ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನೆಲೆಸಿರುವ ಕಾಶಿ ಚಂದ್ರಮೌಳೇಶ್ವರನಿಗೆ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ರುದ್ರ ಹೋಮ ನೆರವೇರಿಸಲಾಯಿತು.
ಶ್ರೀರಂಗಪಟ್ಟಣದ ಜಿಬಿ ಹೊಳೆ ನದಿಯ ದಂಡೆಯ ಪಕ್ಕದಲ್ಲಿ ಸ್ವಯಂಭೋ ಆಗಿ ಉದ್ಭವವಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕ ಮತ್ತು ರುದ್ರಹೋಮವನ್ನು ವೇದ ಬ್ರಹ್ಮ ಶ್ರೀ ಡಾ. ಭಾನುಪ್ರಕಾಶ್, ವೇದ ಬ್ರಹ್ಮ ಶ್ರೀ ಕೃಷ್ಣಾ ಭಟ್ ಹಾಗೂ ಜಿಬಿ ಹೊಳೆಯ ಪುರೋಹಿತ ವರ್ಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನಂತರ ಮಹಾಮಂಗಳಾರತಿ ಮಾಡಲಾಯಿತು. 5000 ಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣ ಮಾಡಲಾಯಿತು.
ಶ್ರೀರಂಗಪಟ್ಟಣದ ಬಹಳಷ್ಟು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಕಾಶಿ ಚಂದ್ರಮೌಳೇಶ್ವರನ ಭಕ್ತಿಗೆ ಪಾತ್ರರಾದರು.