ಚಾಮುಂಡಿ ಬೆಟ್ಟ ಗಾಮ ಪಂಚಾಯಿತಿ ನಗರಪಾಲಿಕೆಗೆ ಸೇರಿಸಿ:ತೇಜಸ್ವಿ ಆಗ್ರಹ

ಮೈಸೂರು: ಚಾಮುಂಡಿ ಬೆಟ್ಟ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ ದೇವೇಗೌಡರು ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಲು ಶ್ರಮ ವಹಿಸುತ್ತಿದ್ದರೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸುತ್ತಿರುವುದು ಎಷ್ಟು ಸರಿ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಪ್ರಶ್ನಿಸಿದ್ದಾರೆ.

ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಸಾಕಷ್ಟು ಬ್ರಷ್ಟಾಚಾರಗಳು ನಡೆದಿದ್ದು ಅದನ್ನು ಮುಚ್ಚಿ ಹಾಕಲು ನಗರ ಪಾಲಿಕೆಗೆ ಸೇರಿಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರೇ ವಿರೋಧಿಸುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಅಭಿವೃದ್ಧಿ ಕಡೆ ಗಮನಹರಿಸಿ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಿದರೆ ಚಾಮುಂಡಿ ಬೆಟ್ಟ ಸಾಕಷ್ಟು ಅಭಿವೃದ್ಧಿ ಕಾಣುತ್ತದೆ ಇಲ್ಲದಿದ್ದರೆ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರುಗಳ ಅಧಿಕಾರಕ್ಕೆ ಸಿಕ್ಕಿ ಅಭಿವೃದ್ಧಿ ಕಾಣದೆ ಹಾಗೆ ಉಳಿಯುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಚಾಮುಂಡಿ ಬೆಟ್ಟ ಪ್ರವಾಸಿ ತಾಣವಾಗಿದ್ದು ಪ್ರತಿದಿನ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಇದು ನಗರ ಪಾಲಿಕೆಗೆ ಸೇರಿದರೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಕರ್ಯ ಸಿಗುತ್ತದೆ. ಗ್ರಾಮ ಪಂಚಾಯಿತಿಯಲ್ಲೇ ಮುಂದುವರೆದರೆ ಈಗಾಗಲೇ ಒಂದು ಕಡೆ ಬೆಟ್ಟ ಕುಸಿದಿದೆ ಸುತ್ತಮುತ್ತಲು ಬೆಟ್ಟ ಕುಸಿಯುವ ಹಾಗೆ ಮಾಡುತ್ತಾರೆ ಎಂಬ ಆತಂಕವಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಅನುಮತಿ ಇಲ್ಲದೆ ಮನೆ ಕಟ್ಟುವುದು ಒಸಿ ಇಲ್ಲದೆ ಕರೆಂಟ್ ಕೊಡಿಸುವುದು ಹೀಗೆ ಸಾಕಷ್ಟು ಭ್ರಷ್ಟಾಚಾರ ಗಳು ತುಂಬಿ ತುಳುಕಾಡುತ್ತಿವೆ.ಆದ್ದರಿಂದ ಇದಕ್ಕೆ ಅವಕಾಶ ನೀಡದೆ ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಬೇಕೆಂದು ಕನ್ನಡ ಕ್ರಾಂತಿದಳ ಸಂಘಟನೆಯ ಪರವಾಗಿ ತೇಜಸ್ವಿ ಒತ್ತಾಯಿಸಿದ್ದಾರೆ.

ಇಲ್ಲದಿದ್ದರೆ ಮುಂದಿನ ದಿನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರದ ವಿರುದ್ಧ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.

ಚಾಮುಂಡಿ ಬೆಟ್ಟ ಗಾಮ ಪಂಚಾಯಿತಿ ನಗರಪಾಲಿಕೆಗೆ ಸೇರಿಸಿ:ತೇಜಸ್ವಿ ಆಗ್ರಹ Read More

ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು: ಮೈಸೂರು ಜಿಲ್ಲೆ , ಹುಣಸೂರು ತಾಲೂಕು ಬಿಳಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯತ್ ಗ್ರಾಮಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ವತಿಯಿಂದ
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಪಿಜಿ ಆರ್ ಎಸ್ ಎಸ್ ಬಿಳಿಕೆರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಾರಾಯಣ ಆಸ್ಪತ್ರೆ ಮತ್ತು ಅನ್ನಪೂರ್ಣ ಆಸ್ಪತ್ರೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗ್ರಾಮದ 500ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.

ಶಿಬಿರದ ಉದ್ಘಾಟನೆಯನ್ನು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ಹಾಗೂ ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ ಡಿ ಒ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮರತಾಯಮ್ಮ, ಸಹಾಯಕ ನಿರ್ದೇಶಕ ತಾಲೂಕು ಪಂಚಾಯತಿ ಹುಣಸೂರು ರಾಜೇಂದ್ರ ಕೆ ಎಲ್, ಪಿ ಡಿ ಒ ಎನ್ ಮಹಾದೇವಸ್ವಾಮಿ, ಪಿಜಿಆರ್ ಎಸ್ ಎಸ್ ಖಜಾಂಜಿ ಮಂಜುಳಾ ಎಸ್.,ಸಹ ಕಾರ್ಯದರ್ಶಿ ಪಲ್ಲವಿ ಎಚ್, ಸಂಚಾಲಕ ರಕ್ತದಾನಿ ಮಂಜು, ಹರಿಣಿ ಹಾಗೂ ನಾರಾಯಣ ಆಸ್ಪತ್ರೆಯ ವೈದ್ಯರಾದ ಗುಲ್ಜಾರ್, ಆಸ್ಪತ್ರೆ ಸಿಬ್ಬಂದಿ, ಕಣ್ಣಿನ ಆಸ್ಪತ್ರೆಯ ವೈದ್ಯರಾದ ಉದಯ್ ಮತ್ತು ಸಿಬ್ಬಂದಿ, ಬಿಳಿಕೆರೆ ಗ್ರಾಮದ ಹಿರಿಯ ನಾಗರಿಕರು ಮಹಿಳೆಯರು ಯುವಜನತೆ ಭಾಗವಹಿಸಿದ್ದರು.

ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ Read More

ಗ್ರಾಪಂ ಅಮೃತ್ ಯೋಜನೆ:ಭ್ರಷ್ಟಾಚಾರಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ

ಮೈಸೂರು: ಗ್ರಾಮ ಪಂಚಾಯಿತಿ ಅಮೃತ್
ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಪಂ ವ್ಯಾಪ್ತಿಯ ೩೨ ಗ್ರಾಮ ಪಂಚಾಯಿತಿಗಳ ಸಾಮಾಗ್ರಿ ಖರೀದಿಯಲ್ಲಿ
೭.೯೨ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.

ಸರ್ಕಾರ ಕೂಡಲೇ ಆಯಾ ಪಿಡಿಒ ಗಳನ್ನು ಅಮಾನತು ಪಡಿಸಿ ತನಿಖೆಗೆ ಆದೇಶಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಸಿಎಂ ಕಾರಿಗೂ ಘೇರಾವ್ ಮಾಡುವುದಾಗಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಪ್ರತಿಭಟನೆ ವೇಳೆ ಎಚ್ಚರಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ೩೨ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಿಗೆ ನಲಿ-ಕಲಿ ಸಾಮಗ್ರಿ, ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ ಹಾಗೂ ಲ್ಯಾಬ್‌ ಸಾಮಗ್ರಿ, ಡಿಜಿಟಲ್ ಗ್ರಂಥಾಲಯಗಳ ಸಾಮಗ್ರಿ, ಸೋಲಾರ್ ಬೀದಿ ದೀಪ,ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರವು ೭ ಕೋಟಿ ೯೨ ಲಕ್ಷ ರೂ, ಬಿಡುಗಡೆ ಮಾಡಿತ್ತು.ಆದರೆ ಖರೀದಿಯಲ್ಲಿ ಕೆಟಿಪಿಪಿ ನಿಯಮ ಪಾಲಿಸಿಲ್ಲ, ಎಲ್ಲ ಖರೀದಿಯಲ್ಲಿ ಭಾರಿ ಭಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಗ್ರಾಪಂ ಸದಸ್ಯ ಜಲೇಂದ್ರ ಅವರು ಒಂದು ವರ್ಷದ ಹಿಂದೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಯಾವುದೇ ತನಿಖೆಗೆ ಆದೇಶಿಸದೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕಿಡಿ ಕಾರಿದರು.

ಒಂದು ಗ್ರಾಪಂಗೆ ೨೪.೭೫ ಲಕ್ಷದಂತೆ ೩೨ ಗ್ರಾಪಂಗಳಿಗೆ ಒಟ್ಟು ೭ ಕೋಟಿ ೯೨ ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಹಲವು ಗ್ರಾಮ ಪಂಚಾಯಿತಿಗಳು ಒಂದೇ ಏಜೆನ್ಸಿಗೆ ಅನುಕೂಲವಾಗುವಂತೆ ಕೆಟಿಪಿಪಿ ನಿಯಮ ಉಲ್ಲಂಘಿಸಿ ಸಾಮಗ್ರಿ ಖರೀದಿ ಮಾಡಿವೆ.

ಒಂದೇ ಏಜೆನ್ಸಿಯಿಂದ ಒಂದೇ ವಸ್ತುವಿಗೆ ಬೇರೆ ಬೇರೆ ಗ್ರಾಪಂಗಳು ಬೇರೆ ಬೇರೆ ದರದಲ್ಲಿ, ಸಾಮಗ್ರಿ ಖರೀದಿ
ಮಾಡಿದ್ದಾರೆ.ಹೀಗೆ ಹಲವು ಗ್ರಾಪಂಗಳಲ್ಲಿ ಇ-ಟೆಂಡರ್ ನಲ್ಲಿ ಒಂದೇ ಏಜೆನ್ಸಿ ಭಾಗವಹಿಸಿ ಒಂದೇ ರೀತಿಯ ವಸ್ತುವಿಗೆ ಬೇರೆ,
ಬೇರೆ ದರ ನಿಗದಿ ಮಾಡಿ, ಖರೀದಿ ಮಾಡಿರುವ ಭಾರಿ ಅನುಮಾನ ಮೂಡಿದೆ ಎಂದು ದೂರಿದರು.

ಈ ಅಕ್ರಮದಲ್ಲಿ ಭಾಗವಹಿಸಿರುವ ೩೨ ಗ್ರಾಪಂಗಳ ಪಿಡಿಒ ಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆದಿದ್ದರೆ, ಇನ್ನು ಇಡೀ ರಾಜ್ಯದ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ ಶಿವಕುಮಾರ್, ಜಿಲ್ಲಾಧ್ಯಕ್ಷ ಸಂತೋಷ್,
ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ., ಜಿಲ್ಲಾ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ, ಕರುನಾಡು ಲಾರಿ ಚಾಲಕರ
ಪರಿಷತ್ ಅಧ್ಯಕ್ಷರಾದ ಮಹದೇವಸ್ವಾಮಿ, ಹೋರಾಟಗಾರ ಡಿಪಿಕೆ ಪರಮೇಶ್, ದೂರುದಾರ ಜಲೇಂದ್ರ, ಶಿವಕುಮಾರ್ ಸಿಂಧುವಳ್ಳಿ, ಹರೀಶ್, ಕಿರಣ್, ದಿಲೀಪ್,
ಶ್ರೀನಿವಾಸ್, ಮಾಲಿನಿ, ಭಾಗ್ಯ, ಮಹೇಂದ್ರ, ರವಿ ಗೌಡ, ವರಕೋಡು ಕೃಷ್ಣಗೌಡ, ಮನುಗೌಡ, ಅನುರಾಜ್,
ಗೌತಮ್, ಕನ್ನಡಾಂಬೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಪ್ರತಿಭಟನೆ ನಂತರ ‌ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶೀಘ್ರ ತನಿಖೆಗೆ ಆದೇಶ:
ಮೈಸೂರು ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಅಮೃತ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ದೂರು ನೀಡಿದೆ. ಈ ಬಗ್ಗೆ ಅರ್ಜಿ ಪರಿಶೀಲಿಸಿ ಶೀಘ್ರದಲ್ಲೆ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಭರವಸೆ ನೀಡಿದ್ದಾರೆ.

ಗ್ರಾಪಂ ಅಮೃತ್ ಯೋಜನೆ:ಭ್ರಷ್ಟಾಚಾರಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ Read More

ಗುಂಡು ಹಾರಿಸಿ ಬರ್ತಡೆ ಸೆಲೆಬ್ರೇಟ್!ಗ್ರಾಪಂ ಸದಸ್ಯ ಅರೆಸ್ಟ್

ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾರ್ವಜನಿಕವಾಗಿ
ಗಾಳಿಯಲ್ಲಿ ಗುಂಡು ಹಾರಿಸಿ, ಚಾಕು ತೋರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಈಗ ಕಂಬಿ ಎಣಿಸುವಂತಾಗಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಕುಡುಚಿ ಪಟ್ಟಣದ ಗ್ರಾಮೀಣ ಗ್ರಾಮ ಪಂಚಾಯತ್ ಸದಸ್ಯ ಈ ರೀತಿ ಗೂಂಡಾ ವರ್ತನೆ ತೋರಿದ್ದು ಅರೆಸ್ಟ್ ಆಗಿದ್ದಾರೆ.

ಆತ ಆಚರಿಸಿಕೊಂಡ ಹುಟ್ಟುಹಬ್ಬದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಬಾಜಾನ್ ಖಾಲಿಮುಂಡಾಸೈ ಎಂಬಾತ ನಡುರಸ್ತೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದು, ಕೈಯಲ್ಲಿ ಚಾಕು ಹಿಡಿದು ಗೂಂಡಾ ವರ್ತನೆ ತೋರಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿದ್ದಾನೆ.

ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರೂ ಯಾವುದೇ ಭಯವಿಲ್ಲದೇ ಈತ ಹುಚ್ಚಾಟ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತ ಸ್ಥಳೀಯ ಪೊಲೀಸರು ಬಾಬುಜಾನ್ ನನ್ನು ಬಂಧಿಸಿದ್ದಾರೆ,ಕುಡುಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಿಸಿ ಬರ್ತಡೆ ಸೆಲೆಬ್ರೇಟ್!ಗ್ರಾಪಂ ಸದಸ್ಯ ಅರೆಸ್ಟ್ Read More