ಭವಿಷ್ಯದ ಸೈನಿಕರಿಂದ ನೇತಾಜಿ ಜನ್ಮ ದಿನಾಚರಣೆ

Spread the love

ಮೈಸೂರು: ಮೈಸೂರಿನ ಬೆಳವಾಡಿ
ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿ ಸೈನಿಕ ಅಕಾಡೆಮಿ ವತಿಯಿಂದ ಭವಿಷ್ಯದ ಸೈನಿಕರೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ
ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ರವರು ಮಾತನಾಡಿ, ಬೋಸ್ ಜಿ ಅವರು ಭಾರತದ ಮೊದಲ ಸೇನಾಧ್ಯಕ್ಷರು.ಇದನ್ನು ಹೇಳಲು ನನಗೆ ಖುಷಿ ಎಂದು ತಿಳಿಸಿದರು.

ನೇತಾಜಿ ಯಾವುದೇ ಸರ್ಕಾರದ ಸಹಾಯ ಪಡೆಯದೇ 25 ಸಾವಿರಕ್ಕೂ ಹೆಚ್ಚು ಸೈನಿಕರನ್ನು ತಯಾರಿಸಿ ಬ್ರಿಟಿಷರ ವಿರುದ್ದ ಯುದ್ಧ ಘೋಷಣೆ ಮಾಡಿ ಬ್ರಿಟಿಷರಿಗೆ ನಡುಕ ಉಂಟುಮಾಡಿದ್ದರು, ಇಂತಹ ಮಹಾ ಪರಾಕ್ರಮಿಯ ಬಗ್ಗೆ ಎಷ್ಟು ಹೇಳಿದರು ಸಾಲದು, ಒಟ್ಟಾರೆ ಬ್ರಿಟಿಷರು ಭಾರತ ಬಿಟ್ಟು ತೊಲುಗಲು ಮುಖ್ಯ ಕಾರಣ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಎಂದು ಶ್ರೀಧರ ಸಿ ಎಂ ತಿಳಿಸಿದರು.