ಮೈಸೂರಿನಲ್ಲಿ ಮೇಣದ ಬತ್ತಿ ಬೆಳಗಿ ಮೃತ ಕ್ರಿಕೆಟ್ ಪ್ರೇಮಿಗಳಿಗೆ ಸಂತಾಪ

ಮೈಸೂರು: ನಗರದ ಚಾಮುಂಡಿಪುರಂ ವೃತ್ತದಲ್ಲಿ ಜನಮನ ವೇದಿಕೆ, ಪಾತಿ ಫೌಂಡೇಶನ್ ಮತ್ತು ಅರಿವು ಸಂಸ್ಥೆ
ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಕ್ರಿಕೆಟ್ ಪ್ರೇಮಿಗಳ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಲಾಯಿತು.

ಈ ವೇಳೆ ನಗರಪಾಲಿಕೆ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಐಪಿಎಲ್ ಪಂದ್ಯಾವಳಿಯಲ್ಲಿ ಅರ್.ಸಿ.ಬಿ ತಂಡ 18ವರ್ಷಗಳ ಬಳಿಕ ವಿಜೇರತರಾಗಿದ್ದನ್ನ ಸ್ವಾಗತಿಸುವ ಕಾರ್ಯಕ್ರಮ ಒಂದು ವಾರ ತಡವಾಗಿ ಆಯೋಜಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟರು.

ಒಂದು ಕಡೆ ಸಂಭ್ರಮಾಚರಣೆ ಇನ್ನೊಂದು ಕಡೆ ಶೋಕಾಚರಣೆ ಕ್ರಿಕೆಟ್ ಪ್ರೇಮಿಗಳಿಗೆ ನೋವನ್ನ ತಂದಿದೆ. ಅಭಿಮಾನ ಇರಬೇಕು ನಿಜ ಆದರೆ ಅಂದಾಭಿಮಾನ ಇರಬಾರದು ಎಂದು ‌ಹೇಳಿದರು.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ನೋವನ್ನ ಬರುಸುವ ಶಕ್ತಿ ಧೈರ್ಯ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ವಿಧಾನಸೌಧದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಷ್ಠಾಚಾರವಿಲ್ಲದೇ ಅನಾಮಿಕ ವ್ಯಕ್ತಿಗಳಲ್ಲ ಪೋಟೋ ತೆಗೆಸಿಕೊಂಡಿದ್ದಾರೆ, ರಾಜ್ಯ ಸರ್ಕಾರ ಬೇಜವ್ದಾರಿತನ ಆಯೋಜನೆ ಕಂಡು ಆರ್.ಸಿ.ಬಿ ಆಟಗಾರರಿಗೆ ಬಹುಶಃ ಬೇಸರ ತಂದಿರಬಹುದು ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 45ಸಾವಿರ ಮಂದಿ ಕೂರುವ ವ್ಯವಸ್ಥೆಯಿದ್ದಲ್ಲಿ ಏಕಾಏಕಿ ಲಕ್ಷಾಂತರ ಮಂದಿ ಕ್ರಿಕೆಟ್ ಪ್ರೇಮಿಗಳು ನುಗ್ಗಿದ್ದು ಕಾಲ್ತುಳಿತಕ್ಕೆ ಕಾರಣವಾಗಿದೆ ಮುಂದಿನ‌ ದಿನದಲ್ಲಿ ಈ ತರಹ ಘಟನೆಗಳು ನಡೆಯದ ಹಾಗೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಪಾತಿ ಫೌಂಡೇಶನ್ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ವಿಕ್ರಂ ಅಯ್ಯಂಗಾರ್, ಜೋಗಿ ಮಂಜು, ರಾಕೇಶ್ ಭಟ್, ಅಜಯ್ ಶಾಸ್ತ್ರಿ,ಕೆ ಎಂ ನಿಶಾಂತ್, ಮೈಸೂರು ಆನಂದ್, ದೂರ ರಾಜಣ್ಣ, ಜತ್ತಿ ಪ್ರಸಾದ್, ಶ್ರೀಕಾಂತ್ ಕಶ್ಯಪ್, ಸುಚೇಂದ್ರ, ಅರವಿಂದ, ಮಹದೇವ್, ರಾಘವೇಂದ್ರ, ಪುರುಷೋತ್ತಮ್, ಸೋಮೇಶ್, ಮಹೇಶ್, ಹವನ್ನು, ನಿರಂಜನ್, ಸುರೇಶ್, ರಾಕೇಶ್ ಮತ್ತಿತರರು ಭಾಗಿಯಾಗಿದ್ದರು.

ಮೈಸೂರಿನಲ್ಲಿ ಮೇಣದ ಬತ್ತಿ ಬೆಳಗಿ ಮೃತ ಕ್ರಿಕೆಟ್ ಪ್ರೇಮಿಗಳಿಗೆ ಸಂತಾಪ Read More

ಶ್ರೀ ಗಣಪತಿ ಶ್ರೀಗಳ ಹುಟ್ಟು ಹಬ್ಬ:ಗೋ ಸೇವೆ

ಮೈಸೂರು: ಅರಿವು ಸಂಸ್ಥೆ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಭಕ್ತವೃಂದದ ವತಿಯಿಂದ ಸ್ವಾಮಿಗಳ 83ನೇ ಹುಟ್ಟು ಹಬ್ಬದ ಅಂಗವಾಗಿ ಗೋಪೂಜೆ ನೆರವೇರಿಸಲಾಯಿತು.

ಮೈಸೂರಿನ ನಂಜುಮಳಿಗೆ ಯಲ್ಲಿ ಗೋಪೂಜೆ ಸಲ್ಲಿಸಿ ನಂತರ ಗೋವುಗಳಿಗೆ ಮೇವು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ನಮ್ಮ ಮೈಸೂರಿನ ಹೆಮ್ಮೆಯ ಧಾರ್ಮಿಕ ಆಸ್ತಿ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳರವರು ಎಂದು ಬಣ್ಣಿಸಿದರು.

ಇಂದು ಅವರ 83 ನೇ ಜನ್ಮದಿನವನ್ನು ಅವರ ಭಕ್ತರಾದ ನಾವುಗಳು ಗೋ ಸೇವೆ ಮೂಲಕ ಆಚರಿಸುತ್ತಿದ್ದೇವೆ,ಈ ಹಿಂದೆ ರಾಜ ಮಹಾರಾಜರುಗಳು ಚಾಮುಂಡಿ ಬೆಟ್ಟ, ಮೈಸೂರು ಸಂಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಶ್ರದ್ಧ ಕೇಂದ್ರಗಳನ್ನು ತೆರೆದಿದ್ದರು, ಸ್ವಾತಂತ್ರ್ಯ ನಂತರ ಆಸ್ಥಾನವನ್ನು ತುಂಬಿದವರು ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು ರವರು ಎಂದು ಹೇಳಿದರು.

ನಾಡಿನ ಜನತೆಗೆ ಧಾರ್ಮಿಕ ಹಾಗೂ ಧರ್ಮ ಜಾಗೃತಿ ಉಂಟು ಮಾಡುತ್ತಿರುವ ಪೂಜ್ಯರು ನೂರು ಕಾಲ ಹೀಗೆ ಮಾರ್ಗದರ್ಶನ ನೀಡುತ್ತಿರಲಿ ಎಂದು ಆಶಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್,ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.

ಗಣಪತಿ ಶ್ರೀಗಳು ಸಂಗೀತದ ಮೂಲಕ ಜನರ ಮನಃಕ್ಲೇಶ ಹಾಗೂ ಅನಾರೋಗ್ಯ ಗುಣಪಡಿಸುವ ವಿಶೇಷತೆಯನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಬಣ್ಣಿಸಿದರು.

ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಗೌರಿಶಂಕರ ನಗರ ಶಿವು,
ಮಲ್ಲೇಶ್, ಚಕ್ರಪಾಣಿ,ಜತ್ತಿಪ್ರಸಾದ್, ಚಂದ್ರು, ಮಹದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಶ್ರೀ ಗಣಪತಿ ಶ್ರೀಗಳ ಹುಟ್ಟು ಹಬ್ಬ:ಗೋ ಸೇವೆ Read More