ಮೈಸೂರು: ಬೆಂಗಳೂರಿನ ಅರಮನೆ ಆವರಣದಲ್ಲಿ ಇದೇ 18,19 ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾ ಸಮ್ಮೇಳನ ಐತಿಹಾಸಿಕ ಸಮ್ಮೇಳನ ಎಂದು ಬಿ. ಆರ್. ನಟರಾಜ್ ಜೊಯಿಸ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮ್ಮೇಳನ ಸಮಿತಿ ಉಪಾಧ್ಯಕ್ಷರೂ ಆದ ಬಿ. ಆರ್. ನಟರಾಜ್ ಜೋಯಿಸ್ ಮಾತನಾಡಿದರು.
ಇದೊಂದು ಐತಿಹಾಸಿಕ ಸಮ್ಮೇಳನ, ದೇಶದಲ್ಲಿ ಬ್ರಾಹ್ಮಣರ ಪ್ರಾಮುಖ್ಯತೆ ಮತ್ತು ಬ್ರಾಹ್ಮಣರ ಶಕ್ತಿಯ ವಿರಾಟ್ ಸ್ವರೂಪ ಬ್ರಾಹ್ಮಣ ರ ಇತಿಹಾಸದ ಪುಟ ಪುಟದಲ್ಲು ಈ ಸನಾತನ ಧರ್ಮದ ಬ್ರಾಹ್ಮಣ ಬಲಪ್ರದರ್ಶನವಾಗಲಿದೆ, ಬ್ರಾಹ್ಮಣ ಹಗುರನಲ್ಲ ಬ್ರಾಹ್ಮಣ ಬಲಾಡ್ಯ ಎಂಬುದನ್ನು ತೋರಿಸಬೇಕಿದೆ,ಬ್ರಹ್ಮ ಬಲಂ.. ತೇಜೊಬಲಂ ಎಂಬುದನ್ನು ಜಗತ್ತಿಗೆ ತೋರಿಸಲು ಮನೆ ಮಂದಿ ಜ.18.19.ರಂದು ಸಮ್ಮೇಳನ ದಲ್ಲಿ ಬಾಗವಹಿಸಿ ನಮ್ಮಹಿರಿಮೆಯನ್ನು ಅನಾವರಣ ಮಾಡೊಣ ಎಂದು ಜೋಯಿಸ್ ಕರೆ ನೀಡಿದರು.
ಇದೇ ವೇಳೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾ ಸಮ್ಮೇಳನ ವಿಶ್ವಾಮಿತ್ರದ ಪೊಸ್ಟರ್ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿ ಯಲ್ಲಿ ಬ್ರಾಹ್ಮಣ ಹಿರಿಯ ಮುಖಂಡರಾದ ರಘುರಾಂ ವಾಜಪೇಯಿ, ಲತಾಮೋಹನ್, ಶ್ರೀರಂಗಸ್ವಾಮಿ ಉಪಸ್ಥಿತರಿದ್ದರು.
ಮೈಸೂರು: 50ರ ಸುವರ್ಣ ಸಂಭ್ರಮದ ಅಂಗವಾಗಿ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಜನವರಿ 18 ಹಾಗೂ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದರು
ಮೈಸೂರಿನ ಅಗ್ರಹಾರದ ಅಭಿನವ ಶಂಕರಾಲಯದ ಶಂಕರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬ್ರಾಹ್ಮಣ ಮಹಾ ಸಮ್ಮೇಳನದ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಹಾಗೂ ದೇಶದಲ್ಲಿ -ಬ್ರಾಹ್ಮಣರು ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಇತರ ಸಮಾಜಗಳಂತೆ ನಾವು ಸರ್ಕಾರದ ಸೌಲಭ್ಯ ಪಡೆಯಬೇಕು. ಮೊದಲು ನಮ್ಮ ಒಳಪಂಗಡ, ಅಚಾರ -ವಿಚಾರಗಳನ್ನು ಮನೆಯೊಳಗೆ ಸೀಮಿತವಾಗಿಟ್ಟುಕೊಂಡು ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ತೋರಿಸಬೇಕಾದ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಜನವರಿ 18 ರಂದು ಬೆಳಿಗ್ಗೆ 7ಗಂಟೆಗೆ ಸಮ್ಮೇಳನದ ಧ್ವಜಾರೋಹಣ, 8 ಗಂಟೆಗೆ ಲಕ್ಷ ಗಾಯತ್ರಿ ಹೋಮ ಮತ್ತು ಸಮ್ಮೇಳನದ ಉದ್ಘಾಟನೆ ಜರುಗುವುದು.
ಜಗದ್ಗುರು ಶಂಕರಾಚಾರ್ಯ ವಿದುಶೇಖರಭಾರತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ನಿಮಿತ್ತ ಮಹಾಸನ್ನಿದಾಂಗಳವರ ಸೇವೆಯಲ್ಲಿ ತೊಡಗಿದ ಸೇವಾಕರ್ತರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಈ ಎಲ್ಲ ಕಾರ್ಯಕ್ರಮದಲ್ಲಿ ಮಠಾಧೀಶರು, ಸ್ವಾಮೀಜಿಗಳು, ಸಚಿವರು, ಶಾಸಕರು ಹಾಗೂ ವಿಪ್ರ ನೇತಾರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಜ.19ರಂದು ವೇದ ಪಾರಾಯಣ, ಧರ್ಮ ಸಭೆ,ವಿಚಾರಗೋಷ್ಠಿ, ಸಮಾರೋಪ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಮೈಸೂರಿನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು,ಎರಡು ದಿನದ ಈ ಸಮ್ಮೇಳನಕ್ಕೆ ನಗರ ಮತ್ತು ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯಾಧ್ಯಕ್ಷ ಅಸಗೂಡು ಜಯಸಿಂಹ, ಧಾರ್ಮಿಕ ಮುಖಂಡರಾದ ವೇದ ಬ್ರಹ್ಮ ಶ್ರೀ ಭಾನುಪ್ರಕಾಶ್ ಶರ್ಮ, ಮೈಸೂರು ಶಂಕರ ಮಠದ ಆಡಳಿತ ಅಧಿಕಾರಿ ರಾಮಚಂದ್ರರಾವ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಪುಷ್ಪಾ ಅಯ್ಯಂಗಾರ್, ರಾಮಚಂದ್ರ ಭಟ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಸೌಭಾಗ್ಯ ಮೂರ್ತಿ,ಕೆ ಆರ್ ಯೋಗ ನರಸಿಂಹ (ಮುರಳಿ), ಎಂ ಆರ್ ಬಾಲಕೃಷ್ಣ, ಹರೀಶ್,ಕೆ ಎಂ ನಿಶಾಂತ್, ಶೇಷಾದ್ರಿ ಭಟ್, ಡಾ.ಲಕ್ಷ್ಮಿ, ಕಡಕೋಳ ಜಗದೀಶ್,ಮೈ ಕುಮಾರ್, ಸುಚಿಂದ್ರ, ಚಕ್ರಪಾಣಿ, ನಾಗಶ್ರೀ, ರಂಗನಾಥ ಮತ್ತಿತರರು ಹಾಜರಿದ್ದರು.