ಬೆಂಗಳೂರು: ಜಗತ್ತಿನ ಕಲ್ಯಾಣ ಹಾಗೂ ಶಾಂತಿ ಸ್ಥಾಪನೆ ಗಾಗಿ 365 ದಿನಗಳ ಕಾಲ ನಿರಂತರ ಶ್ರೀವಿದ್ಯಾ ಮಹಾಯಾಗವನ್ನು ಪೂಜ್ಯ ಮಾತಾಜಿ ಡಾ.ಶ್ರಿಪ್ರಿಯಾ ಅವರು ಪ್ರಾರಂಭಿಸಿದ್ದಾರೆ.
2025ರ ಆಗಸ್ಟ್ 15 ರಂದು ಬೆಂಗಳೂರಿನ ಆನೇಕಲ್ ತಾ.ಜಿಗಣಿ ಹೋಬಳಿ,ಬೊಮ್ಮನಹಳ್ಳಿ ಗ್ರಾಮದ ಸರ್ವೇಶ್ವರ ಧಾಮದಲ್ಲಿ ಶ್ರೀವಿದ್ಯಾ ಮಹಾಯಾಗವನ್ನು ಪ್ರಾರಂಭಿಸಲಾಗಿದೆ.2026 ಆಗಸ್ಟ್ 15ಕ್ಕೆ ಯಾಗ ಸಂಪನ್ನಗೊಳ್ಳಲಿದೆ ಎಂದು ಪೂಜ್ಯ ಮಾತಾಜಿ ಡಾ.ಶ್ರಿಪ್ರಿಯಾ ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಪ್ರತಿದಿನ ಬೆಳಗಿನ ಅಧಿವೇಶನ:
ಬೆಳಿಗ್ಗೆ 5 ರಿಂದ 6 ರವರೆಗೆ – ಶ್ರೀಚಕ್ರ ಪೂಜೆ,
ಬೆಳಿಗ್ಗೆ 7 ರಿಂದ 8 ರವರೆಗೆ – ವಿಶ್ರಾಂತಿ, ಮರುಪರಿಶೀಲನೆ ಮತ್ತು ನಿರ್ಧಾರ ತೆಗೆದುಕೊಳ್ಳುವುದು.
ಬೆಳಿಗ್ಗೆ 9 ಗಂಟೆಗೆ – ತಿಥಿ ನಿತ್ಯ ದೇವತಾ ಹೋಮ,11 ಗಂಟೆಗೆ ಲಲಿತಾಸಹಸ್ರನಾಮ ಹೋಮ ನಡೆಯುತ್ತದೆ.
ಸಂಜೆ ಅಧಿವೇಶನ:
ಸಂಜೆ 5.30- ನವಾವರಣ ಹೋಮ,
ಸಂಜೆ 6.15ಕ್ಕೆ ತ್ರಿಶತಿ ಹೋಮ,
ಸೌಂದರ್ಯಲಹರಿ ಹೋಮ.
ನಂತರ ಮಾತಾ ಅವರಿಂದ
ಸಂದೇಶ ಇರುತ್ತದೆ.
ಈ ಲೋಕ ಕಲ್ಯಾಣ ಹೋಮದಲ್ಲಿ ನಾಗರೀಕರು ಪಾಲ್ಗೊಳ್ಳಬಹುದಾಗಿದೆ.
