ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ

Spread the love

ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ವಿಶೇಷ ಚೇತನ ದೃಷ್ಟಿದೋಷವುಳ್ಳ ಉದ್ಯೋಗಸ್ಥ ಹಾಗೂ ವಿದ್ಯಾರ್ಥಿನಿಯರ ನಿಲಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು,ಹಂಪಲು ವಿತರಿಸಲಾಯಿತು.

ಸ್ನೇಹ ಬಳಗದ ಸದಸ್ಯರು ಅವರೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಹಣ್ಣು ಹಂಪಲು ವಿತರಿಸಿ, ದಸರಾ ಹಬ್ಬದ ಶುಭಾಶಯ ಗಳನ್ನು ತಿಳಿಸಿ,ಸೇವಾ ಸಂಭ್ರಮಾಚರಣೆ ಮಾಡಿದರು.

ಈ ಮಭ್ರಮದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ರಾಜೇಶ್ ಕುಮಾರ್,ಮಹೇಶ್, ಸರ್ವಮಂಗಳ,ಶೋಭಾ , ಎಸ್. ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಪಾಲ್ಗೊಂಡಿದ್ದರು.