ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಕ್ಯಾತೆ; ಗುದ್ದಲಿಯಿಂದ ಹಲ್ಲೆ:ಎಫ್ಐಆರ್

Spread the love

ಕೆ.ಆರ್.ನಗರ: ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಮಾರ್ ಎಂಬವರು ಒಳಗಾಗಿ ಗಾಯಗೊಂಡಿದ್ದಾರೆ.

ಹಲ್ಲೆ ನಡೆಸಿದ ಹರೀಶ್ ಹಾಗೂ ಮಹೇಶ್ ಎಂಬುವರ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಒಂದು ಎಕರೆ ಗದ್ದೆ ಕುಮಾರ್ ಗೆ ಸೇರಿದ್ದು,ಪಕ್ಕದ ಜಮೀನನ್ನು ರಾಂಪುರದ ಹರೀಶ್ ಭೋಗ್ಯಕ್ಕೆ ಪಡೆದಿದ್ದಾರೆ,
ದೊಡ್ಡಕಾಲುವೆಯಿಂದ ಜಮೀನಿಗೆ ನೀರು ಹಾದುಹೋಗುವ ಬದುವನ್ನ ಕುಮಾರ್ ಕೆತ್ತುತ್ತಿದ್ದಾಗ ಹರೀಶ್ ಬಂದು ಕ್ಯಾತೆ ತೆಗೆದಿದ್ದಾರೆ.

ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೈಯಲ್ಲಿ ಹಿಡಿದಿದ್ದ ಗುದ್ದಲಿಯಿಂದ ಕುಮಾರ್ ಮೇಲೆ ಹರೀಶ್ ಹಲ್ಲೆ ನಡೆಸಿದ್ದಾರೆ,ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹರೀಶ್ ಗೆ ಮಹೇಶ್ ಸಾಥ್ ನೀಡಿದ್ದಾರೆಂದು ಹಲ್ಲೆಗೊಳಗಾದ ಕುಮಾರ್ ಪತ್ನಿ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಹರೀಶ್ ಹಾಗೂ ಮಹೇಶ್ ವಿರುದ್ದ ದೂರು ನೀಡಿದ್ದಾರೆ.