ಹುತಾತ್ಮರಾದ ರಾಮಸ್ವಾಮಿ ಸಂಸ್ಮರಣೆ

Spread the love

ಮೈಸೂರು: ಮೈಸೂರು ರಾಜ್ಯದ ಪ್ರಜಾಪ್ರಭುತ್ವಕ್ಕಾಗಿ ನಡೆದ ವಿದ್ಯಾರ್ಥ ಸಂಘಟನೆಯ ಹೋರಾಟದಲ್ಲಿ ಹುತಾತ್ಮರಾದ ರಾಮಸ್ವಾಮಿ ಅವರನ್ನು ಯುವಭಾರತ್ ಸಂಘಟನೆಯಿಂದ ಸ್ಮರಿಸಲಾಯಿತು

ಯುವಭಾರತ್ ಸಂಘಟನೆಯ ವತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಹುತಾತ್ಮ ರಾಮಸ್ವಾಮಿ ದಿವಸ್ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,

ರಾಮಸ್ವಾಮಿ ಸ್ಮಾರಕಕ್ಕೆ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಅವರು ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಇಳೈ ಆಳ್ವಾರ್ ಸ್ವಾಮೀಜಿ ಅವರು ಮಾತನಾಡಿ ಭಾರತಕ್ಕೆ‌ ಸ್ವಾತಂತ್ರ್ಯ ದೊರೆತ ನಂತರ ಮೈಸೂರು ರಾಜ್ಯಕ್ಕೆ ಪ್ರಜಾಪ್ರಭುತ್ವ ಸ್ವಾತಂತ್ರ್ಯ ನೀಡಬೇಕೆಂದು‌ ಆಗ್ರಹಿಸಿ‌ ನಡೆದ ವಿದ್ಯಾರ್ಥಿ ಚಳವಳಿಗಳಲ್ಲಿ 1947ರ ಸೆಪ್ಟಂಬರ್ 13ರಂದು ಭಾರತ ತ್ರಿವರ್ಣ ಧ್ವಜ ಹಾರಿಸಿ‌ ಮೈಸೂರು ರಾಜ್ಯದ ಕಮೀಷನರ್ ನಾಗರಾಜರಾಯರ ಗುಂಡೇಟಿಗೆ ರಾಮಸ್ವಾಮಿ ಬಲಿಯಾದರು ಎಂದು ಸ್ಮರಿಸಿದರು.

ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ ಹಾರ್ಡ್ವಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ರಾಮಸ್ವಾಮಿ ಅವರು ಅಂದಿನ ಫೈವ್ ಲೈಟ್ ವೃತ್ತದಲ್ಲಿ (ರಾಮಸ್ವಮಿ ಸರ್ಕಲ್) ಧ್ವಜವನ್ನ ಧೈರ್ಯವಾಗಿ ಹಿಡಿದು ಕಂಬವನ್ನೇರಿ ಹಾರಿಸಿ ಪ್ರಾಣಬಿಟ್ಟರು, ಅವರ ಹೋರಾಟ,ತ್ಯಾಗ ದೇಶಪ್ರೇಮವನ್ನ ಸ್ಮರಿಸಿ ಪ್ರತಿವರ್ಷ ಹುತಾತ್ಮ ದಿವಸ್ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್ ಮಾತನಾಡಿ ರಾಮಸ್ವಾಮಿ ವೃತ್ತವನ್ನ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ರಾಮಸ್ವಾಮಿ ರವರ ಜೀವನಚರಿತ್ರೆ ಮಾಹಿತಿಯ ನಮಫಲಕ ಅಳವಡಿಸಲು ದಸರಾ ಸಂಧರ್ಭದಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು.

ಮತ್ತು ಹಳೇ ಮೈಸೂರಿನ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಹಿತಿಗಳು ಕವಿಗಳು ಕಲಾವಿದರು ಸಹಕಾರಿಗಳು ಶಿಕ್ಷಣ ವಿದ್ವಾಂಸರು ಉದ್ಯಮಿಗಳು ಮೈಸೂರಿನ ಅಸ್ಮಿತೆ ಕೀರ್ತಿಯನ್ನ ಶತಮಾನದ ಹಿಂದೆಯೇ ಹಚ್ಚಿಸಿದ್ದಾರೆ ಅವರ ಇತಿಹಾಸ ಕೊಡುಗೆಯನ್ನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಜಿಲ್ಲಾಡಳಿತ, ನಗರಪಾಲಿಕೆ ಕನ್ನಡ ಸಂಸ್ಕೃತಿ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ನಗರಪಾಲಿಕೆ ಮಾಜಿ ಸದಸ್ಯ ಮಾ. ವಿ ರಾಮಪ್ರಸಾದ್, ಯುವ ಭಾರತ್ ಸಂಘಟನೆಯ ಅಧ್ಯಕ್ಷ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಮುಡ ಮಾಜಿ ಸದಸ್ಯ ನವೀನ್ ಕುಮಾರ್, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಂ ಆರ್ ಬಾಲಕೃಷ್ಣ, ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಮಾರ್ಟ್ ಮಂಜು, ಸುದರ್ಶನ್, ಶ್ರೀನಿವಾಸ್, ಚರಣ್, ಚಕ್ರಪಾಣಿ, ಮಿರ್ಲೆ ಪಣೀಷ್, ಸುಚಿಂದ್ರ, ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.