ರಕ್ತದಾನಿಗಳಿಗೆ ಜೀವಧಾರ ರಕ್ತ ನಿಧಿ ಕೇಂದ್ರದಿಂದ ಸತ್ಕಾರ

ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೀವಧಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದೊಂದಿಗೆ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ
ನವೀನ್, ಕಾಂತಿಲಾಲ್ ಸಂದೇಶ, ಮಂಜುನಾಥ್ ವೈ ಎಸ್, ಯಶ್ವಂತ್, ರಶ್ಮಿ ಶರ್ಮಾ,ಪರಾಶ್ರಮ ಬೋರನ, ರಾಹುಲ್ ಕೊಠಾರಿ,ಮೀನಾಕ್ಷಿ ಕೊಠಾರಿ,ಮನೀಶ್ ಜೈನ್, ವನಿತಾ ಡಕ್, ಮುಕೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ದೇವೇಂದ್ರ ಪರಿಹಾರಿಯ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಿದರು.

ರಕ್ತದಾನದ ಬಗ್ಗೆ ಪರಿಚಯದರಿಗೂ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ರಕ್ತದಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.ಅವಶ್ಯಕವಾದಾಗ ಹುಡುಕುವುದಕ್ಕಿಂತ ಮುಂಚೆಯೇ ಸಾಕಷ್ಟು ರಕ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯು ಹೆಚ್ಚಾಗಿರುವುದರಿಂದ ರಕ್ತದಾನದ ಅವಶ್ಯಕತೆಯಿದೆ. ದಾನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ಸಾಧ್ಯವಾದ ಮಟ್ಟಿಗೆ ನಿಭಾಯಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರಿನ ದೇವೇಂದ್ರ ಪರಿಹಾರಿಯ, ಆನಂದ್ ಮಾಂದೋಟ್, ಮಹಾವೀರ ಜೈನ, ಸಪ್ನ, ಮಮತಾ, ಸದಾಶಿವ್ ಮತ್ತಿತರರು ಹಾಜರಿದ್ದರು.

ರಕ್ತದಾನಿಗಳಿಗೆ ಜೀವಧಾರ ರಕ್ತ ನಿಧಿ ಕೇಂದ್ರದಿಂದ ಸತ್ಕಾರ Read More

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಪ್ರವೃತ್ತಿಯಲ್ಲಿ ಕೃಷಿಕ ಗಿರೀಶ್

ನಂಜನಗೂಡು: ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಆದರೆ‌ ಕೃಷಿಯತ್ತ ಒಲವು ಬೆಳೆಸಿಕೊಂಡು ಯಶಸ್ವಿಯತ್ತ‌ ಸಾಗಿರುವ ಗಿರೀಶ್ ಅವರ ಯಶೋಗಾತೆ ಇದು.

ನಂಜನಗೂಡು ತಾಲೂಕು ಅಂಬಳೆಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್ ಅವರಿಗೆ
ಇತ್ತೀಚೆಗೆ ಕೃಷಿ ಕಡೆ ಒಲವು ಬಂದು ಹಗಿನವಾಳಿನಲ್ಲಿ ನರ್ಸರಿ ಪ್ರಾರಂಭಿಸಿದ್ದಾರೆ.

ಈ ನರ್ಸರಿ ಯಲ್ಲಿ ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ತರಕಾರಿ ಸಸಿಗಳನ್ನು ಬೆಳೆದು ರೈತರಿಗೆ ನೀಡುವ ಉದ್ದೇಶ ಹೊಂದಿದ್ದಾರೆ.

ಇದೀಗ ಅವರು ಬಸವೇಶ್ವರ ನರ್ಸರಿ ಯನ್ನು ಮೂಢನಂಬಿಕೆಯನ್ನು ತೊರೆದು ಹುಣ್ಣಿಮೆಯಂದೆ ಪ್ರಾರಂಭಿಸಿದದು ವಿಶೇಷ.

ಈ ವೇಳೆ ಅಲ್ಲಿ ಸೇರಿದ್ದ ರೈತರು ಬಸವೇಶ್ವರ ನರ್ಸರಿ ಯನ್ನು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಮಾಡುವ ಮೂಲಕ ಅಂಬಳೆ ಗಿರೀಶ್ ಅವರನ್ನು ಅಭಿನಂದಿಸಿದರು.

ಬಸವಾದಿ ಶರಣರ ವಚನ ಪುಸ್ತಕವನ್ನು ನೀಡಿ ಶರಣರ ಕಾಯಕ ನಿಷ್ಠೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಬದುಕಬೇಕು,ವಚನಗಳನ್ನು ಪ್ರತಿದಿನವು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನಂಜನಗೂಡು ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಚೆನ್ನಪ್ಪ, ಬಸವಸೇನೆ ಅದ್ಯಕ್ಷ ಯೋಗಿಶ್ ಮಹೇಶ್, ಮುದ್ದಹಳ್ಳಿ ಅಶೋಕ್ ಮತ್ತು ಅಕ್ಕಪಕ್ಕದ ಹಳ್ಳಿಯ ರೈತರು ಭಾಗವಹಿಸಿದ್ದರು.

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಪ್ರವೃತ್ತಿಯಲ್ಲಿ ಕೃಷಿಕ ಗಿರೀಶ್ Read More

ಗ್ರಂಥಾಲಯ ಉಳಿಸಿ ಬೆಳೆಸಿ ಎಂದಅಪ್ಪಟ ಕನ್ನಡ ಪ್ರೇಮಿ ಸೈಯದ್

ಮೈಸೂರು: ಕರ್ನಾಟಕ ಸೇರಿದಂತೆ ಪ್ರಪಂಚದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿರುವ ಅಪ್ಪಟ ಕನ್ನಡ ಪ್ರೇಮಿ ಮೈಸೂರಿನ ಪ್ರಸಿದ್ಧ ಗ್ರಂಥಾಲಯದ ರೂವಾರಿ ಸೈಯದ್ ಅವರು ತಮ್ಮ ಗ್ರಂಥಾಲಯವನ್ನು ಉಳಿಸಿ ಬೆಳೆಸಬೇಕೆಂದು ಮನವಿ ಮಾಡಿದ್ದಾರೆ.

ರಾಜೀವ್ ನಗರದಲ್ಲಿ ಸೈಯದ್ ಅವರು 14 ವರ್ಷಗಳ ಹಿಂದೆ ಕಷ್ಟ ಪಟ್ಟು ಪ್ರಾರಂಭಿಸಿರುವ ಸಾರ್ವಜನಿಕ‌ ಗ್ರಂಥಾಲಯ ಮುಚ್ಚುವ ಆತಂಕದ ಹಿನ್ನೆಲೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ,
ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಮತ್ತಿತರರು ಗ್ರಂಥಾಲಯಕ್ಕೆ ಭೇಟಿ ನೀಡಿ,ಗ್ರಂಥಾಲಯದ ವಿದ್ಯುತ್ ಬಿಲ್ ಹಾಗೂ ಪತ್ರಿಕೆಗೆ ಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಸೈಯದ್ ಭಾವುಕರಾಗಿ ತಮ್ಮ ಅಳಲು ತೋಡಿಕೊಂಡು ಲೈಬ್ರರಿಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು

ಮೊದಲು ನನಗೆ ಶಕ್ತಿ ಇತ್ತು ದುಡಿದು ಈ ಗ್ರಂಥಾಲಯವನ್ನು ನಡೆಸುತ್ತಾ ಇದ್ದೆ ಈಗ ಒಂದುವರೆ ತಿಂಗಳಿನಿಂದ ನನಗೆ ಆರೋಗ್ಯ ಸರಿ ಇಲ್ಲ ಎರಡು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಲಾಗಿಲ್ಲ ಪ್ರತಿ ತಿಂಗಳು 1,200,1500 ರೂ ಬಿಲ್ ಬರುತ್ತದೆ ಪತ್ರಿಕೆ ಬಿಲ್ ಕಟ್ಟಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ನಾನು ಇದೀನಿ ನಾಳೆ ಹೋಗುತ್ತೇನೆ ಆದರೆ ಈ ಗ್ರಂಥಾಲಯ ಶಾಶ್ವತವಾಗಿ ಉಳಿಯಬೇಕು ಎಂಬುದು ನನ್ನ ಮಹಾದಾಸೆ. ಗ್ರಂಥಾಲಯ ಪ್ರಾರಂಭವಾಗಿ 14 ವರ್ಷ ತುಂಬಿದೆ ಮಕ್ಕಳು ವಿದ್ಯಾರ್ಥಿಗಳು ದೊಡ್ಡವರು ಬಂದು ಇಲ್ಲಿ ಓದುತ್ತಾರೆ ಕೆಲವರು ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುತ್ತಾರೆ ವಾಪಸು ತಂದು ಕೊಡುತ್ತಾರೆ ಕೆಲವರು ತರದಿದ್ದರೆ ನಾನೇ ಅಂತವರ ಮನೆಗೆ ಹೋಗಿ ವಾಪಸು ತರುತ್ತೇನೆ ಎಲ್ಲರಿಂದಲೂ ಆಧಾರ್ ಕಾರ್ಡ್ ತೆಗೆದುಕೊಂಡು ಪುಸ್ತಕ ಕೊಡುತ್ತೇನೆ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಉಳಿಸಬೇಕು ಬೆಳೆಸಬೇಕು ಕನ್ನಡದ ನೆಲದಲ್ಲಿ ನಾವು ಕನ್ನಡ ಭಾಷೆಯನ್ನು ಮರೆತರೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ ಸೈಯದ್.

ಇಲ್ಲಿ 13 ವಾರ್ಡ್ ಗಳಿವೆ ಆದರೆ ಒಂದೂ ಗ್ರಂಥಾಲಯ ಇಲ್ಲ, ನನ್ನ ಗ್ರಂಥಾಲಯ ಸುಟ್ಟು ಹೋದಾಗ ಯಾವುದೇ ಸರ್ಕಾರ ಸಹಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದ ಶಾಸಕ ತನ್ವೀರ್ ಸೇಠ್ ಅವರಿಗೆ ಒಮ್ಮೆ ಗ್ರಂಥಾಲಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೇನೆ ಆದರೆ ಇದುವರೆಗೆ ಬರಲಿಲ್ಲ ಅದೇ ರೀತಿ ಯಾವ ಕಾರ್ಪೊರೇಟರ್ ಕೂಡ ಇಲ್ಲಿಗೆ ಬಂದಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯಕ್ಕೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಯ್ಯದ್ ಹೇಳಿದರು

ಈ ವೇಳೆ ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್ ಅವರು ಗ್ರಂಥಾಲಯಕ್ಕೆ ಪ್ರತಿ ತಿಂಗಳು ಎರಡು ಪತ್ರಿಕೆಯನ್ನು ತಮ್ಮ ಸಂಸ್ಥೆ ವತಿಯಿಂದ ತರಿಸಿಕೊಡುವುದಾಗಿ ಭರವಸೆ ನೀಡಿದರು.

ಗ್ರಂಥಾಲಯ ಉಳಿಸಿ ಬೆಳೆಸಿ ಎಂದಅಪ್ಪಟ ಕನ್ನಡ ಪ್ರೇಮಿ ಸೈಯದ್ Read More