ಮೈಸೂರು: ಮೈಸೂರಿನ ಕೆ ಹೆಚ್ ಬಿ ಕಾಲೋನಿ ಹೂಟಗಳ್ಳಿಯಲ್ಲಿರುವ ಸುದರ್ಶನ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಶ್ರೀನಿವಾಸ್ ಅವರು ವಿಧ್ಯಾರ್ಥಿಗಳಿಗೆ ತಲಾ 2000 ರೂ ವಿಧ್ಯಾರ್ಥಿ ವೇತನ ವಿತರಿಸಿದರು.
8 ನೇ ತರಗತಿಯ ವಿದ್ಯಾರ್ಥಿಗಳಾದ
ವಿಕಾಸ್ ಸಿ,ಸಹನಾ ವೈ.
9 ನೇ ತರಗತಿ ಯ ರತೇಶ್ ಎಂ,ತೇಜಸ್ವಿನಿ,
10 ನೇ ತರಗತಿಯ ರೋಹಿತ್ ಎಸ್,
ಸಾನಿತ್ಯ ಎಲ್ ಆರ್ ಅವರುಗಳು ವಿಧ್ಯಾರ್ಥಿ ವೇತನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣ ತಜ್ಞರಾದ ಮೇ ಹಾ ಪ್ರಕಾಶ್, ಹಾಗೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಜರಿದ್ದರು.