ಜಾನಪದ ಎಸ್ ಬಾಲಾಜಿ ಅವರನ್ನ ಗೌರವಿಸಿದ ರಾಯ್ ಸಿಂಗ್

Spread the love

ಮಧ್ಯ ಪ್ರದೇಶ,ಮಾ.8: ಮಧ್ಯ ಪ್ರದೇಶ ರಾಜ್ಯದ ಸಿಹೋರ್ ಜಿಲ್ಲೆಯ ಆಷ್ಟ ನಗರಪಾಲಿಕೆ ಅಧ್ಯಕ್ಷರಾದ ರಾಯ್ ಸಿಂಗ್ ಅವರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಅಭಿನಂದಿಸಿ ಗೌರವಿಸಿದರು.

ಈ ವೇಳೆ ರಾಯ್ ಸಿಂಗ್ ಅವರು ಮಾತನಾಡಿ ನಮ್ಮ ನಗರ ಪಾಲಿಕೆ ವತಿಯಿಂದ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಿ ಕಲೆ ಹಾಗೂ ಕಾಲಾವಿದರನ್ನು ಪೋಷಿಸಲಾಗುವುದು ಎಂದು ತಿಳಿಸಿದರು.

ನಗರ ಪಾಲಿಕೆ ಸದಸ್ಯ ರವೀಂದ್ರ ವರ್ಮಾ, ಇತರ ನಗರ ಪಾಲಿಕೆ ಸದಸ್ಯರು ಹಾಗೂ ಮಧ್ಯ ಪ್ರದೇಶ ಯುವ ಸಂಘಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ರಾಕೇಶ್ ಶರ್ಮ ಮತ್ತಿತರರು ಹಾಜರಿದ್ದರು.