ಮಾದಪ್ಪನ ಕ್ಷೇತ್ರದಲ್ಲಿ ಆಟೋಗಳಲ್ಲಿವ್ಹೀಲಿಂಗ್ ಪುಂಡಾಟ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಸಾಮಾನ್ಯವಾಗಿ ದ್ವಿಚಕ್ರ ವಾಹನದಲ್ಲಿ ಪುಂಡು ಹುಡುಗರು ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಮಾಡುತ್ತಾರೆ ಈಗ ಆಟೋ ಚಾಲಕರೂ ಕೂಡಾ ಇದೇ ಹಾದಿ ಹಿಡಿದಿದ್ದು ಜನರ ಪ್ರಾಣದ ಜತೆ ಆಟ‌ ಆಡುತ್ತಿದ್ದಾರೆ.

ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಆಟೊ ಚಾಲಕರು ವ್ಹಿಲಿಂಗ್ ಮಾಡುವ ಮೂಲಕ ಅಪಾಯಕಾರಿ ವಾಹನಾ ಚಾಲನೆ ಮಾಡಿದ್ದಾರೆ.

ಈ ಸಂಬಂದ ಮೂವರು ಆಟೋ ಚಾಲಕರ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಮೂರ್ನಾಲ್ಕು ದಿನದ ಹಿಂದೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಆಟೋ ಚಾಲಕರು ವ್ಹಿಲಿಂಗ್ ಮಾಡಿ ತಮ್ಮ ಇನ್ಸ್ ಟಾ ಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಮಹದೇಶ್ವರ ಬೆಟ್ಟದ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಅವರು ಠಾಣಾದಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಮಲೆ ಮಹದೇಶ್ವರ ಬೆಟ್ಟ- ತಾಳಬೆಟ್ಟ ಮುಖ್ಯರಸ್ತೆಯಲ್ಲಿ ಮೂವರು ಆಟೊ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ.

ಜತೆಗೆ ಅಟೋಗಳಲ್ಲಿ ವೀಲೀಂಗ್ ಮಾಡುತ್ತ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿ ಜನರಿಗೆ ಗಾಬರಿ ಉಂಟುಮಾಡಿದ್ದಾರೆ.ಹೀಗೆ ಹೋಗುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಮೂರ್ನಾಲ್ಕು ದಿನಗಳ ಹಿಂದೆ ಇವೇ ಅಟೋಗಳ ಚಾಲಕರು ಪ್ರಮುಖ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರುಕತೆಯಿಂದ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಹೋಗಿರುವುದು ಗೊತ್ತಾದ ಕೂಡಲೇ ಅಟೋ ಮತ್ತು ಅದರ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಿ ಬಿಸಿ ಮುಟ್ಟಿಸಲು ಮಹದೇಶ್ವರ ಬೆಟ್ಟದ ಠಾಣೆಯ ಸೊಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿ ಮುಂದಾಗಿದ್ದಾರೆ,ಜತೆಗೆ ವಿಡಿಯೋ ವೀಕ್ಷಿಸಿ ಪ್ರಾಥಮಿಕ ವರದಿ ಸಿದ್ದಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆದರೆ ಮಾದಪ್ಪನ ಕ್ಷೇತ್ರದಲ್ಲಿ ತಿರುವುಗಳ ನಡುವೆಯೂ ಆಟೋಗಳಲ್ಲಿ ವ್ಹೀಲಿಂಗ್ ಮಾಡಿ ಇತರೆ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದಾರೆ.ಬೇರೆಯವರಿಗೆ ತೊಂದರೆ ಆಗಲಿದೆ ಎಂಬ ಪರಿಜ್ಞಾನ ಇಲ್ಲದೆ ವ್ಹಿಲಿಂಗ್ ಮಾಡಿದ್ದಲ್ಲದೆ ವಿಡಿಯೊ ಮಾಡಿ ಅಪ್ಲೊಡ್ ಮಾಡಿ,ತಾವಾಗಿಯೇ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.

ಮಾದಪ್ಪನ ಕ್ಷೇತ್ರದಲ್ಲಿ ಆಟೋಗಳಲ್ಲಿವ್ಹೀಲಿಂಗ್ ಪುಂಡಾಟ! Read More

ರಾಮಾನುಜ ರಸ್ತೆಯಲ್ಲಿ ರಾತ್ರಿ ಝಳಪಿಸಿದ ಲಾಂಗ್: ಆಟೋದಲ್ಲಿದ್ದವರ ಮೇಲೆ ಹಲ್ಲೆ

ಮೈಸೂರು: ಸಾಂಸ್ಕೃತಿಕ ನಗರಿ ಈಗ ಕ್ರೈಮ್ ನಗರಿ ಆಗಿಬಿಡುತ್ತಿದೆಯೇನೊ ಅನಿಸುತ್ತಿದೆ.ಇದಕ್ಕೆ ಇಂದು ರಾತ್ರಿ ನಡೆದ‌ ಒಂದು ಘಟನೆ ಸಾಕ್ಷಿಯಾಗಿದೆ.

ಮೈಸೂರಿನ ರಾಮಾನುಜ ರಸ್ತೆ 12 ಕ್ರಾಸ್ ಸಮೀಪ ಇನ್ನೂ ವಾಹನ ಸಂಚಾರ‌, ಜನ ಸಂಚಾರ ಇದ್ದಾಗಲೇ ಮಾರಕಾಸ್ತ್ರಗಳು ಸಾರ್ವಜನಿಕವಾಗಿ ರಾಜಾರೋಷವಾಗಿ ಝಳಪಿಸಿವೆ.

12 ನೆ ಕ್ರಾಸ್ ನಲ್ಲಿ ಮುಂದೆ ಹೋಗುತ್ತಿದ್ದ ಆಟೋವೊಂದನ್ನು ಹಿಂದಿನಿಂದ ಬಂದ ಕಾರ್ ನವರು ಅಡ್ಡಗಟ್ಟಿದ್ದಾರೆ.ಏಕಾಏಕಿ ಕಾರಿನಿಂದ ಇಳಿದ ಒಂದಿಬ್ಬರು ಪುರುಷರು ಆಟೋ ಮೇಲೆ ದಾಳಿ ಪ್ರಾರಂಭಿಸಿದ್ದಾರೆ.ತಕ್ಷಣ ಆಟೋ ಚಾಲಕ ಆತಂಕದಿಂದ ಇಳಿದು ಹೊರ ಬಂದು ನಿಲ್ಲುತ್ತಾರೆ.ಆದರೆ ಚಾಲಕನಿಗೆ ಆ ಪುರುಷರು ಏನೂ ಮಾಡಿಲ್ಲ.

ಆಟೊ ಒಳಗೆ ಇದ್ದವರ ಮೇಲೆ ಒಮ್ಮೆಗೆ ಲಾಂಗ್ ಗಳಿಂದ ಹಲ್ಲೆ ಮಾಡಿದ್ದಾರೆ.ಒಳಗಿದ್ದ ಮಹಿಳೆಯರು ಕೂಗಿಕೊಂಡರೂ ಬಿಡದೆ ಅವಾಚ್ಯ ಶಬ್ದ ಬಳಕೆ ಮಾಡಿ ಲಾಂಗ್ ಝಳಪಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿ ಪುರುಷರು ಪರಾರಿಯಾಗಿದ್ದಾರೆ.

ಇದನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೆಲ್ಲಾ ಸ್ಥಳದಲ್ಲಿದ್ದವರು ವಿಡಿಯೊ ಮಾಡಿ ಹಾಕಿದ್ದಾರೆ.ಈ ಘಟನೆ ಕೆ.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ,ಸಾರ್ವಜನಿಕ‌ ಸ್ಥಳಗಳಲ್ಲಿ ಇಂತಹ ಕೆಟ್ಟ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.

ಸಾಂಸ್ಕೃತಿಕ ನಗರಿ ಕ್ರೈಮ್ ನಗರಿಯಾಗದಂತೆ ಮೈಸೂರು ಪೊಲೀಸ್ ಕಮಿಷನರ್ ಎಚ್ಚೆತ್ತು ಈಗಿನಿಂದಲೇ ಪುಂಡು,ಪೋಕರಿಗಳು,
ರೌಡಿಗಳಿಗೆ ತಿಳುವಳಿಕೆ ಮೂಡಿಸಿ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ.ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ.

ರಾಮಾನುಜ ರಸ್ತೆಯಲ್ಲಿ ರಾತ್ರಿ ಝಳಪಿಸಿದ ಲಾಂಗ್: ಆಟೋದಲ್ಲಿದ್ದವರ ಮೇಲೆ ಹಲ್ಲೆ Read More