ಮೈಸೂರು: ಮಾರ್ಗಶಿರ ಶುಕ್ರವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯ ನೆರವೇರಿಸಲಾಯಿತು.
ತಾಯಿ ಪಾರ್ವತಿಯನ್ನು ಬಗೆ,ಬಗೆಯ ಹೂಗಳು,ಆಭರಣಗಳಿಂದ ಅಲಂಕರಿಸಲಾಗಿದೆ.
ಕೆಂಪು ಬಣ್ಣದ ಸೀರೆ ಉಡಿಸಿ
ಮಲ್ಲಿಗೆ,ಸೇವಂತಿಗೆ,ಕನಕಾಂಬರ,ಗುಲಾಬಿ ಸುಗಂಧರಾಜ ಹೂಗಳು ಮತ್ತು ನಿಂಬೆಹಣ್ಣಿನ
ಆಹಾರಗಳನ್ನು ತೊಡಿಸಿ ಹೊಂಬಾಳೆಗಳನ್ನು ಇಟ್ಟು ಕಂಗೊಳಿಸುವಂತೆ ಮಾಡಲಾಗಿದೆ.
ತಾಯಿಯು ಕಿರೀಟ ಧರಿಸಿ ಕೈನಲ್ಲಿ ತ್ರಿಶೂಲ ಹಿಡಿದು ಬೆಳ್ಳಿಯ ಕೈ,ಕಾಲುಗಳಿಂದ ಅಲಂಕೃತಗೊಂಡಿದ್ದು ನೋಡಲು ಅದ್ಭುತವಾಗಿದ್ದಾಳೆ.
ಶಿವಾರ್ಚಕರಾದ ಎಸ್.ಯೋಗಾನಂದ ಅವರು ಪೂಜಾಕಾರ್ಯ ನೆರವೇರಿಸಿದರು.
ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿ ಮತ್ತು ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದಾರೆ.
