ಹರಕಪ್ಪ ದೇವಾಲಯದಲ್ಲಿ ಕಳವು: ಗೋಲಕ ಹೊತ್ತೊಯ್ದ ಕಳ್ಳರು

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದ ಸಮೀಪ ಇರುವ ಹರಕಪ್ಪ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ಬೆಳ್ಳಿವಸ್ತುಗಳು ಮತ್ತು ಗೋಲಕದ ಹಣ ದೋಚಿದ್ದಾರೆ.

ದೇವಾಲಯದ ಮುಂದಿನ ಬಾಗಿಲಿನ ಗ್ರಿಲ್‌ಗಳನ್ನು ಮಿಷನ್ ನಿಂದ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಬೆಳ್ಳಿ ತಟ್ಟೆ ದೀಪಾಲೆ ಕಂಬಗಳು ದೇವರಿಗೆ ಧರಿಸುವ ಬೆಳ್ಳಿ ಕಣ್ಣುಗಳು ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ.

ಈ ದೇವಾಲಯ ಸುಮಾರು 2 ಎಕರೆ ಜಾಗದಲ್ಲಿ ಇದ್ದು ಕಲ್ಯಾಣ ಮಂಟಪ ಕೂಡ ಇದೆ. ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿ ವಿವಾಹಗಳನ್ನು ಮಾಡುತ್ತಾರೆ.

ದೇವಾಲಯದಲ್ಲಿ ಸದಾ ಪೂಜೆ ನಡೆಯುತ್ತದೆ.
ಹಾಗಾಗಿ ಕಲ್ಯಾಣ ಮಂಟಪದಲ್ಲಿ ಗೋಲಕವನ್ನು ಇಟ್ಟಿದ್ದು ಸದಾ ತುಂಬಿರುತ್ತದೆ, ಹಾಗಾಗಿ ಲಕ್ಷಾಂತರ ಹಣ ಇದರಲ್ಲಿ ಇತ್ತು ಗೋಲಕವನ್ನೆ‌ ಹೊತ್ತೊಯ್ದಿರುವ ಕಳ್ಳರು, ಹಣ ತೆಗೆದುಕೊಂಡು ಗೋಲಕವನ್ನು‌ ಕಾಲುವೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ಹಿಂದೆ ಮೈಸೂರು ಮಹಾರಾಜರು ಬೇರೆ ಕಡೆ ಹೋಗಿ ವಾಪಸ್ ಬರುವಾಗ ಈ ದೇವಸ್ಥಾನ ಇರುವ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಇದ್ದು ವಿಶ್ರಾಂತಿ ಪಡೆದು ಬರುತ್ತಿದ್ದರಂತೆ ಹಾಗಾಗಿ ಮಹಾರಾಜರು ಈ ದೇವಸ್ಥಾನವನ್ನು ಕಟ್ಟಿಸಿ ಕೊಟ್ಟಿದ್ದಾರೆ ಎಂದು ಊರಿನ ಹಿರಿಯರು ಹೇಳುತ್ತಾರೆ.

ಯಾವುದಾದರೂ ಹರಕೆ ಹೊತ್ತರೆ ಈ ದೇವರು ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ ಅದಕ್ಕಾಗಿ ಈ ದೇವಾಲಯಕ್ಕೆ ಹರಕಪ್ಪ ದೇವಸ್ಥಾನ ಎಂದೆ ಹೆಸರು ಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹುಣಸೂರು‌ ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲಿಸಿ,ಮಹಜರು ನಡೆಸಿದರು.

ಇದೊಂದು ಪ್ರಸಿದ್ಧ ದೇವಾಲಯವಾಗಿದ್ದು‌ ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಮತ್ತು ಕೂಡಲೇ ಕಳ್ಳರನ್ನು‌ ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ‌ಚೆಲುವರಾಜು ಮತ್ತು ಗ್ರಾಮಸ್ಥರು ‌ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹರಕಪ್ಪ ದೇವಾಲಯದಲ್ಲಿ ಕಳವು: ಗೋಲಕ ಹೊತ್ತೊಯ್ದ ಕಳ್ಳರು Read More

ಹೊನ್ನಿಕುಪ್ಪೆ ಗ್ರಾಮಕ್ಕೆಸಿಕ್ಕಿತು ಸ್ಮಶಾನ ಜಾಗ- 7 ದಶಕಗಳ ಹೋರಾಟಕ್ಕೆ ಸಂದ ಜಯ

ಹುಣಸೂರು: ಸ್ಮಶಾನ‌ ಜಾಗಕ್ಕಾಗಿ ಏಳು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ,ಹೊನ್ನಿಕುಪ್ಪೆ ಗ್ರಾಮದ ಜನತೆಗೆ ಕಡೆಗೂ ಜಯ ಸಿಕ್ಕಿದೆ.

ಉದ್ದೂರು ಕಾವಲ್‌ ಗ್ರಾಮದ
ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇದೇ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ಮೀಸಲಿಡುವಂತೆಯೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ, ಹೊನ್ನಿಕುಪ್ಪೆ ಗ್ರಾಮ, ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು 17-8-2024 ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

ಆ ಮನವಿ ಪತ್ರದಲ್ಲಿ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಡುವಂತೆ ಚಲುವರಾಜು ಕೋರಿದ್ದರು.

ಇದೇ‌ ವಿಷಯಕ್ಕೆ ಸಂಬಂದಿಸಿದಂತೆ ಸುಮಾರು 70 ವರ್ಷಗಳಿಂದ ಗ್ರಾಮದ ಹಲವಾರು ಮುಖಂಡರು ಹೋರಾಟ ಮಾಡಿದ್ದರು.ಅವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ.

ಇತ್ತೀಚೆಗೆ ಚಲುವರಾಜು ಅವರು ತಮ್ಮ ಗ್ರಾಮಕ್ಕೆ ಸ್ಮಶಾನ ಬೇಕೇಬೇಕೆಂದು ಪಟ್ಟುಹಿಡಿದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಲುವರಾಜು ಅವರು ಸಲ್ಲಿಸಿದ ಮನವಿ ಪತ್ರದ ಬಗ್ಗೆ ಪರಿಶೀಲಿಸಿದ ಮೈಸೂರು ಜಿಲ್ಲಾಧಿಕಾರಿಗಳು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನನ್ನು ಹೊನ್ನಿಕುಪ್ಪೆ ಗ್ರಾಮದ ಎಲ್ಲಾ ಜನಾಂಗದವರ ಸ್ಮಶಾನ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಆದೇಶಿಸಿದ್ದಾರೆ.

ಅದರಂತೆ ಸಂಬಂಧಪಟ್ಟ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ತಾಲ್ಲೂಕು ಭೂಮಾಪಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನಿನ ಸ್ಥಳ ತನಿಖೆ ನಡೆಸಿ,ಆ ಜಮೀನನ್ನು ಅಳತೆ ಮಾಡಿ, ಸ್ಮಶಾನ ಜಮೀನನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು,
ಚಲುವರಾಜು ಅವರ ಸಮ್ಮುಖದಲ್ಲಿ ಸ್ಮಶಾನ ಜಾಗದ ಬೋರ್ಡ್ ಅಳವಡಿಸಲಾಗಿದೆ.

ಹೊನ್ನಿಕುಪ್ಪೆ ಗ್ರಾಮಕ್ಕೆಸಿಕ್ಕಿತು ಸ್ಮಶಾನ ಜಾಗ- 7 ದಶಕಗಳ ಹೋರಾಟಕ್ಕೆ ಸಂದ ಜಯ Read More