ಬ್ರಾಹ್ಮಣ ಮಹಾ ಸಮ್ಮೇಳನ ಪರಂಪರೆ, ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪುನರುಜ್ಜೀವನ ಗೊಳಿಸುವ ಅವಕಾಶ ಒದಗಿಸಿದೆ:ರಾಜೀವ್

ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣ ಮಹಾ ಸಮ್ಮೇಳನ ನಮ್ಮ ಪರಂಪರೆ, ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪುನರುಜ್ಜೀವನ ಗೊಳಿಸುವ ಅವಕಾಶವಾಗಿದೆ ಎಂದು ಹೆಚ್.ವಿ. ರಾಜೀವ್
ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50ನೇ ಸುವರ್ಣ ಸಂಭ್ರಮದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಾಮಿತ್ರ ಸಮ್ಮೇಳನ ವಿಜೃಂಭಣೆಯಿಂದ ನಡೆಸುತ್ತಿರುವ ಹಿನ್ನೆಲೆ ಮೈಸೂರಿನಿಂದ ಸಹಸ್ರಾರು ವಿಪ್ರ ಬಂಧುಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ‌ ವೇಳೆ ರಾಜೀವ್ ಮಾತನಾಡಿದರು.

ಬ್ರಾಹ್ಮಣ ಸಮಾಜದ ಒಗ್ಗಟ್ಟಿಗೆ, ಅಭಿವೃದ್ಧಿಗೆ ಮತ್ತು ಯುವಕರಿಗೆ ಹೊಸ ದಾರಿ ತೋರಿಸಲು ಇದು ಮಹತ್ತರ ವೇದಿಕೆಯಾಗಿದೆ, ನಮ್ಮ ಪರಂಪರೆಯ ಗೌರವವನ್ನು ಉಳಿಸಲು ಮತ್ತು ಮುಂದಿನ ತಲೆಮಾರಿನ ಭವಿಷ್ಯವನ್ನು ಕಟ್ಟಲು ನಾವು ಎಲ್ಲರೂ ಒಂದಾಗಬೇಕಾಗಿದೆ,
ಸಮಾಜದ ಏಕತೆ, ಪ್ರಗತಿ ಮತ್ತು ಅಭಿವೃದ್ದಿಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಹೆಚ್.ವಿ.ರಾಜೀವ್ ಒತ್ತಿಹೇಳಿದರು.

ಬ್ರಾಹ್ಮಣ ಮಹಾಸಭೆಯ ನಂ ಶ್ರೀಕಂಠಕುಮಾರ್ ಅವರು ಮಾತನಾಡಿ, ಮೈಸೂರಿನಿಂದ ಈ ಬೃಹತ್ ಕಾರ್ಯಕ್ಕೆ ಯಶಸ್ವಿಯಾಗಿ ಸಂಘಟಿಸಿ, ಸಹಸ್ರಾರು ಜನರನ್ನು ಇಲ್ಲಿ ಸೇರಿಸುವಲ್ಲಿ ಹೆಚ್.ವಿ. ರಾಜೀವ್ ಅವರ ಶ್ರಮ ಅಪ್ರತಿಮವಾಗಿದೆ ಎಂದು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ದಿನೇಶ್, ಶಂಕನಾರಾಯಣ್, ಪ್ರಕಾಶ್ ,ಭಕ್ತ ವತ್ಸಲ, ರಾಜೇಶ್ ಬೋರೆ, ಡಾಕ್ಟರ್ ಲಕ್ಷ್ಮಿ, ಲತಾ ಮೋಹನ್, ಸಂಧ್ಯಾ, ವಿಶ್ವನಾಥ್, ವಾಸುದೇವ ಮೂರ್ತಿ, ಶೇಷಪ್ರಸಾದ್,ಎಸ್ ರಂಗನಾಥ, ಶ್ರೀನಾಥ್, ದತ್ತ, ವನಜ, ಪದ್ಮನಾರಾಯಣ್,ಎಸ್.ದಿನೇಶ್ ಮತ್ತಿತರರು ಹಾಜರಿದ್ದರು.

ಬ್ರಾಹ್ಮಣ ಮಹಾ ಸಮ್ಮೇಳನ ಪರಂಪರೆ, ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪುನರುಜ್ಜೀವನ ಗೊಳಿಸುವ ಅವಕಾಶ ಒದಗಿಸಿದೆ:ರಾಜೀವ್ Read More

ಬ್ರಾಹ್ಮಣ ಮಹಾಸಮ್ಮೇಳನ: ಮೈಸೂರಿನಿಂದ 5000ಕ್ಕೂ ಹೆಚ್ಚು ವಿಪ್ರರು ಭಾಗಿ

ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 18, 19ರಂದು ನಡೆಯಲಿರುವ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಮೈಸೂರು ಜಿಲ್ಲೆಯಿಂದ ಸುಮಾರು 5000 ಮಂದಿಭಾಗವಹಿಸ
ಲಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮಾ. ವಿ ರಾಮ್ ಪ್ರಸಾದ್ ಹೇಳಿದರು.

ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಅರ್ಚಕರು ಹಾಗೂ ಪುರೋಹಿತರಿಗೆ ಸಮಾವೇಶದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬುದ್ದಿವಂತ, ವಿದ್ಯಾವಂತ ಸಮಾಜ ಎಂದು ಗುರುತಿಸಿಕೊಂಡಿದ್ದರೂ ಸಾಕಷ್ಟು ಸಂಕಷ್ಟಗಳು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಸಮರ್ಪಕ ಉದ್ಯೋಗ ಸಿಗುತ್ತಿಲ್ಲ ಹಾಗೂ ಅರ್ಚಕರು, ಅಡುಗೆ ಕೆಲಸ ಮಾಡುವವರ ಸ್ಥಿತಿ ಶೋಚನಿಯವಾಗಿದೆ,ಹಾಗಾಗಿ ಬ್ರಾಹ್ಮಣರು ಸಂಘಟಿತರಾಗಬೇಕು, ನಮ್ಮ ಹಕ್ಕು ಹೋರಾಟಗಳಿಗೆ ನಾವೆಲ್ಲರು ಒಂದೇ ಎಂದು ಮುಂದೆ ಸಾಗಬೇಕು ಆಗ ಮಾತ್ರ ಬ್ರಾಹ್ಮಣ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ರಾಮಪ್ರಸಾದ್ ತಿಳಿಸಿದರು.

ಈ‌ ವೇಳೆ ಯೋಗ ನರಸಿಂಹ (ಮುರಳಿ), ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಮಿರ್ಲೆ ಪನಿಷ್, ಸುಚಿಂದ್ರ, ದೇವಸ್ಥಾನದ ಪ್ರದನ ಅರ್ಚಕರದ ವಿಜಯ ರಾಘವನ್, ರಾಘವ, ಸುಬ್ಬಣ್ಣ, ಸೂರ್ಯನಾರಾಯಣ ಭಟ್, ಕಣ್ಣನ್, ಪ್ರಸನ್ನ, ಆನಂದ್, ಹಾಗೂ ವಿಪ್ರ ಮಹಿಳಾ ಸಂಘಟಕರು ಹಾಜರಿದ್ದರು.

ಬ್ರಾಹ್ಮಣ ಮಹಾಸಮ್ಮೇಳನ: ಮೈಸೂರಿನಿಂದ 5000ಕ್ಕೂ ಹೆಚ್ಚು ವಿಪ್ರರು ಭಾಗಿ Read More