ಮಹಾ ಶಿವಯೋಗಿಯಾಗಿ ಶಿವಕುಮಾರಶ್ರೀಗಳು:ಬಸವಯೋಗಿಪ್ರಭು ಬಣ್ಣನೆ

Spread the love

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ, ಮರಳಾಪುರದಲ್ಲಿ ಶತಾಯುಷಿ ಲಿಂಗೈಕ್ಯ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆರನೇ ವರ್ಷದ ಸ್ಮರಣೋತ್ಸವ ಪ್ರಯುಕ್ತ ದಾಸೋಹ ದಿನ ಆಚರಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣ ತತ್ವ ಚಿಂತಕರಾದ ಬಸವಯೋಗಿಪ್ರಭುಗಳು ಶಿವಕುಮಾರ ಸ್ವಾಮೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ‌ ವೇಳೆ ಮಾತನಾಡಿದ ಅವರು,
ಶಿವಕುಮಾರ ಮಾಹಾಸ್ವಾಮೀಜಿಯವರು ಬಸವಣ್ಣನವರು ನೀಡಿದ ಕಾಯಕ ದಾಸೋಹ ಶಿವಯೋಗವನ್ನು ಅಳವಡಿಸಿಕೊಂಡು ತ್ರಿಕಾಲ ಲಿಂಗಪೂಜಾ ನಿಷ್ಠರಾಗಿ ಮಹಾ ಶಿವಯೋಗಿಯಾಗಿ ಬೆಳಗಿದರು ಎಂದು ‌ಬಣ್ಣಿಸಿದರು.

ವಿಶ್ವಗುರು ಬಸವಣ್ಣನವರು ನೀಡಿದ
ದಾಸೋಹ ತತ್ವವನ್ನು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನ ದಾಸೋಹವನ್ನು ಮಾಡುವುದರ ಮೂಲಕ ದಾಸೋಹ ತತ್ವವನ್ನು ಮುಂದುವರೆಸಿದ ಮಹಾ ದಾಸೋಹಿಯಾಗಿದ್ದಾರೆ.

ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಪರಂಪರೆಯಲ್ಲಿ ಬರುವ ಹರದನಹಳ್ಳಿ ಗೋಸಲ ಸಿದ್ದೇಶ್ವರರು ಬರಡು ಭೂಮಿಯಲ್ಲಿ ನೀರು ತಂದ ಸ್ಥಳವೇ ಸಿದ್ದ ಗಂಗೆ ಸಿದ್ದಗಂಗಾ ಪರಂಪರೆಯಲ್ಲಿ ಬಂದ ಉದ್ದಾನ ಸ್ವಾಮಿಗಳ ಕರಸಂಜಾತರಾಗಿ ಬಂದವರು ಶಿವಕುಮಾರ ಸ್ವಾಮಿಗಳು ಎಂದು ಬಸವಯೋಗಿಪ್ರಭುಗಳು ಸ್ಮರಿಸಿದರು.

ಇದೇ ವೇಳೆ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮದ ಯುವಕರು ಮುಖಂಡರು ಮುದ್ದುಮಕ್ಕಳು ಭಕ್ತಿಯಿಂದ ಭಾಗವಹಿಸಿದ್ದರು.

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ, ಮರಳಾಪುರದಲ್ಲಿ ಶತಾಯುಷಿ ಲಿಂಗೈಕ್ಯ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆರನೇ ವರ್ಷದ ಸ್ಮರಣೋತ್ಸವ ಪ್ರಯುಕ್ತ ದಾಸೋಹ ದಿನ ಆಚರಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣ ತತ್ವ ಚಿಂತಕರಾದ ಬಸವಯೋಗಿಪ್ರಭುಗಳು ಶಿವಕುಮಾರ ಸ್ವಾಮೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ‌ ವೇಳೆ ಮಾತನಾಡಿದ ಅವರು,
ಶಿವಕುಮಾರ ಮಾಹಾಸ್ವಾಮೀಜಿಯವರು ಬಸವಣ್ಣನವರು ನೀಡಿದ ಕಾಯಕ ದಾಸೋಹ ಶಿವಯೋಗವನ್ನು ಅಳವಡಿಸಿಕೊಂಡು ತ್ರಿಕಾಲ ಲಿಂಗಪೂಜಾ ನಿಷ್ಠರಾಗಿ ಮಹಾ ಶಿವಯೋಗಿಯಾಗಿ ಬೆಳಗಿದರು ಎಂದು ‌ಬಣ್ಣಿಸಿದರು.

ವಿಶ್ವಗುರು ಬಸವಣ್ಣನವರು ನೀಡಿದ
ದಾಸೋಹ ತತ್ವವನ್ನು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನ ದಾಸೋಹವನ್ನು ಮಾಡುವುದರ ಮೂಲಕ ದಾಸೋಹ ತತ್ವವನ್ನು ಮುಂದುವರೆಸಿದ ಮಹಾ ದಾಸೋಹಿಯಾಗಿದ್ದಾರೆ.

ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಪರಂಪರೆಯಲ್ಲಿ ಬರುವ ಹರದನಹಳ್ಳಿ ಗೋಸಲ ಸಿದ್ದೇಶ್ವರರು ಬರಡು ಭೂಮಿಯಲ್ಲಿ ನೀರು ತಂದ ಸ್ಥಳವೇ ಸಿದ್ದ ಗಂಗೆ ಸಿದ್ದಗಂಗಾ ಪರಂಪರೆಯಲ್ಲಿ ಬಂದ ಉದ್ದಾನ ಸ್ವಾಮಿಗಳ ಕರಸಂಜಾತರಾಗಿ ಬಂದವರು ಶಿವಕುಮಾರ ಸ್ವಾಮಿಗಳು ಎಂದು ಬಸವಯೋಗಿಪ್ರಭುಗಳು ಸ್ಮರಿಸಿದರು.

ಇದೇ ವೇಳೆ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮದ ಯುವಕರು ಮುಖಂಡರು ಮುದ್ದುಮಕ್ಕಳು ಭಕ್ತಿಯಿಂದ ಭಾಗವಹಿಸಿದ್ದರು.