ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ!

ಮೈಸೂರು : ವ್ಯಕ್ತಿಯೊಬ್ಬ ಕೆಲಸ ಬಿಟ್ಟ ನಂತರವೂ ಗ್ರಾಹಕರಿಂದ ಹಣ ಸಂಗ್ರಹಿಸಿ ಬ್ಯಾಂಕ್‌ಗೆ 47,72ಲಕ್ಷ ರೂ. ವಂಚಿಸಿರುವ ಪ್ರಸಂಗ‌ ನಡೆದಿದ್ದು,ಈ ಬಗ್ಗೆ ದೂರು ದಾಖಲಾಗಿದೆ.

ನಂಜನಗೂಡಿನ ನಿವಾಸಿ ಮಹದೇವ ಸ್ವಾಮಿ ಎಂಬಾತ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೆ ವಂಚಿಸಿದ ವ್ಯಕ್ತಿ.

ಮಹದೇವ ಸ್ವಾಮಿ ಈ ಹಿಂದೆ ಇಂಡಸ್ ಬ್ಯಾಂಕ್‌ನ ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದನು.

ಕಳೆದ ಮೇ ತಿಂಗಳಿನಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಬಂದ್ ಆಗಿತ್ತು. ಹಾಗಾಗಿ ಅನುಮಾನಗೊಂಡ ಸಿಬಂದಿ ಮಹದೇವಸ್ವಾಮಿ ಅವರು ಈ ಹಿಂದೆ ವಾಹನಗಳ ಸಾಲಗಳ ವಸೂಲಾತಿ ಮಾಡುತ್ತಿದ್ದವರ ಖಾತೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಂದಿ ಸಾಲದ ಕಂತು ಕಟ್ಟಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೀಗಾಗಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ವೇಳೆ ಆತ ೪೭,೭೨,೮೧೦ ರೂ. ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಪಾವತಿಸಿಲ್ಲದಿರುವುದು ಗೊತ್ತಾಗಿದೆ,ಈಗ ಆತನ ವಿರುದ್ಧ ಬ್ಯಾಂಕ್‌ನ ಅಧಿಕಾರಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ! Read More

ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ: ಪ್ರಕರಣ ದಾಖಲು

ಮೈಸೂರು,ಫೆ.2: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ ಎಸಗಿದ ಆರೋಪದ ಮೇಲೆ ನಾಲ್ವರು ಮಧ್ಯವರ್ತಿಗಳು ಸೇರಿ ಹಲವರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯವರ್ತಿಗಳಾದ ಸುಶೀಲ್ ಕುಮಾರ್,ವರದರಾಜನ್,ಪುಟ್ಟಸ್ವಾಮಿ ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕರಾದ ಏಕಾಂತ್ ಪ್ರಕರಣ ದಾಖಲಿಸಿದ್ದಾರೆ.

ಗೀತಾ ಎಂಬುವರು ಜಯಲಕ್ಷ್ಮಿಪುರಂ ಸ್ವತ್ತು ನಂ 23 ಮೇಲೆ ಲ್ಯಾಂಡ್ ಲೋನ್ ಅಪೇಕ್ಷಿಸಿ 1-07-2021 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್ ಸಿಬ್ಬಂದಿಗಳು ವಕೀಲರ ಬಳಿ ಲೀಗಲ್ ಸಲಹೆ ಪಡೆದು ವಾಲ್ಯುಏಷನ್ ರಿಪೋರ್ಟ್ ಆಧಾರದ ಮೇಲೆ 1,65,00,000 ರೂ ಸಾಲ ನೀಡಿದ್ದಾರೆ.

ಮೈಸೂರು ದಕ್ಷಿಣ ಉಪನೊಂದಣಾಧಿಕಾರಿ ಕಚೇರಿಯಲ್ಲಿ 1 ನೇ ಪುಸ್ತಕ ನಂ1 Mys-1-01451-2021-22 ರಲ್ಲಿ ನೊಂದಣಿ ಆಗಿದೆ.ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಅವರು ಸ್ವತ್ತಿನ ಮಾರಾಟಗಾರರಾದ ಪುಟ್ಟರಾಜು ಅವರಿಗೆ ಚೆಕ್ ನೀಡಿ ದಾಖಲೆಗಳನ್ನ ಪಡೆದಿದ್ದಾರೆ.

ಆಗಸ್ಟ್ 23 ರ ವರೆಗೆ ಗೀತಾ ಅವರು ಸಾಲದ ಕಂತು ಕಟ್ಟಿ ನಂತರ‌ ಸ್ಥಗಿತಗೊಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಸುವಂತೆ ತಿಳಿಸಿದಾಗ ತಾವು ಮೋಸ ಹೋಗಿರುವುದಾಗಿ ಗೀತಾ ತಿಳಿಸಿದ್ದಾರೆ.

ಬ್ಯಾಂಕ್ ನವರು ಪರಿಶೀಲನೆ ಮಾಡಿದಾಗ ನೊಂದಣಿ ಆದ ದಾಖಲೆಯಲ್ಲಿ ಸದರಿ ಪುಸ್ತಕದಲ್ಲಿ ಶ್ವೇತಾ ಮೋಹನ್ ಕುಟ್ಟಂಡ ಹೆಸರಿನಲ್ಲಿ ಸ್ವತ್ತು ನೊಂದಣಿ ಆಗಿರುವುದು ಕಂಡುಬಂದಿದೆ.

ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಧ್ಯವರ್ತಿಗಳಾದ ಸುಶೀಲ್ ಕುಮಾರ್ ನಕಲಿ ದಾಖಲೆಗಳನ್ನ ಸೃಷ್ಟಿಸಿ ಯಾಮಾರಿಸಿರುವುದು ಗೊತ್ತಾಗಿದೆ.

ಪುಟ್ಟರಾಜು ಅವರು ಚೆಕ್ ಪಡೆದು ವರದರಾಜನ್,ವಿಕಾಸಿನಿ ಸೇರದಂತೆ ಹಲವರ ಹೆಸರಲ್ಲಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ.ಇದೀಗ ಗೀತಾ ಅವರು ಬ್ಯಾಂಕ್ ಗೆ ಅಸಲು 97,70,391 ರೂ ಜೊತೆಗೆ ಬಡ್ಡಿ ಸೇರಿ 1,09,10,780 ರೂ ಬಾಕಿ ಉಳಿಸಿಕೊಂಡಿದ್ದಾರೆ.

ಗೀತಾ ಅವರಿಂದ ಹಣ ಮರುಪಾವತಿ ಆಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್ ಏಕಾಂತ್ ಮಧ್ಯವರ್ತಿಗಳ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ: ಪ್ರಕರಣ ದಾಖಲು Read More

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕೋತ್ಸವ: ವಿವಿಧ ಸ್ಪರ್ಧೆಗಳಿಗೆ ಚಾಲನೆ

ಮೈಸೂರು: ಮೈಸೂರಿನ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೊಸೈಟಿಯ ಸದಸ್ಯರಿಗೆ ಹಾಗೂ ಮಕ್ಕಳಿಗೆ
ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.

ಭಗವದ್ಗೀತಾ ಶ್ಲೋಕ ಪಠಣ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಹಿಳೆ ಮತ್ತು ಪುರುಷ ಸದಸ್ಯರಿಗೆ ಜನಪದ ಭಾವಗೀತೆ, ದೇವರ ನಾಮ ಗೀತೆ ಸ್ಪರ್ಧೆ ಹಾಗೂ ವಿವಿಧ ಕ್ರೀಡೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸದಸ್ಯರು ಹಾಗೂ ಅವರ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ದೀಪಾ ಬೆಳಗಿಸಿ ನಂತರ ಗಿಡಕ್ಕೆ ನೀರು ಹಾಕುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದ ಸೊಸೈಟಿಯ ಅಧ್ಯಕ್ಷ ಎಂ. ಡಿ ಗೋಪಿನಾಥ್,ಸ್ಪರ್ಧಿಸಿದ ಎಲ್ಲ ಸದಸ್ಯರಿಗೂ ಶುಭಕೋರಿದರು.

ಇದೇ ತಿಂಗಳು ಬುಧವಾರ 25ರಂದು ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀ ರಾಮಮಂದಿರದಲ್ಲಿ ಸ್ಪರ್ಧಿಸಿದ ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.

ಹಾಗೆಯೇ 2024ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಸದ್ಯಸರಿಗೆ ಸನ್ಮಾನ ಹಾಗೂ ಸೊಸೈಟಿಯ ಗ್ರಾಹಕರ ಸಂವಾದ ಕಾರ್ಯಕ್ರಮವು ಸಹ ಆಯೋಜಿಸಲಾಗಿದೆ ಎಂದು ಹೇಳಿದರು.

ಸಹಕಾರಿ ರತ್ನ ಹಾಗೂ ಸೊಸೈಟಿಯ ನಿರ್ದೇಶಕರಾದ ಸಿ ವಿ ಪಾರ್ಥಸಾರಥಿ ಮಾತನಾಡಿ,ವಿದ್ಯಾರ್ಥಿಗಳು ಸಂಸ್ಕಾರ, ಸೇವಾ ಮನೋಭಾವ ರೂಢಿಸಿಕೊಳ್ಳುವುದರ ಜತೆಗೆ ಆಧುನಿಕ ಯುಗದಲ್ಲಿ ಎಲ್ಲ ಸ್ಪರ್ಧೆಗಳನ್ನು ಎದುರಿಸುವ ಮನೋಸ್ಥೆರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ತೀರ್ಪುಗಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ, ಖಜಾಂಚಿ ಕೆ ನಾಗರಾಜ, ನಿರ್ದೇಶಕ ಮಂಡಲಿ ಸದಸ್ಯರಾದ ಸಿ. ವಿ ಪಾರ್ಥಸಾರಥಿ, ಎಂ. ಆರ್. ಬಾಲಕೃಷ್ಣ ,ಹೆಚ್ ಪಿ ಚೇತನ್,
ಎನ್.ಪಣಿರಾಜ್,ವಿಕ್ರಂ ಅಯ್ಯಂಗಾರ್,ಪಿ.
ಮಹಿಮ,ಎನ್ ನಾಗಶ್ರೀ,ಶಿವರುದ್ರಪ್ಪ, ಹಾಗೂ ಸೊಸೈಟಿ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕೋತ್ಸವ: ವಿವಿಧ ಸ್ಪರ್ಧೆಗಳಿಗೆ ಚಾಲನೆ Read More