ಡ್ರಗ್ಸ್ ತಯಾರಿಕಾ ಘಟಕ ಪತ್ತೆ;59 ಗೋದಾಮುಗಳಲ್ಲಿ ತಪಾಸಣೆ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಹಿನ್ನಲೆಯಲ್ಲಿ
ಪ್ರಕರಣವನ್ನು ಮೈಸೂರು ಖಾಕಿಪಡೆ ಗಂಭೀರವಾಗಿ ಪರಿಗಣಿಸಿದೆ.

ಹಾಗಾಗಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದಾರೆ,
ಭಾನುವಾರ ಇಡೀ ದಿನ ಮೈಸೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆದಿದೆ.

ನೆನ್ನೆ ರಾತ್ರಿ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆದಿದ್ದು, ದಾಳಿಯಲ್ಲಿ
26 ಜನ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ.ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆಯಲಾಗಿದೆ.

ಮಂಡಿ ಮೊಹಲ್ಲಾ, ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.

ಡಿಸಿಪಿಗಳು ಎಸಿಪಿಗಳು ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,59 ಗೋದಾಮುಗಳಲ್ಲಿ ತಪಾಸಣೆ ಮಾಡಲಾಗಿದೆ.ಜತೆಗೆ
ಹಾಸ್ಟೆಲ್‌ಗಳು ಸೇರಿ ಹಲವು ಕಡೆ ತಪಾಸಣೆ ಮಾಡಿದ್ದಾರೆ.

ಈ ಹಿಂದೆ ಗಾಂಜಾ ಮಾರಾಟ‌ ಮಾಡುತ್ತಿದ್ದ
35 ಜನರ ವಿಚಾರಣೆ ನಡೆಸಲಾಗಿದೆ.
ಸೋಮವಾರ ಕೂಡಾ ಕಾರ್ಯಾಚರಣೆ ಮುಂದುವರಿದಿದೆ.

ಅಮಾನತು: ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 50 ಕ್ಕೂ ಹೆಚ್ಚು ಕೆಜಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್.ಆರ್.ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲಕ್ಷ್ಮಿಕಾಂತ್ ತಳವಾರ್ ಅವರನ್ನ ಅಮಾನತುಪಡಿಸಲಾಗಿದೆ.

ಅಡಳಿತಾತ್ಮಕ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.

ಲಕ್ಷ್ಮಿಕಾಂತ್ ತಳವಾರ್ ಅವರ ಜಾಗಕ್ಕೆ ಸಿಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್ ಅವರನ್ನ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.

ಡ್ರಗ್ಸ್ ತಯಾರಿಕಾ ಘಟಕ ಪತ್ತೆ;59 ಗೋದಾಮುಗಳಲ್ಲಿ ತಪಾಸಣೆ Read More

ಮುಡಾ ಹಿಂದಿನ ಆಯುಕ್ತರ ನಿವಾಸದಲ್ಲಿದ್ದಸಿಸಿ ಕ್ಯಾಮರಾ ನಾಪತ್ತೆ:ಅಧಿಕಾರಿಗಳಿಗೆ ನೋಟಿಸ್

ಮೈಸೂರು: ಮುಡಾ ಹಿಂದಿನ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ ನಾಪತ್ತೆ ಸಂಬಂಧ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಘುನಂದನ್, ಮುಡಾ ಕಟ್ಟಡ ನಿರ್ವಹಣಾ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ,
ಸಿಸಿ ಕ್ಯಾಮರಾ ನಾಪತ್ತೆ ಸಂಬಂಧ ಸಂಪೂರ್ಣ ವಿವರ ಕೇಳಿದ್ದೇನೆ ಎಂದು ಹೇಳಿದರು.

ನಾನು ಜವಾಬ್ದಾರಿ ವಹಿಸಿಕೊಂಡು ಕೆಲವೇ ದಿನಗಳಾಗಿದೆ. ಹಿಂದಿನ ಆಯುಕ್ತರು ಕೂಡ ಕಚೇರಿಯನ್ನ ನಿವಾಸವಾಗಿ ಬಳಕೆ ಮಾಡಿಕೊಂಡಿದ್ದರು. ಹೀಗಾಗಿ ಅಲ್ಲಿ ಯಾರಿದ್ದರು, ಏನೆಲ್ಲಾ ವಸ್ತುಗಳಿದ್ದವು ಇದರ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದು ತಿಳಿಸಿದರು.

ಅಲ್ಲಿ ಸಿಸಿ ಕ್ಯಾಮರಾ ಇದ್ದ ಬಗ್ಗೆ ಇಲ್ಲದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಟ್ಟಡ ನಿರ್ವಹಣಾ ಅಧಿಕಾರಿ ಕೂಡ ಹೊಸಬರು,ಹಾಗಾಗಿ ತಕ್ಷಣದಲ್ಲಿ ಅವರಿಗೂ ಯಾವುದೇ ಮಾಹಿತಿ ಇಲ್ಲ,ಒಂದೆರಡು ದಿನದಲ್ಲಿ ಮಾಹಿತಿ ತರಿಸಿಕೊಡಲು ಹೇಳಿದ್ದೇನೆ ಎಂದು ನೂತನ ಆಯುಕ್ತರು ತಿಳಿಸಿದರು.

ಮುಡಾದಲ್ಲಿ ಎಲ್ಲಾ ಕೆಲಸ ಎಂದಿನಂತೆ ನಡೆಯುತ್ತಿದೆ. ನಿಯಮದ ಪ್ರಕಾರ ಕೆಲಸ ಮಾಡಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಸೂಚನೆಯಂತೆ ಮುಡಾದಲ್ಲಿ ಎಲ್ಲಾ ಕೆಲಸ ನಡೆಯುತ್ತಿದೆ, ಸಾರ್ವಜನಿಕರು ಬಂದು ಮುಡಾದಿಂದ ಆಗಬೇಕಾದ ಕೆಲಸ ಮಾಡಿಸಿಕೊಳ್ಳಬಹುದು ಎಂದು ರಘುನಂದನ್ ಮನವಿ ಮಾಡಿದರು.

ಮುಡಾ ಹಿಂದಿನ ಆಯುಕ್ತರ ನಿವಾಸದಲ್ಲಿದ್ದಸಿಸಿ ಕ್ಯಾಮರಾ ನಾಪತ್ತೆ:ಅಧಿಕಾರಿಗಳಿಗೆ ನೋಟಿಸ್ Read More