ರಾಮನಗರ: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಶ್ರೀ ಕ್ಷೇತ್ರ ತಾಳವಾಡಿ,ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ತಾಳವಾಡಿ ರಂಗನಾಥ ಸ್ವಾಮಿ ಭಂಡರಾದಂತಹ ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳನ್ನು ರಾಮನಗರ ತಾಲೂಕು ಕೈಲಂಚ ಹೋಬಳಿ ಅಚ್ಚಲು ದೊಡ್ಡಿ ಊರಿನ ಭಕ್ತರ ಮನೆಯಲ್ಲಿಟ್ಟು ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶ್ರಾವಣ ಮಾಸದಲ್ಲಿ ಶ್ರೀ ಕ್ಷೇತ್ರ ತಳವಾಡಿ ರಂಗನಾಥ ಸ್ವಾಮಿಯ ಆರಾಧಕರು ಶ್ರೀ ಕರಿಯಣ್ಣ ಕೆಂಚಣ್ಣ ದೊಡ್ಡ ದೇವರುಗಳನ್ನು ಮನೆಗೆ ಆಹ್ವಾನಿಸಿ ವಿಶೇಷ ಪೂಜೆಯನ್ನು ನೆರವೇರಿಸಿ ಮತ್ತೆ ವಾಪಸು ಕಳಿಸಿಕೊಡುತ್ತಾರೆ ಒಂದೊಂದು ದಿನ ಒಬ್ಬೊಬ್ಬರ ಮನೆಗೆ ದೇವರನ್ನು ಆಗಮಿಸಿ ಪೂಜಿಸುವುದು ವಿಶೇಷ.