ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚಿದಬೀದಿ ನಾಯಿಗಳು:ದಾಳಿಗೆ ಮುದ್ದು ಬೆಕ್ಕು ಬಲಿ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಜನ‌ ಹೊರಗೆ ಬರಲು ಹೆದರುವಂತಾಗಿದೆ.

ಸರ್ವೋಚ್ಛ ನ್ಯಾಯಾಲಯ ದೇಶಾದ್ಯoತ ಕೇಳಿರುವ ಬೀದಿ ನಾಯಿಗಳ ಭೀಕರತೆ ಅಂಕಿ ಅಂಶಕ್ಕೆ ಮೈಸೂರು ನಗರವನ್ನೂ ಸೇರಿಸುವ ಪ್ರಮೇಯ ಒದಗಿ ಬಂದಿದೆ.

ಅದರಲ್ಲೂ ಕುವೆಂಪು ನಗರ ‘ಕೆ ‘ ಬ್ಲಾಕಿನಲ್ಲಿ, ಸುಮಾರು 25 ಕ್ಕೂ ಹೆಚ್ಚು ಭೀಭತ್ಸ ಬಿದಿನಾಯಿಗಳು ರಾಜಾರೋಷವಾಗಿ ಬೊಗಳುತ್ತಾ ಅಲೆಯುತ್ತಲೇ ಇರುತ್ತವೆ.

ವೃದ್ಧರು, ಮಕ್ಕಳನ್ನು ಆಟವೆಂಬಂತೆ ಕಚ್ಚುತ್ತಾ ಹೋಗುತ್ತವೆ ಕೋಳಿ, ಬೆಕ್ಕುಗಳಿಗಂತೂ ಇವುಗಳ ದಾಳಿಯಿಂದ ಉಳಿಗಾಲ ಇಲ್ಲದಂತಾಗಿದೆ.

ಮಧ್ಯೆ ರಾತ್ರಿ ಇವುಗಳ ಸ್ಟ್ರೀಟ್ ವಾರ್ ನಿಂದಾಗಿ, ಮಕ್ಕಳು – ರೋಗಿಗಳ ನಿದ್ರೆಯೇ ಮಾಯವಾಗಿಹೋಗಿದೆ.

ಮೊನ್ನೆ ನಗರದ ಹಿರಿಯ ಸಮಾಜ ಸೇವಕರಾದ ಡಾ ಕೆ ರಘುರಾಮ್ ವಾಜಪೇಯಿ ಯವರ ಮನೆಯಲ್ಲಿ 16 ವರ್ಷಗಳಿಂದ ಪ್ರೀತಿಯ ಮುದ್ದುಮಗಳಾಗಿ ಬೆಳೆದಿದ್ದ ಕಾಳಿ ಎಂಬ ಪೂರ್ಣ ಕರಿ ವರ್ಣ ದ ಬೆಕ್ಕನ್ನು ನಾಯಿಗಳು ದಾಳಿ ನಡೆಸಿ ಕೊಂದಿವೆ.

ಕುವೆಂಪು ನಗರದಲ್ಲಿ
ನಾಯಿಗಳ ಅಟ್ಟಹಾಸಕ್ಕೆ ಬೆಕ್ಕುಗಳ ಸಂತಾನವೇ ನಿರ್ಮೂಲವಾಗುತ್ತಿದ್ದು, ಇಲಿ – ಹೆಗ್ಗಣ -ಹಾವು ಗಳ ಕಾಟ ಹೆಚ್ಚಾಗಿದೆ.

ನಾಯಿಗಳಿಗೆ ಒಂದು ವೇಳೆ ಯಾರಾದರೂ ಹೊಡೆದು ಪೆಟ್ಟಾದರೆ ತಕ್ಷಣ ಪ್ರಾಣಿಪ್ರಿಯರು ಬಂದು ಕ್ಯಾತೆ ತೆಗೆಯುತ್ತಾರೆ.ಆದರೆ ಮಕ್ಕಳು,ಬೆಕ್ಕುಗಳ ಮೇಲೆ ನಾಯಿಗಳು ಮಾರಣಾಂತಿಕ ದಾಳಿ ನಡೆಸಿದಾಗ ಏನನ್ನೂ ಕೇಳುವುದಿಲ್ಲ.

ನಾಯಿಗಳ ಹಾವಳಿ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ,ಇಡೀ ನಗರದಲ್ಲಿ ಇದೇ ಕತೆ,ವ್ಯತೆ.

ಮೈಸೂರು ನಗರಪಾಲಿಕೆ ಅಧಿಕಾರಿಗಳು ನಾಯಿಗಳ ಹಾವಳಿ ತಡೆಯಲು ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.ಕನಿಷ್ಟ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಯನ್ನಾದರೂ ಮಾಡಿಸಿದರೆ ಅವುಗಳ ಸಂತತಿ ಕಡಿಮೆ ಯಾಗಬಹುದು.

ಮೈಸೂರು ನಗರಪಾಲಿಕೆ ಸುಪ್ರೀಂ ಕೋರ್ಟ್ ಮಾರ್ಗ ದರ್ಶನವನ್ನಾದರೂ ಪಾಲಿಸಲಿ ಎಂದು ಡಾ ಕೆ ರಘುರಾಮ್ ವಾಜಪೇಯಿ ಅವರು ಮನವಿ ಮಾಡಿದ್ದಾರೆ.