ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್

ಮೈಸೂರು: ಧರ್ಮಸ್ಥಳದ ಬಗ್ಗೆಯಾಗಲಿ, ಶ್ರೀ ಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ ಎಂಬುದನ್ನ ಮೊದಲು ತಿಳಿದುಕೊಳ್ಳಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆಮ

ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ನೀವು ಎಂದು ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಮತ್ತು ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಧರ್ಮಸ್ಥಳದ ಬಗ್ಗೆಯಾಗಲಿ, ಧರ್ಮಸ್ಥಳದ ಶ್ರೀಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ. ಅನಾಮಿಕನ ದೂರು ಹಾಗೂ ಕರ್ನಾಟಕದ ಮಹಿಳಾ ಆಯೋಗದ ದೂರಿನ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸರ್ಕಾರವು ಎಸ್‌ಐಟಿ ರಚಿಸಿದೆ. ಎಸ್ಐಟಿ ತನ್ನ ಕೆಲಸ ಮಾಡುತ್ತಿದೆ. ಇದರಲ್ಲಿ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷವಾಗಲಿ, ಹಿಂದೂ ಧರ್ಮದ ಅವಹೇಳನವಾಗಲಿ ಇಲ್ಲ. ಎಸ್.ಐ.ಟಿ. ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳೇ ಸ್ವಾಗತಿಸಿದ್ದಾರೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಈವರೆಗೆ ಯಾರೊಬ್ಬರೂ ಸಹ ಹಿಂದೂ-ಮುಸ್ಲಿಂ ಎಂಬ ವಿಚಾರವನ್ನ ಈ ಪ್ರಕರಣದಲ್ಲಿ ತಂದಿಲ್ಲ. ಆದರೆ ಬಿಜೆಪಿಯವರು ಹಾಗೂ ಬಿಜೆಪಿ ಪಟಾಲಂ ಇದರಲ್ಲಿ ಧರ್ಮವನ್ನು ಎಳೆದು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಯೂಟ್ಯೂಬರ್ಸ್‌ಗಳಾಗಲಿ, ಮಾಧ್ಯಮಗಳಾಗಲಿ ಸುಳ್ಳು ಸುದ್ದಿಗಳನ್ನ ಬಿತ್ತರಿಸಿದ್ದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಬೇಕಿದ್ದರೆ ನೀವೂ ದೂರು ಕೊಡಿ. ಅದನ್ನ ಬಿಟ್ಟು  ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಏಕೆ ಮಾಡುತ್ತೀರಿ ಸದಾ ಹಿಂದೂ-ಮುಸ್ಲಿಮರ ನಡುವೆ ಕೋಮುದ್ವೇಷ ಹರಡುವುದೇ ನಿಮ್ಮ ಕೆಲಸವೆ ಎಂದು ಸುಬ್ರಮಣ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂಬುದರ ಬಗ್ಗೆ ರಾಹುಲ್‌ ಗಾಂಧಿ ಅವರು ದಾಖಲೆ ಸಮೇತ ವಿವರಣೆಗಳನ್ನ ನೀಡಿದ್ದಾರೆ. 6 ತಿಂಗಳ ಕಾಲ ಸಂಶೋಧನೆ ಮಾಡಿ ದಾಖಲೆ ಸಮೇತ ಮಾತನಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ನಡೆದಿಲ್ಲವೆ ಅಂತ ಕೈ ತೋರಿಸುತ್ತಿದ್ದೀರೆಯೇ ಹೊರತು, ಅದು ಸುಳ್ಳು ಎಂದು ಹೇಳುವ ಧೈರ್ಯ ನಿಮ್ಮಲ್ಲಿ ಯಾರೊಬ್ಬರಿಗೂ ಇಲ್ಲ ಎಂದು ಕುಟುಕಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ವೇಳೆ ಪೀಟರ್‌ ಚುನಾವಣಾಧಿಕಾರಿಯಾಗಿ ಬಂದು ಪಾರದರ್ಶಕತೆಯಿಂದ ಚುನಾವಣೆ ನಡೆಸಿದ್ದಾರೆ ಇದು ನೆನಪಿಲ್ಲವೆ, ರಾಹುಲ್‌ಗಾಂಧಿ ಅವರು ಸತ್ಯ ಹೇಳಿದ್ದಾರೋ, ಸುಳ್ಳು ಹೇಳಿದ್ದಾರೋ ಅನ್ನೋದನ್ನ ತಿಳಿಯಲು ಹಾಲಿ ನ್ಯಾಯಾಧೀಶರಿಂದಲೇ ತನಿಖೆಯಾಗಲಿ ಅವರು ಹೇಳಿದ್ದು ಸುಳ್ಳು ಅನ್ನೋದಕ್ಕೆ ನೀವು ದಾಖಲೆ ಕೊಡಿ ಎಂದು ಸುಬ್ರಹ್ಮಣ್ಯ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಬಿಜೆಪಿ ಸಂಸದ ಕೆ. ಸುಧಾಕರ್‌ ಅವರ ಹೆಸರಲ್ಲಿ ಡೆತ್‌ನೋಟ್‌ ಬರೆದಿಟ್ಟು ಡ್ರೈವರ್‌ ಬಾಬು ನೇಣಿಗೆ ಶರಣಾಗಿದ್ದಾರೆ. ಹಾಗಾಗಿ ಸುಧಾಕರ್‌ ವಿರುದ್ಧ ಎಫ್‌ಐಆರ್‌ ಆಗಿದೆ. ಇದಕ್ಕೆ ಬಿಜೆಪಿಯವರು ಏನು ಕ್ರಮ ಕೈಗೊಂಡರು ಎಂದು ಪ್ರಶ್ನಿಸಿರುವ ಅವರು,
ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ಬಿದ್ದಿರೋ ನೊಣಗಳ ಬಗ್ಗೆಯೇ ಇವರಿಗೆ ಚಿಂತೆ, ನೈತಿಕತೆ ಇಲ್ಲದೇ ಸಿದ್ದರಾಮಯ್ಯರ ವಿರುದ್ಧ ಸಾರಾಸಗಟಾಗಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್ Read More

ಕಾಂಗ್ರೆಸ್ ಸೇರಿದ ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ

ಕೋಲ್ಕತ್ತಾ: ನಾಲ್ಕು ವರ್ಷಗಳ ನಂತರ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೊಲ್ಕತ್ತಾದ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬುಧವಾರ ಅಭಿಜಿತ್ ಮುಖರ್ಜಿ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾದರು.
ಇಲ್ಲಿಯವರೆಗೂ ಅವರು ತೃಣಮೂಲ ಕಾಂಗ್ರೆಸ್ ನಲ್ಲಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಉಸ್ತುವಾರಿ ಅಹ್ಮದ್ ಮಿರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಅಭಿಜಿತ್ ಮುಖರ್ಜಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದ ಸದಸ್ಯತ್ವ ನೀಡಲಾಯಿತು.

ರಾಷ್ಟ್ರ ಹಾಗೂ ರಾಜ್ಯ ನಾಯಕರು ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಕಾಂಗ್ರೆಸ್ ಸೇರಿದ್ದೇನೆ. ಕಳೆದ ವರ್ಷ ಜೂನ್ ನಲ್ಲಿಯೇ ಪಕ್ಷ ಸೇರಲು ಬಯಸಿದ್ದೆ. ಆದರೆ, ವಿವಿಧ ರಾಜ್ಯಗಳ ಚುನಾವಣೆಯಿಂದಾಗಿ ಮುಂದೂಡಲ್ಪಟ್ಟಿತ್ತು.

ನನ್ನ ಪಕ್ಷ ಸೇರ್ಪಡೆ ಕಾರ್ಯಕ್ರಮ ಈಗ ನೆರವೇರಿದೆ ಎಂದು ಅಭಿಜಿತ್ ಮುಖರ್ಜಿ
ತಿಳಿಸಿದರು.

ಕಾಂಗ್ರೆಸ್ ಸೇರಿದ ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ Read More