ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ

ನವದೆಹಲಿ: ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಅಮಿತ್ ಶಾ ಹೇಳಿದ್ದಾರೆ.

ದೆಹಲಿಯ ಜನ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದರು.

ಇದು ಮೋದಿ ಗ್ಯಾರಂಟಿ ಗೆಲುವು ಮತ್ತು ಮೋದಿಜಿಯವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ದೆಹಲಿಯ ಜನ ನಂಬಿಕೆ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಈ ಬೃಹತ್ ಜನಾದೇಶಕ್ಕಾಗಿ ದೆಹಲಿ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಮೋದಿಯವರ ನೇತೃತ್ವದಲ್ಲಿ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್-1 ರಾಜಧಾನಿಯನ್ನಾಗಿ ಮಾಡಲು ದೃಢನಿಶ್ಚಯ ಮಾಡಿದೆ ಎಂದು ಅಮಿತ್ ಶಾ ನುಡಿದರು.

ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ Read More

ವಿವಿಧ ಅಭಿವೃಧ್ದಿ ಕಾಮಗಾರಿಗೆ ಶ್ರೀವತ್ಸ ಚಾಲನೆ

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗುರುವಾರ ಬೆಳಗ್ಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ವೀರ ಮಡಿವಾಳ ದೋಭಿ ಘಾಟ್‌ನಲ್ಲಿ ಶಾಸಕರ ಅನುದಾನದಲ್ಲಿ ಮಡಿವಾಳ ಸಮಾಜದ ಅನುಕೂಲಕ್ಕಾಗಿ ಶೆಲ್ಟರ್ ಅಳವಡಿಸಿ ಹೊಸದಾಗಿ ಕಟ್ಟಿಗಳನ್ನು ನಿರ್ಮಿಸಲು ೧೦ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ವಿದ್ಯಾರಣ್ಯಪುರಂನಲ್ಲಿ ೫೦ ಲಕ್ಷ ವೆಚ್ಚದ ೨ ಮತ್ತು ೪ನೇ ರಸ್ತೆಯ ಅಡ್ಡರಸ್ತೆ ಅಭಿವೃದ್ದಿಗೆ ಮತ್ತು ಸುಮಾರು ೧.೫ ಕೋಟಿ ವೆಚ್ಚದ ರಾಮಾನುಜ ೯ನೇ ಮತ್ತು ೧೦ನೇ ಅಡ್ಡರಸ್ತೆ ಹಾಗೂ ಬಿಬಿ ಗಾರ್ಡನ್ ರಸ್ತೆ ಅಭಿವೃದ್ದಿ, ರಾಮಾನುಜ ಮುಖ್ಯರಸ್ತೆ(ಕಂಸಾಳೆ ಮಹದೇವಯ್ಯ ವೃತ್ತದಿಂದ ರಾಮಾನುಜ ೮ನೇ ಅಡ್ಡರಸ್ತೆರವರೆಗೆ)
ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಆನಂತರ ನಂ ೫೨ರ ವ್ಯಾಪ್ತಿಯಲ್ಲಿ ೨.೧೦ ಲಕ್ಷ ವೆಚ್ಚದ ವಸಂತ್ ಮಹಲ್ ಆವರಣದಲ್ಲಿರುವ ಡಯಟ್ ಸಂಸ್ಥೆಗೆ ಹಾಲಿ ಇರುವ ಮೇಲ್ಪಟ್ಟ ಜಲ ಸಂಗ್ರಹಗಾರದಿಂದ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಮತ್ತು ವಾರ್ಡ್ ನಂ.೫೦ರ ವ್ಯಾಪ್ತಿಯಲ್ಲಿ ೧೮.೧೦ ಲಕ್ಷ ವೆಚ್ಚದ ಸುಣ್ಣದಕೇರಿ ೮ನೇ ಕ್ರಾಸ್ ನಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಸತಿ ಗೃಹ ಸಂ.೨,೩,೪೩,೪೪,೪೫ ಹಾಗೂ ವಾರ್ಡ್ ನಂ ೪೯ರ ವ್ಯಾಪ್ತಿಯ ಬಸವೇಶ್ವರ ೩ನೇ ಅಡ್ಡರಸ್ತೆಯಲ್ಲಿ ವಸತಿ ಗೃಹ ಸಂ.೨೧೩೨ರ ದುರಸ್ಥಿ ಕಾಮಗಾರಿಗಳಿಗೆ ಶ್ರೀವತ್ಸ ಚಾಲನೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾದೇವಿ ಬಿ.ವಿ.ಮಂಜುನಾಥ್,
ಜಗದೀಶ್ ವಾರ್ಡ್ ಅಧ್ಯಕ್ಷರಾದ ಹೊಯ್ಸಳ, ಆಟೋ ಮಂಜು, ಶಿವಪ್ರಸಾದ್, ಮಂಜುನಾಥ್ ಹಾಗೂ ವಾರ್ಡಿನ ಪ್ರಮುಖರಾದ ಎನ್. ಪ್ರದೀಪ್ ಕುಮಾರ್ ಬಾಲಕೃಷ್ಣ,ನಿಶಾಂತ್,ಕಿಶೋರ್, ಗೋಕುಲ್ ಗೋವರ್ಧನ್, ಪ್ರಸನ್ನ, ಚಂದ್ರಶೇಖರ್, ಕಿಶೋರ್ ಜೈನ್,ನಂದೀಶ, ಜೋಗಪ್ಪ, ಕೃಷ್ಣನಾಯಕ, ಅನಿಲ್ ಮತ್ತಿತರರು ಹಾಜರಿದ್ದರು.

ವಿವಿಧ ಅಭಿವೃಧ್ದಿ ಕಾಮಗಾರಿಗೆ ಶ್ರೀವತ್ಸ ಚಾಲನೆ Read More

ರಾಜ್ಯದ ಜಿಡಿಪಿ ನಂಬರ್ ಒನ್ :ಸಿದ್ದರಾಮಯ್ಯ

ತುಮಕೂರು: ನಮ್ಮ ಐದೂ ಗ್ಯಾರಂಟಿಗಳು ಮತ್ತು ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿದ್ದು,ನಾವು ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರದ ನಾನಾ ಯೋಜನೆಗಳ 750 ಕೋಟಿ ರೂಪಾಯಿ ಮೊತ್ತದ 23000 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಮಾತನಾಡಿದರು.

ಇಡೀ ದೇಶದಲ್ಲಿ ರಾಜ್ಯದ ಜಿಡಿಪಿ ನಂಬರ್ ಒನ್ ಆಗಿದೆ. ದೇಶದ ಜಿಡಿಪಿ ಇನ್ನೂ 8 ಇದ್ದರೆ ರಾಜ್ಯದ ಜಿಡಿಪಿ 10 ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದವರ ಒಟ್ಟಾರೆ ಕೊಡುಗೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಬ್ಬರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ನಾವು ಕೊಡುತ್ತಲೇ ಹೋಗುತ್ತೇವೆ. ಜೊತೆಗೆ ಹಿಂದುಳಿದವರ, ದುರ್ಬಲರ ಏಳಿಗೆಗೆ ವಿಶೇಷ ಯೋಜನೆಗಳನ್ನೂ ರೂಪಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಹಳ್ಳಿಗಳು, ತಾಲ್ಲೂಕುಗಳು, ಜಿಲ್ಲೆಗಳ ಅಭಿವೃದ್ಧಿಯಿಂದ ಮಾತ್ರ ರಾಜ್ಯದ, ದೇಶದ ಅಭಿವೃದ್ಧಿ ಸಾಧ್ಯ.ಅದೇ ರೀತಿ
ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಜಿಡಿಪಿ ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು.

ಹೀಗಾಗಿ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರನ್ನೂ ಒಳಗೊಳ್ಳುವಂತೆ ರೂಪಿಸುತ್ತೇವೆ. ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿದ್ದಾಗಿದೆ. ಈ ರೀತಿ ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎನ್.ರಾಜಣ್ಣ, ಬೈರತಿ ಸುರೇಶ್, ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಜಿಡಿಪಿ ನಂಬರ್ ಒನ್ :ಸಿದ್ದರಾಮಯ್ಯ Read More