೌರಾಯುಕ್ತರ ವಿರುದ್ಧ ಏಕಾಂಗಿ ಧರಣಿ ನಡೆಸಿದ ಸದಸ್ಯ

ಹುಣಸೂರು: ಹುಣಸೂರು ನಗರಸಭೆಯ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾನಸ ಅವರ ವಿರುದ್ಧ ನಗರಸಭಾ ಸದಸ್ಯರೂ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾದ ವಿವೇಕಾನಂದ ಅವರು ಅರ್ಧ ದಿನ ಏಕಾಂಗಿ ಧರಣಿ ಮಾಡಿದರು.

ನಗರಸಭೆಯ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ‌ಅವರ ಭಾವಚಿತ್ರ ಇಟ್ಟು ಹಾರ ಹಾಕಿ ಅನಿರ್ದಿಷ್ಟ ಪ್ರತಿಭಟನೆ ಪ್ರಾರಂಭಿಸಿ ಮಧ್ಯಾಹ್ನ ಮೂರು‌ ಗಂಟೆ ವೇಳೆ ಧರಣಿ ಕೈಬಿಟ್ಟಿದ್ದಾರೆ.

ಹುಣಸೂರು ನಗರಸಭೆಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್, ಪೌರ ಆಯುಕ್ತರು‌ ಶ್ರೀಮತಿ ಮಾನಸ ಅವರಿಂದ ಸರ್ವಾಧಿಕಾರಿ ಧೋರಣೆ, ಅಧಿಕಾರಿಗಳಿಗೆ % ನೀತಿ ವಿರೋಧಿಸಿ ನಿರಂತರ ಪ್ರತಿಭಟನೆ ಎಂದು‌ ವಿವೇಕಾನಂದ ಅವರು ಪೋಸ್ಟರ್ ಕೂಡ ಹಾಕಿದ್ದರು.

ಮಾನಸ ಅವರು ಕೆ.ಎಂ.ಎ.ಎಸ್ ಮುಖ್ಯಾಧಿಕಾರಿ ಶ್ರೇಣಿ-2 ಅಧಿಕಾರಿಯಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದೆ ನಗರಸಭೆಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಅವರು ಶನಿವಾರ ಬೆಳಿಗ್ಗೆ ಈ ಪ್ರತಿಭಟನೆ ಪ್ರಾರಂಭಿಸಿದ್ದರು.

ಸರ್ಕಾರಿ ಕೆರೆಗೆ ಮತ್ತು ನಗರಸಭೆಯ ಆಸ್ತಿಗಳನ್ನು ರಕ್ಷಣೆ ಮಾಡದೆ, ಅಕ್ರಮವಾಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಲೈಸೆನ್ಸ್ ಮಂಜೂರು ಮಾಡಿದ್ದಾರೆ ಎಂದು ವಿವೇಕಾನಂದ ಅವರು ಗಂಭೀರ ಆರೋಪ ಮಾಡಿದ್ದರು.

ಹುಣಸೂರು ನಗರಸಭೆ ಪೌರಾಯುಕ್ತರ ವಿರುದ್ಧ ಏಕಾಂಗಿ ಧರಣಿ ನಡೆಸಿದ ಸದಸ್ಯ Read More

ಕೆಸರುಗದ್ದೆಯಲ್ಲಿ ನಿಂತು ಗಜಪಡೆಯ ಪಯಣ ಕಣ್ತುಂಬಿಕೊಂಡ ಜನತೆ-ಕೆಪಿಪಿ ಕಿಡಿ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಹುಣಸೂರಿನ ವೀರನ ಹೊಸಹಳ್ಳಿಯಿಂದ ಗಜಪಡೆಯ ಪಯಣ ಇಂದು ಪ್ರಾರಂಭವಾಯಿತು.

ಮಂತ್ರಿಗಳು, ಜನಪ್ರತಿನಿಧಿಗಳು ಬರಲು ಉತ್ತಮವಾದ ರಸ್ತೆಗಳನ್ನು ಮಾಡಲಾಗಿತ್ತು. ಆದರೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ.

ಗಜ ಪಯಣಕ್ಕೆ ವೀರನ ಹೊಸಹಳ್ಳಿ ಹೆಬ್ಬಾಗಿಲಿನಲ್ಲಿ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುತ್ತಮುತ್ತಲ ಭೂಮಿ ಕೆಸರು ಗದ್ದೆಯಂತಾಗಿದೆ.

ಸಿಬ್ಬಂದಿಗಳ ವಾಹನ, ಪೊಲೀಸರ ವಾಹನ ಸೇರಿದಂತೆ ಪತ್ರಕರ್ತರ ವಾಹನಗಳಿಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಎಷ್ಟೋ ವಾಹನಗಳು ಕೆಸರು ಗದ್ದೆಯಂತಾಗಿದ್ದ ಭೂಮಿಯಲ್ಲಿ ಕೂತುಕೊಳ್ಳುವಂತಾಗಿತ್ತು.

ನೂರಾರು ಮಂದಿ ಜನರು ಗಜ ಪಯಣವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದರು, ಆದರೆ ಸರಿಯಾದ ರಸ್ತೆ ಇಲ್ಲದೆ ಕುಳಿತುಕೊಳ್ಳಲು ಆಗದೆ ಕೆಸರು ಮಾಯವಾದ ಮಣ್ಣಿನಲ್ಲಿ ನಿಂತು ಮಕ್ಕಳೊಂದಿಗೆ ಎದ್ದು, ಬಿದ್ದು ಗಜ ಪಯಣ ಕಣ್ತುಂಬಿಕೊಂಡರು. ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಡವೇ ಎಂದು ಜನ ಬೈದುಕೊಳ್ಳುತ್ತಿದ್ದಿದ್ದು ಕಂಡುಬಂದಿತು

ಸರ್ಕಾರ ಗಜ ಪಯಣದ ಸಿದ್ಧತೆಗಾಗಿಯೇ ಕೋಟಿಗೂ ಹೆಚ್ಚು ಹಣ ನೀಡುತ್ತದೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಕೆಸರು ಗದ್ದೆಯಲ್ಲಿ ಜನ ಓಡಾಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ‌ ವಿಷಯದಲ್ಲೂ ಗೋಲ್ ಮಾಲ್ ಮಾಡಿ ಹಣ ಹೊಡೆಯುವುದೇ ಕಾಯಕವಾಗಿಬಿಟ್ಟಿದೆ ಎಂದು ಚಲುವರಾಜು ಕಿಡಿ ಕಾರಿದ್ದಾರೆ.

ಕೆಸರುಗದ್ದೆಯಲ್ಲಿ ನಿಂತು ಗಜಪಡೆಯ ಪಯಣ ಕಣ್ತುಂಬಿಕೊಂಡ ಜನತೆ-ಕೆಪಿಪಿ ಕಿಡಿ Read More