ಅಧಿಕಾರಿಗಳ ನಂಬಿಕೆಗೆ ಚ್ಯುತಿ ಬಾರದ ಹಾಗೆ‌ ಕೆಲಸ ನಿರ್ವಹಿಸಿ-ಶಿವಪ್ರಕಾಶ್

ಕೊಳ್ಳೇಗಾಲ: ನಿಮ್ಮನ್ನು ನಂಬಿ ಅಧಿಕಾರಿಗಳು ಕಡತಗಳಿಗೆ ಸಹಿ ಹಾಕುತ್ತಾರೆ ಅವರ ನಂಬಿಕೆಗೆ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸಿ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಅವರು ಸಿಬ್ಬಂದಿಗೆ ಸಲಹೆ ನೀಡಿದರು.

ಕೊಳ್ಳೇಗಾಲ ಜಿಲ್ಲಾ ಪಂಚಾಯತ್ ತಾಂತ್ರಿಕ ಉಪವಿಭಾಗಾದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿವಹಾರೈಸಿದರು.ವರಿಗೆ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದವರು.

ಪ್ರಾರಂಭದಲ್ಲಿ ಉಪನ್ಯಾಸಕ ನಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಾನು 2003 ರಲ್ಲಿ ಸಹಾಯಕ ಅಭಿಯಂತರನಾಗಿ ಇಂಜಿನಿಯರ್ ವೃತ್ತಿಗೆ ಸೇರಿ ಸಾಕಷ್ಟು ಕಡೆ ಕೆಲಸ ಮಾಡಿ ನಂತರ 2022 ರ ಡಿಸೆಂಬರ್ 16 ರಲ್ಲಿ ಇಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಅಧಿಕಾರ ವಹಿಸಿ ಕೊಂಡೆ ನಂತರ ನಾನು ಇದರ ಜೊತೆಗೆ ಚಾಮರಾಜನಗರ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಹಾಗೂ ಕೊಳ್ಳೇಗಾಲ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಯಾಗಿ ಒಟ್ಟೊಟ್ಟಿಗೆ ಕರ್ತವ್ಯ ನಿರ್ವಹಿಸಸಿದೆ ಎಂದು ಹೇಳಿದರು.

ಅದರಲ್ಲೂ ಕೊಳ್ಳೇಗಾಲ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆ ಯಾಗುತ್ತಿತ್ತು ಎಂದು ಸ್ಮರಿಸಿದರು‌

ಕೊಳ್ಳೇಗಾಲ ತಾಂತ್ರಿಕ ಉಪವಿಭಾಗ ಕೊಳ್ಳೇಗಾಲ ಮತ್ತು ಹನೂರು 2 ತಾಲ್ಲೂಕುಗಳಲ್ಲಿ ಕೆಲಸ ಮಾಡ ಬೇಕಿತ್ತು. ಕೊನೆಯ ದಿನಗಳಲ್ಲಿ ಬೇರೆಕಡೆ ವರ್ಗಾವಣೆ ಮಾಡಿಸಿ ಕೊಳ್ಳಬೇಕೆಂಬ ಮನಸ್ಥಿತಿ ಇತ್ತು. ಆದರೆ ಪರಿಸ್ಥಿತಿ ಬಹಳ ಕಷ್ಟ ಇತ್ತು ಹೇಗೋ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿದ್ದೇನೆ ಎಂದ ಅವರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಸಾರ್ವಜನಿಕರ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಸಿಬ್ಬಂದಿ ವರ್ಗಕ್ಕೆ ಮನವಿ ಮಾಡಿದರು.

ಯಳಂದೂರು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್ ಮಾತನಾಡಿ ನನಗೆ ಎಇಇ ಯಾಗಿ ಬಡ್ತಿ ಹೊಂದುವ ವೇಳೆ ಸಿ ಆರ್ ಸಿ ಬರೆದು ಕೊಡುವಂತೆ ಶಿವಪ್ರಕಾಶ್ ಅವರನ್ನು ಕೇಳಿಕೊಂಡಾಗ ಅವರು ಒಳ್ಳೆಯ ಮನಸ್ಸಿನಿಂದ ಬರೆದು ಕೊಟ್ಟರು, ಇದರಿಂದಾಗಿ ನನಗೆ ಇಂದು ಬಡ್ತಿ ಸಿಕ್ಕಿದೆ ಅವರ ಒಳ್ಳೆಯ ಮನಸ್ಥಿತಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು

ಸಮಾರಂಭದಲ್ಲಿ ನಿವೃತ್ತ ಇಂಜಿನಿಯರ್ ಆನಂದ್ ಮೂರ್ತಿ, ಯಳಂದೂರು ಎಇಇ ಸಂತೋಷ್ ಕುಮಾರ್, ಮಹದೇವ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಗೋಪಾಲ್ ಕೃಷ್ಣ, ಸಿದ್ದಪ್ಪಾಜಿಗೌಡ, ಸಿದ್ದಯ್ಯ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಂಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಅಧಿಕಾರಿಗಳ ನಂಬಿಕೆಗೆ ಚ್ಯುತಿ ಬಾರದ ಹಾಗೆ‌ ಕೆಲಸ ನಿರ್ವಹಿಸಿ-ಶಿವಪ್ರಕಾಶ್ Read More

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ಬೀಳ್ಕೊಡುಗೆ

ಮೈಸೂರು: ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಬಿ. ಚಂದ್ರಶೇಖರ್ ಅವರಿಗೆ
ವಯೋನಿವೃತ್ತಿ ಬೀಳ್ಕೊಡುಗೆಯನ್ನು ಹೃದಯಸ್ಪರ್ಶಿ ಯಾಗಿ ನೆರವೇರಿಸಲಾಯಿತು

ಈ ಬೀಳ್ಕೊಡುಗೆ ಸಮಾರಂಭವನ್ನು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಹೆಚ್ಚು ಗಮನ ಹರಿಸಲು ಅಧ್ಯಾಪಕರಿಗೆ ಕರೆ ನೀಡಿದರು.

ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಾಗಿ ಆದ ಬದಲಾವಣೆ ಯುವ ಜನರಲ್ಲಿ ಪಲ್ಲಟ ಉಂಟು ಮಾಡಿದೆ. ಹಾಗಾಗಿ ಶಿಸ್ತು, ಕಡ್ಡಾಯ ಹಾಜರಾತಿ ಮತ್ತು ಮೌಲಿಕ ಶಿಕ್ಷಣ ಹಾಗೂ ಸಂಬಂಧಿತ ವಿಷಯಗಳ ಕುರಿತು ಅರಿವು ಮೂಡಿಸುವಂತೆ ಅಧ್ಯಾಪಕರಿಗೆ ಸಲಹೆ ನೀಡಿದರು.

ಬೀಳ್ಕೊಡುಗೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ. ಚಂದ್ರಶೇಖರ್ ಅವರು, ಸರ್ಕಾರದ ಅನುಮತಿ ಮತ್ತು ಸವಲತ್ತು ಪಡೆಯಲು ಕಾಯದೆ, ಸ್ಥಳೀಯ ಜನರು, ಜನ ಪ್ರತಿನಿಧಿಗಳು, ಸಂಸ್ಥೆ ಹಾಗೂ ಇತರ ಲಭ್ಯ ಸಹಕಾರ ಪಡೆದು ವಿದ್ಯಾರ್ಥಿ ಸ್ನೇಹಿ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ತಮ್ಮ ಸೇವಾವಧಿ ಅನುಭವ ಹಂಚಿಕೊಂಡ ಚಂದ್ರಶೇಖರ್ ಅವರು, ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರೊ.ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಪುಟ್ಟರಾಜು,ಪತ್ರಾಂಕಿತ ವ್ಯವಸ್ಥಾಪಕ ಅರವಿಂದ ಎಂ. ಪಿ., ಪ್ರೊ.ಅಬ್ದುಲ್ ರಹಿಮಾನ್ ಎಂ ಮಾತನಾಡಿದರು.

ಲತಾ ಚಂದ್ರಶೇಖರ್, ಸಹಾಯಕ ಜಂಟಿ ನಿರ್ದೇಶಕರಾದ ಎ.ಬಿ
ನಾಗೇಂದ್ರ ಪ್ರಸಾದ್, ನಾಗರತ್ನಮ್ಮ, ಲೆಕ್ಕಾಧಿಕಾರಿ ರಮೇಶ್, ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಧ್ಯಾಪಕರು, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ಬೀಳ್ಕೊಡುಗೆ Read More

ನಿವೃತ್ತರಾದ ವಾಣಿಜ್ಯ ತೆರಿಗೆ ಅಧಿಕಾರಿ ಬಿ ಕೆ ರಮೇಶ್ ಅವರಿಗೆ ಬೀಳ್ಕೊಡುಗೆ

ಮೈಸೂರು: ನಾರಾಯಣ ಶಾಸ್ತಿ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ
ಕಳೆದ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ವಾಣಿಜ್ಯ ತೆರೆಗೆ ಅಧಿಕಾರಿ (ಜಾರಿ) ಬಿ ಕೆ ರಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಿ ಕೆ ರಮೇಶ್ ಅವರ ಕಾರ್ಯತತ್ಪರತೆ, ಶಿಸ್ತು, ಸಾಮಾಜಿಕ ಬದ್ಧತೆಯಿಂದ ಕೂಡಿದ್ದು, ಇಂದಿನ ಅಧಿಕಾರಿ, ನೌಕರರಿಗೆ ಆದರ್ಶವಾಗಿದೆ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ಮೈಸೂರು ವಿಭಾಗದ ಮುಖ್ಯಸ್ಥರಾದ ತೇಜಸ್ವಿನಿ ತಿಳಿಸಿದರು.

ಈ ವೇಳೆ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ಮೈಸೂರು ವಿಭಾಗದ ಉಪ ಆಯುಕ್ತರಾದ ಶಿವಣ್ಣ, ಹಾಗೂ ಹಸೀಬುಲ್ಲಾ ಬೇಗ್ ಆ‌ರ್ ಮತ್ತು ಅಧಿಕಾರಿಗಳು, ಸಿಬ್ಬಂದಿ ಜತೆಗೆ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಟ್ಟಿ ಹುಂಡಿ ಸುನಿಲ್, ರವಿಚಂದ್ರ, ನಂಜುಂಡಿ, ಅಮಿತ್, ಮಹಾನ್ ಶ್ರೇಯಸ್, ನಂದೀಶ್ ನಾಯಕ್ ಮತ್ತಿತರರು ಹಾಜರಿದ್ದರು.

ನಿವೃತ್ತರಾದ ವಾಣಿಜ್ಯ ತೆರಿಗೆ ಅಧಿಕಾರಿ ಬಿ ಕೆ ರಮೇಶ್ ಅವರಿಗೆ ಬೀಳ್ಕೊಡುಗೆ Read More