ಶ್ರೀಗಂಧ ಲೇಪಿತ ಶೋಭಿತಳಾದ ಪಾರ್ವತಿದೇವಿ

Spread the love

ಮೈಸೂರು: ನವರಾತ್ರಿ ಹಬ್ಬದ ಐದನೆ ದಿನ ಸೋಮವಾರ ಪಾರ್ವತಿ ಅಮ್ಮನವರು ಶ್ರೀಗಂಧ ಲೇಪಿತಳಾಗಿ ಭವ್ಯವಾಗಿ ಕಾಣಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಇಂದು ವಿಶೇಷವಾಗಿ ಸಂಪೂರ್ಣ ಗಂಧ ಲೇಪಿಸಿ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಶ್ರೀಗಂಧದಿಂದ ಅಲಂಕರಿಸಿ ಬೆಳ್ಳಿಯ ಕೈಗಳನ್ನು ಜೋಡಿಸಲಾಗಿತ್ತು ಹೂಗಳು ಮತ್ತು ಹಣ್ಣುಗಳು‌ ಅದರಲ್ಲೂ ಬೂದುಗುಂಬಳಕಾಯಿ ಹಾಗೂ ಬಳೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಅಭಯಹಸ್ತ ನೀಡುತ್ತಾ ಶಾಂತ ಮುದ್ರೆಯಲ್ಲಿ ಕುಳಿತಿರುವುದನ್ನು ನೋಡುವುದೇ ಆನಂದ

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.