ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಮತ್ತೊಂದು ಸ್ಕ್ಯಾಮ್-ಅಶೋಕ್ ಆರೋಪ

Spread the love

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಮತ್ತೊಂದು ಸ್ಕ್ಯಾಮ್ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಸುಲಿಗೆ ಮಾಡಲು ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ.400-800ರಷ್ಟು ದರ ಏರಿಕೆ ಮಾಡಿದ್ದಾಗಿದೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ಈಗ ಸ್ಮಾರ್ಟ್ ಮೀಟರ್ ಜಾರಿ ಮಾಡುವ ನೆಪದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಶೇಷ ತೆರಿಗೆ ವಿಧಿಸಲು ಹೊರಟಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರ ಇಂಧನ ಇಲಾಖೆಯ ಮೂಲಕ ಮತ್ತೊಮ್ಮೆ ಹಗಲು ದರೋಡೆಗೆ ಇಳಿದಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.