ಸ್ವಾತಂತ್ರ್ಯೋತ್ಸವ, ತಿರಂಗಾ ಯಾತ್ರೆ; ಬೈಕ್ ಜಾಥಾ

ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಿರಂಗಾ ಯಾತ್ರೆಯನ್ನು ಬೈಕ್ ಜಾಥಾ ಮೂಲಕ ಹಮ್ಮಿಕೊಳ್ಳಲಾಯಿತು.

ವಿಜಯನಗರ ಮೂರನೇ ಹಂತದ ಸಂಗಮ ವೃತ್ತದ ಗಡಿಯಾರ ಗೋಪುರ ಮುಂಭಾಗ ಜಾಥಾಗೆ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು ಹಾಗೂ ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ ಚಾಲನೆ ನೀಡಿದರು.

ನಂತರ ತ್ರಿವರ್ಣ ಧ್ವಜಗಳೊಂದಿಗೆ ಬೈಕ್ ಜಾಥಾ ಹೊರಡಿತು,ಬೋಗಾದಿ ಎರಡನೇ ಹಂತ, ಜನತಾ ನಗರ, ಮಾರುತಿ ಟೆಂಟ್, ನ್ಯೂ ಕಾಂತರಾಜ ಅರಸು ರಸ್ತೆ, ಶಾರದಾದೇವಿನಗರ, ರಾಮಕೃಷ್ಣನಗರದ ಮೂಲಕ ಸಾಗಿ ದಟ್ಟಗಳ್ಳಿಯ ನೇತಾಜಿ ವೃತ್ತದಲ್ಲಿ ಸುಭಾಷ್ ಚಂದ್ರ ಬೋಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್, ಹಿರಿಯ ಮುಖಂಡ ಅಂಕಲ್ ಶ್ರೀನಿವಾಸ್, ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಡಿ.ಲೋಹಿತ್, ಮೋರ್ಚಾದ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್ ಉಪಾಧ್ಯಕ್ಷರಾದ ಸಿ. ರಾಘವೇಂದ್ರ, ಸೂರ್ಯ, ಮಧು ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿ ಈರೇಗೌಡ, ಆರ್ ಸೋಮಶೇಖರ್, ಉಪಾಧ್ಯಕ್ಷರಾದ ಹೆಚ್.ಜಿ ರಾಜಮಣಿ, ಶಿವು ಪಟೇಲ್, ಬಿ.ಸಿ ಶಶಿಕಾಂತ್, ನಾಗರಾಜ್ ಜನ್ನು, ಮೋರ್ಚಾಗಳ ನಗರ ಪದಾಧಿಕಾರಿಗಳಾದ ಎಸ್. ತ್ಯಾಗರಾಜ್, ವಿಜಯ ಮಂಜುನಾಥ್, ಕಿರಣ್ ಮಾದೇಗೌಡ, ಎನ್. ಪ್ರತಾಪ್, ಮಂಡಲ ಕಾರ್ಯದರ್ಶಿಗಳಾದ ವಿನುತಾ, ರಾಚಪ್ಪಾಜಿ, ಸೋಮಣ್ಣ, ಮೋರ್ಚಾಗಳ ಮುಖಂಡರಾದ ರಂಗೇಶ್, ಜಿ.ಲಕ್ಷ್ಮಿ, ಚಂದ್ರಶೇಖರಸ್ವಾಮಿ, ರಾಘವೇಂದ್ರ ಪ್ರಸಾದ್, ಟಿ. ರಾಜನಾಯಕ್, ದೇವರಾಜ್, ಮಂಜುಳಾ, ಪುಟ್ಟಮ್ಮಣ್ಣಿ, ರಮಾಬಾಯಿ, ಪ್ರೇಮಾ, ರೇವಣ್ಣಸಿದ್ದಯ್ಯ, ಶೋಭಾ ರವಿಶಂಕರ್, ವಾರ್ಡ್ ಅಧ್ಯಕ್ಷರಾದ ರವಿ ನಾಯಕಂಡ, ಬಸವಣ್ಣ, ಭಾರ್ಗವ್ ಗೌಡ, ಭೈರೇಗೌಡ, ಪ್ರವೀಣ್, ಗೋಪಾಲ್, ಕೃಷ್ಣ ಹೆಗಡೆ ಸೇರಿದಂತೆ ಹಲವಾರು ಮಂದಿ ಭಾಗವಹಿದ್ದರು.

ಸ್ವಾತಂತ್ರ್ಯೋತ್ಸವ, ತಿರಂಗಾ ಯಾತ್ರೆ; ಬೈಕ್ ಜಾಥಾ Read More

ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ:ಬಿ ಎಂ ರಘು

ಮೈಸೂರು: ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ ಎಂದು ಬಿಜೆಪಿ ಮೈಸೂರು ನಗರ(ಜಿಲ್ಲೆ) ಪ್ರಧಾನ ಕಾರ್ಯದರ್ಶಿ ಬಿ ಎಂ ರಘು ತಿಳಿಸಿದರು.

ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ಕುವೆಂಪುನಗರದಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಯುವ ಜನತೆ ಹೆಚ್ಚಾಗಿ ಕುವೆಂಪು ಅವರ ಸಾಹಿತ್ಯವನ್ನು ಓದಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಕವಿತೆಗಳು ಕನ್ನಡಿಗರ ಅಸ್ಮಿತೆ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ, ಕನ್ನಡಿಗರ ಮನದಲ್ಲಿ ಅವರು ಎಂದಿಗೂ ಚಿರಸ್ಥಾಯಿ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಈರೇಗೌಡ, ಉಪಾಧ್ಯಕ್ಷೆ ಹೆಚ್ ಜಿ ರಾಜಮಣಿ, ಮುಖಂಡರಾದ ಈ.ಸಿ. ನಿಂಗರಾಜ ಗೌಡ, ಡಾ. ಭಾನುಪ್ರಕಾಶ್, ಶಿವಕುಮಾರ್, ಮಧು ಸೋಮಶೇಖರ್, ಚಂದನ್ ಗೌಡ, ಸಾಗರ್ ಸಿಂಗ್, ರಾಘವೇಂದ್ರ, ಶ್ರೀನಿವಾಸ್ ಪ್ರಸಾದ್, ಶುಭಶ್ರೀ, ಪುಟ್ಟಮ್ಮಣ್ಣಿ, ದೇವರಾಜ್, ಕಲಾವತಿ, ರಮಾಬಾಯಿ, ರಾಧಾ ಮುತಾಲಿಕ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ:ಬಿ ಎಂ ರಘು Read More