ಮನೆ ಬಾಗಿಲು ಮೀಟಿ 1.30 ಲಕ್ಷ ರೂ ದೋಚಿದ ಕಳ್ಳರು

Spread the love

ಮೈಸೂರು:ನ.3: ಮನೆ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು 1.30 ಹಣ 1 ಮೊಬೈಲ್ ಮತ್ತು ಬೆಳ್ಳಿತಟ್ಟೆ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಡೀಲರ್ ಆಗಿರುವ ಯಶವಂತ್ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ.

ಯಶವಂತ್ ಅವರು ಬೆಂಗಳೂರಿಗೆ ಹೋಗಿದ್ದ ವೇಳೆ ಕಳ್ಳರು ಬಾಗಿಲು ಮೀಟಿ 1.30 ಲಕ್ಷ ನಗದು,5 ಸಾವಿರ ಮೌಲ್ಯದ ಮೊಬೈಲ್ ಮತ್ತು ಬೆಳ್ಳಿ ತಟ್ಟೆ ದೋಚಿದ್ದಾರೆ.

ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.