ಮೈಸೂರು: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ತವರೂರಿಗೆ ವಾಪಸಾದ ಮೈಸೂರು ನಗರದ ಸೈನಿಕ ಗಿರೀಶ್ ಆರಾಧ್ಯ ಅವರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಹುಣಸೂರು ತಾಲೂಕು,ಬಿಳಿಕೆರೆ ಹೋಬಳಿ
ಗಿರೀಶ್ ಆರಾಧ್ಯ ಅವರು
ಜಮ್ಮು ಕಾಶ್ಮೀರ, ಸಿಕ್ಕಿಮ್ ಸೇರಿದಂತೆ ಹಲವಾರು ಕಡೆ ದೇಶ ಸೇವೆ ಮಾಡಿದ್ದಾರೆ, ರಾಂಚಿ, ಜಾರ್ಕಂಡ್ ನಲ್ಲಿ ರಿಟೈಡ್ ಆಗಿ ಮೈಸೂರಿಗೆ ಆಗಮಿಸಿದ ಅವರಿಗೆ ಸ್ನೇಹಿತರು ಪಟಾಕಿ ಸಿಡಿಸಿ ಹೂಗೊಚ್ಚ ನೀಡಿ
ಆತ್ಮೀಯವಾಗಿ ಸ್ವಾಗತಿಸಿದರು.
ದಿವಾಕರ್ ಆರಾಧ್ಯ, ನಟೇಶ್ ಆರಾಧ್ಯ ,
ರವೀಶ್ ಆರಾಧ್ಯ,ಬಸವಆರಾಧ್ಯ ಮತ್ತಿತರ ಸ್ನೇಹಿತರು, ಬಂಧುಗಳು ಹಾಜರಿದ್ದು ಗಿರೀಶ್ ಆರಾಧ್ಯ ಅವರನ್ನು ಬರಮಾಡಿಕೊಂಡರು.