ಆಡುಮುಟ್ಟದ ಸೊಪ್ಪಿಲ್ಲ ಡಾ. ರಾಜಕುಮಾರ್ ಮಾಡದ ಪಾತ್ರವಿಲ್ಲಕನ್ನಡದ ಅಸ್ಮಿತೆ ರಾಜಣ್ಣ: ಅಯೂಬ್ ಖಾನ್

ಮೈಸೂರು: ಆಡುಮುಟ್ಟದ ಸೊಪ್ಪಿಲ್ಲ ಡಾ. ರಾಜಕುಮಾರ್ ಅವರು ಮಾಡದ ಪಾತ್ರವಿಲ್ಲ
ಕನ್ನಡದ ಅಸ್ಮಿತೆ ರಾಜಣ್ಣ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಬಣ್ಣಿಸಿದರು‌

ಕನ್ನಡಚಿತ್ರರಂಗದ ನಟಸಾರ್ವಭೌಮ ವರನಟ ಡಾ. ರಾಜಕುಮಾರ್ ಅವರ 96ನೇ ಜಯಂತಿಯನ್ನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಆಚರಿಸಿದ ವೇಳೆ
ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಅಯೂಬ್ ಖಾನ್ ಅವರು ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗಡಿನಾಡಿನ ಚಾಮರಾಜನಗರ ಗಾಜನೂರಿನ ಗ್ರಾಮಂತರ ಪ್ರದೇಶದಲ್ಲಿ ಕಲಾವಿದರ ಕುಟುಂಬದಿಂದ ಬಂದ ರಾಜಕುಮಾರ್ ಅವರಿಗೆ ಕಲೆ, ನಟನೆ ಕನ್ನಡ ಭಾಷೆಯ ಅಭಿಮಾನ ಶ್ರದ್ಧೆ, ಆಸಕ್ತಿ, ಅಚಲವಾದ ಗುರಿ ಸಾಧಿಸುವ ಚಲವಿತ್ತು ಎಂದು ಸ್ಮರಿಸಿದರು‌

ನಾಟಕ, ಪೌರಾಣಿಕ, ಸಮಾಜಿಕ ಚಿತ್ರದವರೆಗೂ ನಟಿಸಿ ಇಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನ ಡಾ.ರಾಜ್ ಸಾರಿದ್ದಾರೆ, ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಮಾಡದ ಪಾತ್ರವಿಲ್ಲ, ಸೈನಿಕ, ರೈತ, ವೈದ್ಯ, ಪ್ರಾಧ್ಯಾಪಕ, ಅಧಿಕಾರಿ, ಕಾರ್ಮಿಕ, ಆರಕ್ಷಕ, ಅರಸ ಹೀಗೆ ನೂರಾರು ಪಾತ್ರಗಳನ್ನ ನಿರ್ವಹಿಸಿದ್ದಾರೆ ಕೊಂಡಾಡಿದರು.

ಕನ್ನಡ ನಾಡು, ನುಡಿ, ಜಲ ವಿಚಾರಕ್ಕೆ ಧಕ್ಕೆ ಬಂದಾಗ ನ್ಯಾಯಕ್ಕಾಗಿ ಹೋರಾಟದ ಧ್ವನಿ ಎತ್ತುತ್ತಿದ್ದವರು ಕನ್ನಡದ ಅಸ್ಮಿತೆ ಡಾ. ರಾಜಣ್ಣ ಎಂದು ಅಯೂಬ್ ಖಾನ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಡಾ. ರಾಜಕುಮಾರ್ ಅವರಿಗೂ ಅವಿನಾಭಾವ ಭಾಂದವ್ಯವಿತ್ತು,ಭೇಟಿ ಮಾಡಿದಾಗಲೆಲ್ಲ ನಮ್ ಕಾಡ್ನವರು ಅಂತಿದ್ದರು ಅದಕ್ಕಾಗಿಯೇ ಚಾಮರಾಜನಗರ ಸುತ್ತಮುತ್ತಲು ಶಾಶ್ವತ ಅಭಿವೃದ್ಧಿ ಕಾರ್ಯಕ್ಕಾಗಿ ರಾಜಣ್ಣ ಅವರ ಹಟ್ಟುಹಬ್ಬದಂದೇ ವಿಶೇಷವಾಗಿ ಮಹದೇಶ್ವರ ಬೆಟ್ಟದಲ್ಲಿ ಮಂತ್ರಿಮಂಡಲ ಸಂಪುಟ ಸಭೆ ಆಯೋಜಿಸಿದ್ದಾರೆ ಎಂದು ಶ್ಲಾಘಿಸಿದರು ‌

ನನಗೂ ಸಹ ಮೈಸೂರಿನ ಮೇಯರ್ ಆಗಲು ಡಾ. ರಾಜಕುಮಾರ್ ಅವರು ಅಭಿನಯಿಸಿರುವ ಮೇಯರ್ ಮುತ್ತಣ್ಣ ಚಿತ್ರ ಪ್ರೇರೇಪಿಸಿತು ಎಂದು ಖಾನ್ ಈ ವೇಳೆ ನೆನಪು ಮಾಡಿಕೊಂಡರು.

ಮುಂದಿನ ದಿನದಲ್ಲಿ ಬೇಸಿಗೆ ವಸ್ತುಪ್ರದರ್ಶನದಲ್ಲಿ ಡಾ. ರಾಜಣ್ಣ ಅವರ ಅಭಿನಯದ ಚಿತ್ರಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಯೂಬ್ ಖಾನ್ ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಿಇಒ ಕೆ.ರುದ್ರೇಶ್, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಲ್ಲಿಕ್, ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಕೆಪಿಸಿಸಿ‌ ಸದಸ್ಯ ರಾಕೇಶ್,ಒಂಟಿಕೊಪ್ಪಲು ಗುರುರಾಜ್, ಆಪ್ತಸಹಾಯಕ ನಾಗೇಶ್, ಪಾಂಡು, ಪ್ರಾಧಿಕಾರದ ಸಿಬ್ಬಂದಿ ವರ್ಗ ಹಾಜರಿದ್ದರು.

ಆಡುಮುಟ್ಟದ ಸೊಪ್ಪಿಲ್ಲ ಡಾ. ರಾಜಕುಮಾರ್ ಮಾಡದ ಪಾತ್ರವಿಲ್ಲಕನ್ನಡದ ಅಸ್ಮಿತೆ ರಾಜಣ್ಣ: ಅಯೂಬ್ ಖಾನ್ Read More

ಅರ್ಜುನ ಗುರೂಜಿ ನೇತೃತ್ವದಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಧಾತ್ರಿ ಹವನ,ವನಭೋಜನ

ಮೈಸೂರು: ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಶ್ರೀ ಸಾಂಬಸದಾಶಿವ ಮತ್ತು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಧಾತ್ರಿ ಹವನ ಹಮ್ಮಿಕೊಳ್ಳಲಾಯಿತು.

ಅವಧೂತ ಅರ್ಜುನ ಮಹಾರಾಜ್ ಅವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಭಕ್ತ ಮಂಡಳಿ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ವೇದಬಳಗ ಪುರೋಹಿತರಿಂದ ಧಾತ್ರಿಹವನ ಹೋಮ ಪೂರ್ಣಹುತಿ ನಡೆಯಿತು.

ನಂತರ ಭಕ್ತರಿಗೆ ವನಭೋಜನ ಏರ್ಪಡಿಸಿ ಅನ್ನಸಂತರ್ಪಣೆ ಮಾಡಲಾಯಿತು.ಸ್ವತಃ ಅರ್ಜುನ ಗುರುಜಿ ಅವರೇ ಭೋಜನ ಬಡಿಸಿದರು.

ಈ ವೇಳೆ ಅವಧೂತ ಅರ್ಜುನ ಗುರೂಜಿ ರವರು ಮಾತನಾಡಿ ಕಾರ್ತಿಕ ಮಾಸದಲ್ಲಿ ಧಾತ್ರಿ ಹವನ ಮಾಡಿ ಅನ್ನಸಂತರ್ಪಣೆ ಮಾಡಿದರೆ ಮನುಷ್ಯನಿಗೆ ಶ್ರೇಯಸ್ಸು ಆರೋಗ್ಯ ದೊರೆಯುತ್ತದೆ ಎಂದು ತಿಳಿಸಿದರು.

ಬೆಳಗಿನ ಹೊತ್ತು ಪರಿಸರದಲ್ಲಿ ಧ್ಯಾನ, ನಿರ್ದಿಷ್ಟ ಉಪವಾಸ, ಆಯುರ್ವೇದ ಆಹಾರ ಪದ್ದತಿಗಳು, ವೈಜ್ಞಾನಿಕವಾಗಿ ಆಧ್ಯಾತ್ಮಿಕವಾಗಿ ಸಾಧನೆಯತ್ತ ಸಾಗಲು ಸಹಕಾರಿಯಾಗುತ್ತದೆ, ಈ ದೇವಸ್ಥಾನದಲ್ಲಿ ಸರ್ವಧರ್ಮಿಯರು ಸರ್ವಜನಾಂಗದವರು ಸೇವೆ ಸಲ್ಲಿಸುತ್ತಿರುವುದು ಸಾಮರಸ್ಯ ಸೋದರತ್ವ ಸಮಾನತೆ ಸಂದೇಶ ಸಮಾಜಕ್ಕೆ ಸಾರುತ್ತಿದೆ ಎಂದು ಹೇಳಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ರವರು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಸ್ತುಪ್ರದರ್ಶನದಲ್ಲಿರುವ ಪುರಾತನ ದೇವಾಲಯ ಶ್ರೀ ಸಾಂಬಸದಾಶಿವ ವೀರಾಂಜನೇಯ ಸ್ವಾಮಿ ದೇವಾಲಯವನ್ನ ಭಕ್ತಮಂಡಳಿಯವರ ಮನವಿಯಂತೆ ವೈಜ್ಞಾನಿಕವಾಗಿ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ಬಡವರ್ಗದ ಜನರಿಗೆ ಅನುಕೂಲವಾಗುವಂತೆ ಮದುವೆ, ನಾಮಕರಣ ಮತ್ತಿತರ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ರಂಗಸ್ವಾಮಿ ಪಾಪು, ಮಲ್ಲಿಕಾರ್ಜುನ ಜಿಪಿಎ, ಜಡೆಯಪ್ಪ, ಗುರುರಾಜ್, ಗುತ್ತಿಗೆದಾರ ಮಂಜು ಗೌಡ, ಎಡ್ವಿನ್, ಸರ್ದಾರ್ ಶರೀಫ್, ಸಾಗರ್ ಗೌಡ, ಸುಬ್ಬಣ್ಣ, ಸಂಪತಣ್ಣ, ನಾತೀಕ್, ನಿರೂಪಕ ಅಜಯ್ ಶಾಸ್ತ್ರಿ, ಶ್ರೀನಿವಾಸ್ ಬಿ, ರಾಜೇಶ್ ಸಿ ಗೌಡ, ಪದ್ಮನಾಭ್ ಗುಂಡಾ, ರಘುರಾಜೇ ಅರಸ್, ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಯುವಭಾರತ್ ಸಂಚಾಲಕರಾದ ಜೋಗಿ ಮಂಜು, ರಿಷಿ ವಿಶ್ವಕರ್ಮ,ವಿನಯ್ ಕಣಗಾಲ್, ಕಡಕೊಳ ಜಗದೀಶ್ ವಿಜಯಕುಮಾರ್, ವಿಘ್ನೇಶ್ವರ ಭಟ್, ನವೀನ್ ಕೆಂಪಿ, ರಂಗನಾಥ್, ಗಣೇಶ್ ಲಿಡ್ಕರ್, ರಾಕೇಶ್, ಶ್ರೀಕಾಂತ್ ಕಶ್ಯಪ್, ಚಕ್ರಪಾಣಿ, ಮಹೇಂದ್ರ ಕಾಗಿನೆಲೆ, ಬೋಪಯ್ಯ, ಪ್ರಾಣೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಅರ್ಜುನ ಗುರೂಜಿ ನೇತೃತ್ವದಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಧಾತ್ರಿ ಹವನ,ವನಭೋಜನ Read More