ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳ ವರ್ಧಂತಿ: ಹೋಮ

ಮೈಸೂರು: ಮೈಸೂರಿನಲ್ಲಿ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ ಅಂಗವಾಗಿ ಹೋಮ
ಮತ್ತಿತ್ತರ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು.

ಹರಿಹರಪುರ ಮಠದ ಪೀಠಾಧೀಶರಾದ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ವರ್ದಂತಿ ಮಹೋತ್ಸವ ಅಂಗವಾಗಿ

ಶ್ರೀ ಮಹಾಜನ ಸಭಾ ಟ್ರಸ್ಟ್ ರಾಮ ಮಂದಿರ ಹಾಗೂ ಭಕ್ತ ವೃಂದದಿಂದ ಶ್ರೀ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ
ಶ್ರೀಗಳ ಆಯುಷ್ ವೃದ್ದಿಗೆ ಹಾಗೂ ಲೋಕಕಲ್ಯಾಣಕ್ಕಾಗಿ ರುದ್ರಾಭಿಷೇಕ, ನವಗ್ರಹ ಹೋಮ,ಗಣಪತಿ ಹೋಮ, ಆಯುಷ್ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಯಿತು.

ಇದೇ‌ ವೇಳೆ ಮಾತೆಯರಿಂದ ಲಕ್ಷ್ಮಿ ನರಸಿಂಹ ಪಾರಾಯಣ, ವೇದ ಬಳಗದ ವೇದ ಬ್ರಹ್ಮಶ್ರೀ ಅನಂತ ಜೋಶಿ ಹಾಗೂ ಕೃಷ್ಣಮೂರ್ತಿಪುರಂ ರಾಮಮಂದಿರದ ಪ್ರಧಾನ ಅರ್ಚಕರಾದ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ
ಹೋಮ ಹವನಗಳು ನಡೆಯಿತು.

ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ ಮೇಲುಕೋಟೆ ವೆಂಗಿ ಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,
ಮಾಧವ್ ರಾವ್, ಬಿ.ಎಸ್ ಶೇಷಾದ್ರಿ, ವಿ ಎನ್ ಕೃಷ್ಣ, ಕೆ ಎನ್ ಅರುಣ್, ಎಚ್ ಅಶ್ವಥ್ ನಾರಾಯಣ್, ರಾಮ್ ಪ್ರಸಾದ್, ಹರಿಹರಪುರ ಮಠದ ಆಡಳಿತಾಧಿಕಾರಿ ಚಂದ್ರನ್,ಶ್ರೀಮಠದ ಮೈಸೂರು ವ್ಯವಸ್ಥಾಪಕರಾದ ಶ್ರೀನಿವಾಸ್,
ಜಯಶ್ರೀ ಮೂರ್ತಿ, ವಿದುಷಿ ನಾಗಲಕ್ಷ್ಮಿ, ಪ್ರೇಮ ಚಂದ್ರಶೇಖರ್,ಉಮಾ ನಂಜುಂಡಯ್ಯ, ಸುಬ್ಬಲಕ್ಷ್ಮಿ, ಕಮಲ ಮತ್ತಿತರರು ಪಾಲ್ಗೊಂಡಿದ್ದರು.